i
ಜಾರಿದ ಸಿಹಿ ಕ್ಷಣಗಳೆಲ್ಲ ಮರಳಿ ಕೈಸೇರಲಿ-ಹೇಮಲತ, ಶಿಕ್ಷಕಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸ ವರ್ಷದ ಕುರಿತು ಹೇಳುತ್ತಾ ಹೋದರೆ ಪದಗಳು ಮುಗಿಯುವುದಿಲ್ಲ. ಬರೆದಷ್ಟು ಮೂಡುವ ಆಲೋಚನೆಗಳು ಕಣ್ಣಮುಂದಿವೆ. ಜೂಲಿಯನ್ ಕ್ಯಾಲೆಂಡರ್ ಆಗಮನದ ನಂತರ ಪ್ರತಿ ವರ್ಷ ಜನವರಿ 1 ರಂದು ಹೊಸ ವರ್ಷವನ್ನು ಆಚರಿಸಲಾಗುತ್ತಿದೆ. ವರ್ಷದಲ್ಲಿ 365 ದಿನಗಳಿವೆ, ಅದು ಪೂರ್ಣಗೊಂಡ ನಂತರ ಹೊಸ ವರ್ಷವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಪ್ರಸ್ತುತ ಪ್ರಪಂಚದಾದ್ಯಂತ ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವದಿಂದಾಗಿ ಎಲ್ಲರೂ ಜನವರಿ 1 ಅನ್ನು ಹೊಸ ವರ್ಷವೆಂದು ಆಚರಿಸುತ್ತಾರೆ. ಹೆಚ್ಚಿನ ದೇಶಗಳಲ್ಲಿ ಜನವರಿ 1 ರಂದು ಹೊಸ ವರ್ಷವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದಿನದಂದು ಸುಂದರವಾದ ಉಡುಗೊರೆಗಳು ಮತ್ತು ಗ್ರೀಟಿಂಗ್ಸ್ ಗಳನ್ನು ನೀಡುವ ಮೂಲಕ ಮಕ್ಕಳು ಸಂತೋಷಪಡುತ್ತಾರೆ. ಹೊಸ ವರ್ಷದ ಶುಭ ಸಂದರ್ಭದಲ್ಲಿ ಶಾಲೆಯಲ್ಲಿ ಗಾಯನ, ನೃತ್ಯ, ಚರ್ಚೆ, ರಂಗೋಲಿ, ಕ್ರೀಡೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ .ಹೊಸ ವರ್ಷವು ಪ್ರಸ್ತುತ ಹೊಸ ಕ್ಯಾಲೆಂಡರ್ ವರ್ಷ ಪ್ರಾರಂಭವಾಗುವ ಸಮಯ ಅಥವಾ ದಿನವಾಗಿದೆ ಮತ್ತು ಕ್ಯಾಲೆಂಡರ್ನ ವರ್ಷದ ಎಣಿಕೆಯು ಒಂದರಿಂದ ಏರಿಕೆಯಾಗುತ್ತದೆ.
ಪ್ರತಿ ದೇಶಕ್ಕೂ ಮತ್ತು ಪ್ರತಿಯೊಬ್ಬ ವ್ಯಕ್ತಿಗಳಲ್ಲೂ ಹೊಸ ವರ್ಷಕ್ಕೆ ಹೆಚ್ಚಿನ ಮಹತ್ವವಿದೆ. ಹೊಸ ವರ್ಷವು ಹೊಸ ಕೆಲಸವನ್ನು ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ. ಇದು ನವೀಕೃತ ಉತ್ಸಾಹ ಮತ್ತು ಸಂತೋಷದಿಂದ ಜೀವನವನ್ನು ನಡೆಸಲು ನಮಗೆ ಶಕ್ತಿಯನ್ನು ನೀಡುತ್ತದೆ.ವರ್ಷದ ಮೊದಲ ದಿನವನ್ನು ಉತ್ಸಾಹ ಮತ್ತು ಸಂತೋಷದಿಂದ ಆಚರಿಸಿದರೆ, ಇಡೀ ವರ್ಷವು ಅದೇ ಉತ್ಸಾಹ ಮತ್ತು ಸಂತೋಷದಿಂದ ಕಳೆಯುತ್ತದೆ ಎಂದು ನಂಬಲಾಗಿದೆ. ಹೊಸ ವರ್ಷವು ನಮಗೆ ಹೊಸ ಭರವಸೆಗಳು, ನಿರೀಕ್ಷೆಗಳು, ಹೊಸ ಕನಸುಗಳು, ಹೊಸ ಗುರಿಗಳು ಮತ್ತು ಹೊಸ ಆಲೋಚನೆಗಳು ಭರವಸೆಯನ್ನು ನೀಡುತ್ತವೆ, ಆದ್ದರಿಂದ ಅದನ್ನು ಸಂತೋಷದಿಂದ ಸ್ವಾಗತಿಸಲಾಗುತ್ತದೆ.
ಹೊಸ ವರ್ಷದಲ್ಲಿ ನಾವು ಹಿಂದಿನ ವರ್ಷದಲ್ಲಿ ಮಾಡಿದ ತಪ್ಪುಗಳಿಂದ ಕಲಿಯುತ್ತೇವೆ. ನಂತರ ಹೊಸ ನಿರ್ಣಯ ಅಥವಾ ಪ್ರತಿಜ್ಞೆ ಮಾಡಿ ಪೂರ್ಣ ಶಕ್ತಿಯಿಂದ ಕೆಲಸವನ್ನು ಪೂರ್ಣಗೊಳಿಸಲು ಪ್ರಾರಂಭಿಸುತ್ತೇವೆ, ಅದು ನಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಇದು ನಮ್ಮಲ್ಲಿ ಹೊಸ ಚೈತನ್ಯವನ್ನು ತರುವ ಹಬ್ಬದಂತಿದೆ. ಇದರಿಂದಾಗಿ ನಮ್ಮ ಜೀವನದಲ್ಲಿ ಹೊಸ ವರ್ಷದ ಮಹತ್ವವು ಹೆಚ್ಚಾಗುತ್ತದೆ.
ಪ್ರತಿಯೊಂದು ಹಳೆ ವರ್ಷ ಮುಗಿದು ಹೊಸ ವರ್ಷ ಬರಬೇಕಾದರೆ ನಿಮಗೆ ನೀವೆ ಒಂದು ಚೂರು ಪ್ರಶ್ನೆ ಕೇಳಿಕೊಳ್ಳಿ..
ಈ ಒಂದು ವರ್ಷದಲ್ಲಿ ನಾನು ಏನೇನು ಮಾಡಿದೆ, ಜನಕ್ಕೆ ಎಷ್ಟು ಒಳ್ಳೇದು ಮಾಡ್ಡೆ
ನಿಮಗೆ ಎಷ್ಟು ಜನ ಒಳ್ಳೇದು ಮಾಡಿದ್ರೂ ಅದನ್ನ ಮರಿಬೇಡಿ ..ಹೊಸದೊಂದು ಹೊಸತನದ ಆರಂಭ , ಹಳೆಯ ಕಹಿ ಕ್ಷಣಗಳೆಲ್ಲ ಅಳಿಯಲಿ , ಜಾರಿದ ಸಿಹಿ ಕ್ಷಣಗಳೆಲ್ಲ ಮರಳಿ ಕೈಸೇರಲಿ , ಎಲ್ಲರ ಬಾಳ ಅಂಧಕಾರ ಕಳೆಯಲಿ , ನವ ವಸಂತವು ಸರ್ವರ ಬಾಳು ಬೆಳಗಲಿ … …….ಹೊಸ ವರ್ಷ ಬರೀ ಕ್ಯಾಲೆಂಡರ್ ಬದಲಾಯಿಸುವ ಕ್ಷಣ ಅಲ್ಲ. ನಮ್ಮ ಬದುಕಿನ ಹೊಸ ಹೆಜ್ಜೆಯತ್ತ ಸಾಗುವ ಹೊತ್ತು ಕೂಡಾ ಹೌದು. ಮತ್ತೆ ನಮಗೆ ಅದೇ 365 ದಿನಗಳು ಸಿಗುತ್ತವೆ. ಈ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ. ಜತೆಗೆ, ಕಳೆದ ವರ್ಷದತ್ತ ಒಮ್ಮೆ ಹಿಂತಿರುಗಿ ನೋಡಿ ಅವಲೋಕನ ಮಾಡಿಕೊಳ್ಳುವುದು ಕೂಡಾ ಮುಖ್ಯ. ಈ ಸಿಂಹಾವಲೋಕನ ಕಳೆದ ವರ್ಷದ ನಮ್ಮ ತಪ್ಪುಗಳನ್ನು ಅರಿತುಕೊಳ್ಳಲು, ಆದ ತಪ್ಪನ್ನು ತಿದ್ದಿಕೊಳ್ಳಲು ಅಥವಾ ನಾವು ಭವಿಷ್ಯದಲ್ಲಿ ಇಡಬೇಕಾದ ಹೆಜ್ಜೆಗೆ ದಾರಿಯನ್ನು ತೋರಿಸುವ ಅವಕಾಶದಂತಿರುತ್ತದೆ.
ನಮ್ಮ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರಲಿ ಎಂದು ಮನಸ್ಸು ಬಯಸುವುದು, ಅದರಂತೆ ಹೊಸ ವರ್ಷದಂದು ನಮ್ಮ ಸ್ನೇಹಿತರು, ಬಂಧು ಬಳಗಕ್ಕೆ ಈ ವರ್ಷ ನಿಮಗೆ ಒಳಿತನ್ನೇ ಮಾಡಲಿ ಎಂದು ತುಂಬ ಮನಸ್ಸಿನಿಂದ ಹಾರೈಸುತ್ತೇವೆ.
ಹೊಸ ವರ್ಷವು ಜನರು ತಮ್ಮ ಎಲ್ಲಾ ಕೆಟ್ಟ ಅನುಭವಗಳನ್ನು ಹಿಂದೆ ಹಾಕಲು ಮತ್ತು ಭವಿಷ್ಯದಲ್ಲಿ ಸಕಾರಾತ್ಮಕ ಹೆಜ್ಜೆ ಇಡುವ ಸಮಯವಾಗಿದೆ. ಮುಂಬರುವ ಹೊಸ ವರ್ಷದಲ್ಲಿ ಪ್ರತಿಯೊಬ್ಬರೂ ತಮ್ಮ ಮತ್ತು ತಮ್ಮ ಪ್ರೀತಿಪಾತ್ರರ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ.
ಭಾರತದಲ್ಲಿ ಪ್ರತಿಯೊಬ್ಬರೂ ತಮ್ಮ ಧರ್ಮದ ಆಧಾರದ ಮೇಲೆ ವಿವಿಧ ದಿನಗಳಲ್ಲಿ ಹೊಸ ವರ್ಷವನ್ನು ಆಚರಿಸುತ್ತಾರೆ. ಅದೇನೇ ಇದ್ದರೂ, ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವದಿಂದಾಗಿ, ಹೆಚ್ಚಿನ ಜನರು ಈಗ ಜನವರಿ 1 ರಂದು ಹೊಸ ವರ್ಷದ ದಿನವನ್ನು ಆಚರಿಸುತ್ತಾರೆ . ಗತಕಾಲದಿಂದ ಕಲಿತು, ಭವಿಷ್ಯದ ಬಗ್ಗೆ ಕನಸು ಕಾಣುತ್ತೇವೆ. ಶುಭಾಶಯಗಳಿಂದ ಯಶಸ್ಸು ಲಭಿಸುತ್ತದೆ ಎಂದು ಖಾತರಿಯೇನಿಲ್ಲ, ಆದರೆ, ಯಶಸ್ಸಿನ ಹಾದಿಯಲ್ಲಿ ಸಾಗಲು, ಯಶಸ್ಸಿನ ಹಾದಿಯನ್ನು ಬೆಳಗಿಸಿ ಪಯಣ ಹಗುರಾಗಿಸಲು ಸಹಕಾರಿಯಾಗುತ್ತದೆ. ನಿರ್ಣಯಗಳನ್ನು ಸದಾಕಾಲ ಪೂರ್ಣಗೊಳಿಸಬೇಕಾಗಿಲ್ಲ, ಆದರೆ, ನಮ್ಮ ಗುರಿ ಸಾಧನೆ ಬಗ್ಗೆ ನೆನಪಿಸುತ್ತವೆ.
ಹೊಸ ವರ್ಷವು ಜೀವನದ ಮೇಲೆ ಹೊಸ ದೃಷ್ಟಿಕೋನವನ್ನು ಹೊಂದಿದೆ. ನಮ್ಮನ್ನು ನಾವು ಪರಾಮರ್ಶೆಗೊಳಿಸಿಕೊಂಡು ನಮ್ಮ ಮನಸ್ಸಿನಲ್ಲಿ ಹಲವಾರು ಯೋಜನೆಗಳನ್ನು ತಂದು ಕೊಡುತ್ತದೆ.. ನಾವು ಹಿಂದೆ ಮಾಡಿದ ತಪ್ಪಿನ ಕಾರಣಗಳನ್ನು ಹುಡುಕಲು ಅದು ಸೂಕ್ತವಾದ ಸಮಯವಾಗಿರುತ್ತದೆ.. ಭವಿಷ್ಯದಲ್ಲಿ ನಮ್ಮ ತಪ್ಪುಗಳು ಮರುಕಳಿಸದಂತೆ ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕಲು ಉತ್ತಮವಾದ ಅವಕಾಶ.. ಈ ಅವಕಾಶವನ್ನು ಬಳಸಿಕೊಂಡು ಹೊಸವರ್ಷದ ಸಮಯದಲ್ಲಿ ನಿಮ್ಮ ಹಿಂದಿನ ಜೀವನದ ತಪ್ಪುಗಳನ್ನು ತೊಡೆದುಹಾಕಿ ಭವಿಷ್ಯದ ಬಗ್ಗೆ ಆಲೋಚನೆ ಮಾಡುವುದರಿಂದ ಹೊಸ ವರ್ಷದಲ್ಲಿ ಹೊಸ ಜೀವನ ಆರಂಭ ಮಾಡುವ ಅವಕಾಶ ನಿಮ್ಮದಾಗಲಿದೆ.
ಪ್ರತಿಬಾರಿಯೂ, ಜಗತ್ತು ಹೊಸವರ್ಷವೊಂದನ್ನ ಬರಮಾಡಿಕೊಳ್ಳುವ ಹೊಸ್ತಿಲಲ್ಲಿರುವಾಗ, ಜಗತ್ತಿನ ಬೇರೆ ಬೇರೆ ದೇಶಗಳು ಹೊಸವರ್ಷವನ್ನ ಸ್ವಾಗತಿಸುವ ಪರಿ ಬೇರೆ ಬೇರೆಯದ್ದಾಗಿರುತ್ತದೆ. ಅದು ಆಯಾ ದೇಶದ ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ಸಾಂಸ್ಕೃತಿಕ ಹಿನ್ನೆಲೆಗಳನ್ನ ಅವಲಂಬಿಸಿಕೊಂಡಿರುತ್ತದೆ. ಸಂಭ್ರಮಾಚರಣೆಗಳ ಸ್ವರೂಪಗಳು ವಿಭಿನ್ನವಾಗಿದ್ದರೂ, ಅವೆಲ್ಲದರ ಆಶಯ ಹಾಗೂ ನಂಬಿಕೆ ಒಂದೇ: ಮುಂಬರುವ ಹೊಸ ವರ್ಷ ಸಮಸ್ತ ಜಗತ್ತಿಗೆ ಶಾಂತಿ, ನೆಮ್ಮದಿ, ಆರೋಗ್ಯ, ಸೌಭಾಗ್ಯಗಳನ್ನ ಹೊತ್ತು ತರಲಿ ಎಂಬುದಾಗಿದೆ. . ಜಗತ್ತಿನ ಆಯ್ದ ಕೆಲ ವಿಭಿನ್ನ ರಾಷ್ಟ್ರಗಳು ತಮ್ಮದೇ ಆದ ವೈಶಿಷ್ಟ್ಯಗಳೊಂದಿಗೆ ಹೊಸ ವರ್ಷವನ್ನು ಎದುರುಗೊಳ್ಳುತ್ತವೆ. ಸರಿ ಹಾಗಾದರೆ! ಇನ್ನು ತಡ ಏಕೆ ?! 2022 ಕಳೆದು 2023 ರ ಆಗಮನಕ್ಕೆ ಬೆರಳೆಣಿಕೆಯಷ್ಟೇ ಸಮಯ ಇರೋವಾಗ, 2022 ರ ದುಃಸ್ವಪ್ನ ಕಳೆದು, 2023 ಮನುಕುಲಕ್ಕೆ ಹೊಸಬೆಳಕನ್ನ ಮೂಡಿಸಲೆಂಬ ಆಶಯ ಹೊಂದೋಣ. 2023 ರ ಹೊಸ ವರ್ಷದ ರಾಶಿಫಲ ನೋಡುವುದರ ಬದಲು ಹೊಸ ಆಲೋಚನೆಗಳನ್ನು ಬೆಳೆಸಿಕೊಳ್ಳೋಣ.
ಈಗ ಕಾಡುವ ಒಂದು ಪ್ರಶ್ನೆಯೇನೆಂದರೆ ನಮ್ಮ ಕೈಗೂಡದ ಆಸೆಗಳ ಪೂರೈಕೆಗೆ ಹೊಸ ವರ್ಷಕ್ಕೆ ಕಾಯಬೇಕೇ? ಇನ್ನು ನಾವು ಹೊಸ ವರ್ಷವನ್ನು ಅಷ್ಟೊಂದು ಸಂಭ್ರಮದಿಂದ, ಸಡಗರದಿಂದ ಆಚರಿಸಲು ಕಾರಣವಾದರೂ ಏನು? ಎಂಬ ಪ್ರಶ್ನೆಗೆ ಉತ್ತರವಾಗಿ ನೋಡುವುದಾದರೆ,
ಈ ಹೊಸ ವರ್ಷದ ಆಚರಣೆ ಸಂಪ್ರದಾಯವು ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿದೆ. ವಿವಿಧ ಪಂಗಡದ ಜನರ ಸಂಪ್ರದಾಯಗಳು ಮತ್ತು ಸಂಸ್ಕೃತಿ ಅದಾಗಿದೆ. ವಿವಿಧ ಜನರ ಶೈಲಿ ಮತ್ತು ಪದ್ಧತಿಗಳಲ್ಲಿ ಸ್ವಲ್ಪ ಭಿನ್ನತೆಯಿದ್ದರೂ, ಹೊಸ ವರ್ಷದ ಆಚರಣೆ ಬಂತೆಂದರೆ ಸಾಕು ಎಲ್ಲರದ್ದೂ ಒಂದೇ ರೂಪ, ಒಂದೇ ಗುರಿ. ಪ್ರತಿ ವರ್ಷದ ಜನವರಿ ಒಂದರಂದು ಹೊಸ ವರ್ಷದ ಆಚರಣೆ ಶುರುವಾಗುತ್ತದೆ.ಹೊಸ ವರ್ಷವನ್ನು ಹೊಸ ಜೀವನದೊಂದಿಗೆ ಆರಂಭಿಸಲು ಜನತೆ ಬಯಸುತ್ತಾರೆ. ಅದು ಮಾನವನ ಸಹಜ ಸ್ವಭಾವ. ಜನರು ಹೊಸತಿನ ಬಗ್ಗೆ ಹೊಸ ವಿಷಯಗಳನ್ನು ನಿರೀಕ್ಷಿಸುತ್ತಾರೆ. ಈ ಪರಿಕಲ್ಪನೆಯು ನ್ಯೂ ಇಯರ್ಗೆ ಅನ್ವಯವಾಗುತ್ತದೆ. ಹಳೆಯ ವರ್ಷದಲ್ಲಿ ಮಾಡಲಾಗದ್ದನ್ನು ಈ ವರ್ಷ ಮಾಡಿ ತೋರಿಸುವುದಾಗಿ ಕೆಲವರು ಹೊಸ ವರ್ಷಕ್ಕೆ ಪ್ರತಿಜ್ಞೆ ಮಾಡುತ್ತಾರೆ.ಆದರೆ ಬರೀ ಪ್ರತಿಜ್ಞೆಯಲ್ಲೇ ಕಾಲಕಳೆದು ಅದು ಹೊಸ ವರ್ಷಕ್ಕೆ ನೆರವೇರದಿದ್ದಾಗ ಛೇ, ಈ ವರ್ಷ ಅದೃಷ್ಟ ಸರಿಯಿಲ್ಲ. ಬರುವ ವರ್ಷ ನಮ್ಮ ಅದೃಷ್ಟ ಪರೀಕ್ಷೆ ಮಾಡೋಣ ಎಂದು ಬರುವ ವರ್ಷಕ್ಕೆ ಮುಂದೂಡುತ್ತೇವೆ. ಆದರೆ ಯಾವುದೇ ಕೆಲಸಕ್ಕೆ ಬೇಕಾದ ಅರ್ಹತೆ, ಕೌಶಲ್ಯ ಪಡೆಯದೆ ವರ್ಷ, ವರ್ಷವೂ ಮುಂದೂಡುತ್ತಾ ಹೋಗುವಷ್ಟರಲ್ಲಿ ವೃದ್ಧಾಪ್ಯಕ್ಕೆ ಕಾಲಿರಿಸಿರುತ್ತೇವೆ. ಹಿಂದಿನ ವರ್ಷವು ಅಷ್ಟೇನೂ ಭರವಸೆದಾಯಕವಾಗಿಲ್ಲದಿದ್ದರೆ ನೀವು ಹೊಸ ಜೀವನಕ್ಕೆ ಕಾಲಿರಿಸಲು ಹೊಸ ವರ್ಷವು ಒಂದು ಎಕ್ಸ್ಕ್ಯೂಸ್ ಎನ್ನಬಹುದು. ನಿಮ್ಮ ಹಿಂದಿನ ವರ್ಷವು ಚೆನ್ನಾಗಿದ್ದರೆ, ಈ ವರ್ಷವು ಇನ್ನೂ ಹೆಚ್ಚು ಸಮೃದ್ಧಿ ಮತ್ತು ಅದೃಷ್ಟಕ್ಕಾಗಿ ಆಶಿಸುತ್ತೀರಿ.ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ,ಅನುಬಂಧವನ್ನು ಬಿತ್ತಲು ಸ್ನೇಹಿತರಿಗೆ ಮತ್ತು ಕುಟುಂಬಗಳಿಗೆ ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಇದೊಂದು ಶುಭಗಳಿಗೆ.
ನಮ್ಮ ದೇಶ ಪ್ರಾಚೀನ ಸಂಸ್ಕೃತಿ, ಸಭ್ಯ ಸಮಾಜವನ್ನು ಹೊಂದಿದೆ. ಇತ್ತೀಚೆಗೆ ಕೆಲವರು ಪಾಶ್ಚಾತ್ಯರ ಕೆಟ್ಟ ಆಚರಣೆಯ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಡಿ. 31ರ ರಾತ್ರಿ ಹೊಸ ವರ್ಷದ ಹೆಸರಿನಲ್ಲಿ ಸಾರಾಯಿ ಅಮಲಿನಲ್ಲಿ ಕೂಗಾಡುವುದು, ನಡು ರಸ್ತೆಯಲ್ಲಿ ಬಾಟಲಿಗಳನ್ನು ಒಡೆಯುವುದು, ಯುವತಿಯರ ಮಾನಭಂಗದಂತಹ ಕೃತ್ಯ ಎಸಗುವವರಿಗೆ ಇವೆಲ್ಲ ಮಜವೆನಿಸಿದರೆ, ಅಮಾಯಕರಿಗೆ ಸಜಾ ಆಗುತ್ತಿದೆ.
ಹೊಸ ವರ್ಷ ಬರುವುದು, ಹಳೆಯ ವರ್ಷ ಹೋಗುವುದು ಸೃಷ್ಟಿಯ ನಿಯಮವಾಗಿದೆ. ಹಳೆ ವರ್ಷದ ಅನೇಕ ಘಟನಾವಳಿಗಳನ್ನು ಮರೆತು ನಾವು ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುತ್ತೇವೆ. ಹೊಸ ವರ್ಷದ ಮೊದಲನೆಯ ದಿನ ಅದೇ ಸೂರ್ಯ, ಚಂದಿರ ತಾರೆಗಳು, ಅದೇ ಭೂಮಿ, ಆಕಾಶ, ಜಲ, ವಾಯು ಮುಂತಾದ ಪಂಚತತ್ವಗಳು ತಮ್ಮ ಸೇವೆಯಲ್ಲಿ ನಿರತವಾಗಿರುತ್ತವೆ. ಕೇವಲ ಮಾನವನಿಗೆ ಮಾತ್ರ ಹೊಸ ವರ್ಷದ ಸಂಭ್ರಮ. ಕೆಲವರು ಕುಡಿದು, ಕುಣಿದು, ಕುಪ್ಪಳಿಸಿ ಸಂಭ್ರಮದಿಂದ ಆಚರಿಸಿದರೆ, ಅನೇಕರು ಭಯ–ಭಕ್ತಿ ಭಾವನೆಗಳಿಂದ ಆಚರಿಸುವುದು ಪರಿಪಾಠವಾಗಿದೆ. ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ದೇಶ ವಿದೇಶಗಳಲ್ಲಿ ಹೊಸ ವರ್ಷದ ಆಚರಣೆ ನಡೆಯುತ್ತದೆ.ಹೊಸ ವರ್ಷ ಕೇವಲ ಕ್ಯಾಲೆಂಡರ್ ಬದಲಾಯಿಸುವ ಕ್ಷಣವಲ್ಲ, ನಮ್ಮ ಬದುಕಿನ ಹೊಸ ಹೆಜ್ಜೆಯತ್ತ ಸಾಗುವ ಹೊತ್ತು ಕೂಡಾ ಹೌದು. ನಮಗೆ ಅದೇ 365 ದಿನಗಳು ಸಿಗುತ್ತವೆ. ಈ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ನಿಂತಿರುತ್ತದೆ. ಕಳೆದ ವರ್ಷದ ಕಡೆಗೆ ಒಮ್ಮೆ ಹಿಂತಿರುಗಿ ನೋಡಿ ಅವಲೋಕನ ಮಾಡಿಕೊಳ್ಳುವುದು ಕೂಡಾ ಮುಖ್ಯ. ಭವಿಷ್ಯದಲ್ಲಿ ಇಡಬೇಕಾದ ಹೆಜ್ಜೆಗೆ ದಾರಿಯನ್ನು ತೋರಿಸುತ್ತದೆ. ಭಾರತ ದೇಶದೆಲ್ಲಡೆ ನವವರ್ಷದ ಆಗಮನವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ದೇವಾಲಯ, ಪ್ರಾರ್ಥನಾ ಮಂದಿರ ಮತ್ತು ಕ್ರೆಸ್ತ ದೇವಾಲಯಗಳಲ್ಲಿ ವಿಶೇಷವಾಗಿ ಹೊಸ ವರ್ಷದ ಆಚರಣೆ ನಡೆಯುತ್ತದೆ. ಹಾಗೆ ನೋಡಿದರೆ ಕಳೆದು ಹೋದ ಸಮಯ, ಬಾಯಿಂದ ಬಂದ ಮಾತು, ಬಂದೂಕಿನಿಂದ ಹೊರಟ ಬುಲೆಟ್ ಎಂದಿಗೂ ಮರಳಿ ಬರುವುದಿಲ್ಲ. ಇದೇ ರೀತಿ ಕಳೆದುಹೊದ ವರ್ಷ ಮತ್ತೆ ಬರಲಾರದು. ಕೊರೊನಾದ ಹೊಸ ರೂಪ ಬಿ.ಎಫ್7 ಅನೆಕ ದೇಶಗಳಲ್ಲಿ ಕಾಡುತ್ತಿದೆ. ನಮ್ಮ ದೇಶದಲ್ಲಿ ಕೋವಿಡ್ ಸೋಂಕು ಇನ್ನು ಮುಗಿದಿಲ್ಲ. ಹೊಸ ವರ್ಷಾಚರಣೆ ಮತ್ತು ಕ್ರಿಸ್ಮಸ ಹಬ್ಬದ ಸಂದರ್ಭದಲ್ಲಿ ಮಹಾಮಾರಿ ಹೆಚ್ಚಾಗುವ ಸಂಭವವಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಲಸಿಕೆ ಹಾಕಿಸಿಕೊಳ್ಳುವುದು, ಮುಂತಾದ ಮನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗಿದೆ.ನಮ್ಮ ದಿನದ ಆರಂಭ ಶುಭವಾದರೆ, ಇಡೀ ದಿನವು ಸುಖವಾಗಿರುತ್ತದೆ. ಹಾಗೆಯೇ ಹೊಸ ವರ್ಷದ ಆರಂಭ ಸುಖಕರವಾದರೆ ಇಡೀ ವರ್ಷ ಒಳ್ಳೆಯದೇ ಆಗುತ್ತದೆ. ಪ್ರತಿಯೊಂದು ಸಂಕಲ್ಪದಲ್ಲಿ ಅಗಾಧ ಶಕ್ತಿ ಅಡಗಿದೆ. ಶುದ್ಧ ಸಂಕಲ್ಪಗಳಿಂದ ಸಕಾರಾತ್ಮಕ ಶಕ್ತಿ ಮತ್ತು ಅಶುದ್ಧ ಸಂಕಲ್ಪಗಳಿಂದ ನಕಾರತ್ಮ ಶಕ್ತಿ ಉತ್ಪನ್ನವಾಗುತ್ತದೆ. ಆದ್ದರಿಂದ ನಕಾರಾತ್ಮಕ ವಿಚಾರಗಳನ್ನು ಬಿಟ್ಟು, ಆರೋಗ್ಯವಂತರಾಗಲು ಸುವಿಚಾರ, ಧ್ಯಾನ, ಯೋಗಾಸನ, ವ್ಯಾಯಾಮ, ಶುದ್ಧ ಆಹಾರ ಮತ್ತು ವಿಹಾರದ ಅವಶ್ಯಕತೆ ಇದೆ. ಸರ್ವರ ರಕ್ಷಕನಾದ ಪರಮಾತ್ಮನ ಅತಿ ಶ್ರೇಷ್ಠ ಸಂತಾನರಾದ ನಾವುಗಳು ಅವನಿಂದ ಸರ್ವಶಕ್ತಿಗಳನ್ನು ಪಡೆಯಬೇಕಾಗಿದೆ. 12 ತಿಂಗಳು ಸಂತೋಷದಿಂದ 52 ವಾರ ಆರೋಗ್ಯದಿಂದ 365 ದಿವಸ ಯಶಸ್ವಿಯಿಂದ 8760 ಗಂಟೆ ಸುಖದಿಂದ 52600 ನಿಮಿಷಗಳು ಶಾಂತಿಯಿಂದ 3153600 ಸೆಕೆಂಡುಗಳು ನೆಮ್ಮದಿಯಿಂದ ನಿಮ್ಮ ಮುಂದಿನ ಜೀವನ ಕೂಡಿರಲಿ ಎಂದು ನಾವು ಬೇಡುತ್ತೇವೆ.
ನಮ್ಮ ಬದುಕಿನ ಅಧ್ಯಾಯದ ಹೊಸ ಪುಟ ತೆರೆಯಲು, ಹೊಸ ಉಲ್ಲಾಸ, ಹೊಸ ಚೈತನ್ಯ, ಹೊಸ ವಿಶ್ವಾಸ ತುಂಬಲು ಹೊಸ ವರ್ಷ ಕಾದಿರುತ್ತದೆ. ಇದು ಬರೀ ಹೊಸ ಕ್ಯಾಲೆಂಡರ್ ತಂದು ಗೋಡೆಯಲ್ಲಿ ನೇತು ಹಾಕುವ ಹೊತ್ತಲ್ಲ. ಹೊಸ ದಿನಗಳನ್ನು ಸದ್ವಿನಿಯೋಗ ಮಾಡುವ ಕ್ಷಣ . 2023 ಇದು ನಮ್ಮ ಬದುಕನ್ನು ಸಿಂಹಾವಲೋಕನ ಮಾಡುವ ಹೊತ್ತು. ಕಳೆದ ವರ್ಷ ಏನು ಮಾಡಿದ್ದೇವು, ಕಳೆದ ವರ್ಷದ ಅನುಭವಗಳೇನು? ಒಳ್ಳೆಯದೇನು, ಕೆಟ್ಟದೇನು ಎಂಬ ವಿಮರ್ಶೆಯ ಜೊತೆಗೆ ಮುಂದಿನ ವರ್ಷ ನಾವೇನು ಮಾಡಬೇಕು, ನಾವೇನು ಮಾಡಬಾರದು ಎಂಬುದನ್ನು ನಿರ್ಧರಿಸುವ ಕ್ಷಣಗಳಿವು. ಯಾಕೆಂದರೆ, ಕಳೆದ ವರ್ಷದ ಅನುಭವ ಹಾಗೂ ಭವಿಷ್ಯದ ಗುರಿಯನ್ನು ನಿರ್ಧರಿಸಿ ಮುನ್ನಡೆದರೆ ಬದುಕು ಇನ್ನಷ್ಟು ಖುಷಿಯಾಗಿರುತ್ತದೆ. ಕಳೆದ ವರ್ಷದ ಒಳಿತು ಕೆಡಕನ್ನು ಒಂದು ತಕ್ಕಡಿಯಲ್ಲಿ ಹಾಕಿ ಅಳಿದು ತೂಗಬೇಕಾದ ದಿನ ಬಂದಿದೆ. ಒಳ್ಳೆಯದನ್ನು ಮುಂದುವರೆಸಿಕೊಂಡು ಕೆಟ್ಟದನ್ನು ಅಳಿಸುವ ದಿನವಿದು. ಮುಂದಿನ ವರ್ಷದ ಪ್ರಯಣ ಸಾಗಲಿ. ಇದು ತಮ್ಮ ಪ್ರೀತಿ ಪಾತ್ರರಿಗೆ ಪ್ರೀತಿಯ ಶುಭಾಶಯ ಕೋರುವ ಹಾರೈಸುವ ಸಮಯವಾಗಿದೆ. ಹೊಸ ಆರಂಭವನ್ನು ವಾಸ್ತವಿಕವಾಗಿ ಆಚರಿಸಲು ನಿಮ್ಮ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಪ್ರೀತಿಪಾತ್ರರೊಂದಿಗೆ ನೀವು ಹಂಚಿಕೊಳ್ಳಬಹುದಾದ ಕೆಲವು ಹೃದಯಸ್ಪರ್ಶಿ, ಸಕಾರಾತ್ಮಕ ಮತ್ತು ಸುಂದರವಾದ ಹೊಸ ವರ್ಷದ ವಿಶೇಷ ಶುಭಾಶಯಗಳು ನಿಮ್ಮ ಭಾಂದವ್ಯವನ್ನು ಗಟ್ಟಿಗೊಳಿಸಲಿ. ಮಾನವನಾಗಿ ಹುಟ್ಟಿದ ಮೇಲೆ ಮಾನವೀಯತೆಯ ಜೊತೆಗೆ ಹೃದಯವಂತಿಕೆಯನ್ನು ಹರಡೋಣ. ಬದುಕನ್ನು ಧನ್ಯತೆಗೊಳಿಸಿಕೊಳ್ಳೋಣ. ಯಾಕೆಂದರೆ ಜೀವನದಲ್ಲಿ ಏನು ಮುಖ್ಯ ಅಂದರೆ ಜೀವನನೇ ಮುಖ್ಯ ಅಲ್ಲವೆ? ಪ್ರತಿ ಕ್ಷಣವೆಲ್ಲವೂ ಹೊಸ ಅನುಭವ ನೀಡುವ ಕ್ಷಣವಲ್ಲವೆ ? ಹೊಸ ಅನುಭವಗಳ ಸವಿಯಲಿಕ್ಕೆ ಏನ್ನೇನು ತಡ ಬನ್ನಿರಿ ಆಚರಿಸೋಣ, ಪಂಚಾಂಗವ ಬದಲಿಸೋಣ.
ಲೇಖನ-ಹೇಮಲತ, ಶಿಕ್ಷಕಿ