i
ವೀಲ್ ಚೇರ್ ಕ್ರಿಕೆಟ್ ನ್ಯಾಷನಲ್ ಟೀಮ್ ಗೆ ಆಯ್ಕೆಯಾದ ಹಿರಿಯೂರಿನ ಗ್ರಾಮೀಣ ಪ್ರತಿಭೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಓಬಳಾಪುರ ಗ್ರಾಮದ ನಟರಾಜ್. ಆರ್ ಎಂಬ ದಲಿತ ಸಮುದಾಯದ ಯುವ ಪ್ರತಿಭೆ “ವಿಕಲಚೇತನ ವೀಲ್ ಚೇರ್ ಕ್ರಿಕೆಟ್ ನ್ಯಾಷನಲ್” ಟೀಮ್ ಗೆ ಆಯ್ಕೆಯಾಗಿರುವುದರಿಂದ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ರವರು ಓಬಳಾಪುರ ಗ್ರಾಮಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಸಾಧಕ ನಟರಾಜ ಅವರನ್ನು ಸನ್ಮಾನಿಸಿ ಆರ್ಥಿಕ ಸಹಾಯ ನೀಡಿ ಹಾರೈಸಿದರು.
ಕ್ರೀಡಾಪಟು ನಟರಾಜ್ ಅವರು ಉತ್ತಮವಾಗಿ ಸ್ಪರ್ಧೆ ನೀಡಿ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕು, ಇದಕ್ಕಾಗಿ ತಾವು ಅವರಿಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಹಾಲಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಸಿ.ಹನುಮಂತೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಈರಣ್ಣ ಹಾಗೂ ಕಾಂತರಾಜ್, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.