i
ಹೆಣ್ಣು ಮಕ್ಕಳ ಬಾಳು ಹಾಳು ಮಾಡಿದ ಸ್ಯಾಂಟ್ರೋ ರವಿ ಅರೆಸ್ಟ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪತ್ನಿ ಸೇರಿದಂತೆ ಹಲವು ಹೆಣ್ಣು ಮಕ್ಕಳ ಬಾಳು ಹಾಳು ಮಾಡಿದ ಕಿರಾತಕ ಸ್ಯಾಂಟ್ರೋ ರವಿ ಅರೆಸ್ಟ್ ಆಗಿದ್ದಾನೆ.
ಆಡಳಿತ ರೂಢ ಸರ್ಕಾರದಲ್ಲಿ ನಾನಾ ವೇಷಗಳನ್ನು ತೊಟ್ಟು ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಕೊನೆಗೂ ಗುಜರಾತಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದ್ದು ಕೆಲ ರಾಜಕಾರಣಿಗಳಿಗೆ ಢವಢವ ಶುರುವಾಗಿದೆ.
ಸ್ಯಾಂಟ್ರೋ ರವಿ ಶ್ವೇತವಸ್ತ್ರಧಾರಿಯಾಗಿ ಕಾಣುವ ಈ ಖತರ್ನಾಕ್ ಗೋಮುಖ ವ್ಯಾಘ್ರನ ಕರಾಳ ಮುಖಗಳನ್ನು ರಾಜ್ಯದ ಜನತೆಯ ಮುಂದೆ ಎಳೆಎಳೆಯಾಗಿ ಬಯಲು ಮಾಡಬೇಕಿದೆ. ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ, ವೇಶ್ಯಾವಾಟಿಕೆ ದಂಧೆ, ಸರ್ಕಾರದಲ್ಲಿ ಆಯಕಟ್ಟಿನ ಅಧಿಕಾರಿಗಳ ವರ್ಗಾವಣೆ ದಂಧೆ ಸೇರಿದಂತೆ ಹಲವು ಕರ್ಮ ಕಾಂಡಗಳನ್ನು ಮಾಡಿರುವ ಕಿರಾತಕ ಸ್ಯಾಂಟ್ರೋ ರವಿ ಎನ್ನುವ ನಟೋರಿಯಸ್ ದುಷ್ಕೃತ್ಯಗಳು ಎಲ್ಲರ ಕಣ್ಣು ಕೆಂಪಗಾಗಿಸಿದ್ದವು. 11 ದಿನಗಳ ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡು ಎಸ್ಕೇಪ್ ಆಗಿದ್ದ ಈ ಆರೋಪಿಯನ್ನು ಪೊಲೀಸರು ಗುಜರಾತ್ನಲ್ಲಿ ಬಂಧಿಸಿದ್ದಾರೆ. ಅಷ್ಟೇ ಅಲ್ಲ ಆತ ಧರಿಸಿದ್ದ ವಿಗ್ ಮೀಸೆ ತೆಗೆದಿದ್ದು ರವಿ ಎನ್ನುವ ವ್ಯಕ್ತಿ ಇವನ ಎನ್ನುವ ಮಟ್ಟಿಗೆ ಗುರುತು ಸಿಗದಂತೆ ಆಗಿದ್ದಾರೆ.