i
ಕನ್ನಡಿಗರ ಹೆಮ್ಮೆಯ ನಂದಿನಿ ಗುಜರಾತ್ ನಲ್ಲಿ ವಿಲೀನ, ದೊಡ್ಡ ಹೋರಾಟಕ್ಕೆ ಸಜ್ಜಾಗಿ ಕನ್ನಡಿಗರೇ….
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದಲ್ಲಿ ಅತಿ ಹೆಚ್ಚಿನ ಜಿಎಸ್ ಟಿ ನೀಡುವ ಕರ್ನಾಟಕದ ನಂದಿನಿ ಹಾಲಿನ ಮೇಲೂ ಗುಜರಾತಿಗಳ ಕಣ್ಣು ಬಿದ್ದಿದ್ದು ಕನ್ನಡಿಗರ ಮನೆ ಮತಾಗಿರುವ ಕನ್ನಡಿಗರ ಹೆಮ್ಮೆಯ ನಂದಿನಿ ಹಾಲು ಮತ್ತು ಅದರ ಎಲ್ಲ ಉತ್ಪನ್ನಗಳನ್ನ ಗುಜರಾತ್ನ ಅಮುಲ್ ಜೊತೆಗೆ ಕರ್ನಾಟಕ ಹಾಲು ಮಹಾಮಂಡಳಿ (KMF- ನಂದಿನಿ)ಯನ್ನ ಒಂದುಗೂಡಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ದೇಶದ ಗೃಹ ಸಚಿವ, ಗುಜರಾತಿ ಅಮಿತ್ ಶಾ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಮತ್ತೊಮ್ಮೆ ಕಿಚ್ಚು ಹಾಕಿದ್ದಾರೆ.
ಗುಜರಾತಿನ ಅಮುಲ್ ಹಾಗೂ ಕರ್ನಾಟಕದ ಹೆಮ್ಮೆಯ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಅಂತ ಅಮಿತ್ ಶಾ ಹೇಳಿದ್ದಾರೆ. ಆದರೆ ಕನ್ನಡಿಗರ ಬ್ಯಾಂಕ್ ಗಳನ್ನ ವಿಲೀನ ಮಾಡಿಕೊಂಡ ದೇಶದಲ್ಲಿ ಆಗಿದ್ದೇನು ಎನ್ನುವುದು ಎಲ್ಲರಿಗೂ ತಿಳಿದಿದೆ. ಅತ್ಯಂತ ಲಾಭದಾಯಕವಾಗಿರುವ ನಂದಿನಿ ಕೆಎಂಎಫ್ ಸಂಸ್ಥೆಯನ್ನು ಅಮೂಲ್ ನೊಂದಿಗೆ ವಿಲೀನ ಮಾಡುವ ಶಾ ಅವರ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಕೇವಲ ವಿರೋಧ ವ್ಯಕ್ತವಾದರೆ ಸಾಲದು ಗೋಕಾಕ್ ಚಳುವಳಿ ಮಾದರಿಯಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾದ ಅಗತ್ಯ, ಅನಿವಾರ್ಯತೆಯನ್ನು ಅಮಿತ್ ಶಾ ರಾಜ್ಯದಲ್ಲಿ ಸೃಷ್ಠಿಸಿದ್ದಾರೆ.
ಗುಜರಾತಿನ ಅಮುಲ್ ಇಲ್ಲದೆಯೂ KMF ಉತ್ತಮ ರೀತಿಯಲ್ಲಿ ಅಭಿವೃದ್ದಿಯಾಗುತ್ತೆ. ಅಮುಲ್ಗೆ ನಂದಿನಿ ಒಳ್ಳೆ ಪ್ರತಿಸ್ಪರ್ಧಿಯಾಗುತ್ತೆ ಹೊರತು ಅಂಗಸಂಸ್ಥೆಯಲ್ಲ. ಇತ್ತ KMFನ ಸ್ವಾಯತ್ತತೆಗೆ ಧಕ್ಕೆಯಾಗಬಾರದು. ಬ್ಯಾಂಕ್ ಆಫ್ ಬರೋಡಾದ ಜೊತೆ ಸೇರಿದ ವಿಜಯಾ ಬ್ಯಾಂಕ್ ಹಾಗೂ SBI ಜೊತೆ ವಿಲೀನವಾದ SBM ಬ್ಯಾಂಕ್ಗಳ ನೂರಾರು ವರ್ಷಗಳ ಇತಿಹಾಸ ಮೂಲೆಗೆ ಸೇರಿದಂತೆ ಇಲ್ಲೂ ಆಗುತ್ತೆ ಅಂತ ಕನ್ನಡಪರ ಚಿಂತಕರೂ ಅಭಿಪ್ರಾಯ ಪಟ್ಟಿದ್ದಾರೆ. ಹೇಳಿ ಎದ್ದೇಳಿ ಕನ್ನಡಿಗರೇ ಗುಜರಾತಿ ಬೀಜ ಮೊಳಕೆ ಹೊಡೆಯುವ ಮುನ್ನವೇ ಕನ್ನಡದ ಕಟ್ಟಾಳುಗಳು ಹೋರಾಟ ಮಾಡಿ ದಿಟ್ಟ ಉತ್ತರ ನೀಡಬೇಕಾಗಿದೆ.