i
ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಜಾಹಿರಾತಿಗೆ ಅನುದಾನ ಮೀಸಲು-ಬಿಬಿಎಂಪಿ ಮುಖ್ಯ ಆಯುಕ್ತರ ಗ್ರೀನ್ ಸಿಗ್ನಲ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು ಬಿಬಿಎಂಪಿ ಕೇಂದ್ರ ಕಛೇರಿ:
ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಹಿಂದಿನ ವರ್ಷಗಳಂತೆ ಜಾಹಿರಾತು ಬಿಡುಗಡೆಗೆ ಅನುದಾನ ಮೀಸಲಿರಿಸುವಂತೆ ನೀಡಿದ್ದ ಮನವಿಯ ಹಿನ್ನೆಲೆಯಲ್ಲಿ ಇಂದು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ರವರನ್ನು ಮತ್ತು ವಿಶೇಷ ಆಯುಕ್ತರಾದ ಜಯರಾಮ್ ರಾಯಪುರರವರನ್ನು ಬೆಂಗಳೂರುನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಸತ್ಯನಾರಾಯಣ್ ನೇತೃತ್ವದ ಪತ್ರಕರ್ತರ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿತು.
ಸಂಘದ ಸದಸ್ಯರುಗಳಾದ ಹುಲಿ ಅಮರ್ ನಾಥ್, ಲಿಂಗರಾಜು ನೊಣವಿನಕೆರೆ, ವಿಜಯಕುಮಾರ್, ನಾರಾಯಣ್, ಎಸ್. ನರಸಿಂಹಮೂರ್ತಿ, ಜಿ.ಎಸ್. ಮಹೇಶ್ ರವರುಗಳು ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಮನವಿಗೆ ಸ್ಪಂದಿಸಿದ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಪ್ರತಿ ವರ್ಷದಂತೆ ಈ ಸಾಲಿನಲ್ಲಿ ಅನುದಾನ ಇಡಲಾಗಿದೆ.
ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಸಮಾಜದ ಮೇಲೆ ಚಲ್ಲುವ ಮಾಧ್ಯಮವಾಗಿದೆ ಎಂದು ಹೇಳಿದರು.
ಅಧ್ಯಕ್ಷರಾದ ಕೆ.ಸತ್ಯನಾರಾಯಣ್ ರವರು ಮಾತನಾಡಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವ ಪಾತ್ರವಹಿಸಿದೆ .
ಪತ್ರಿಕೆಗಳಿಗೆ ಜಾಹಿರಾತು ಮುಖ್ಯ ಈ ನಿಟ್ಟನಲ್ಲಿ ಸರ್ಕಾರ ಮತ್ತು ಬಿಬಿಎಂಪಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಪ್ರತಿವರ್ಷ ಅನುದಾನ ಮೀಸಲು ಇಡಬೇಕು ನಮ್ಮ ಸಂಘ ಮನವಿ ಮಾಡಲಾಗಿದೆ.
ಸಮಾಜದ ಅಂಕುಡೊಂಡು ತಿದ್ದಲು ಮತ್ತು ಸಮಾಜದ ಅಭಿವೃದ್ದಿಗೆ ಸಣ್ಣ ಮತ್ತು ಮಧ್ಯಮ ಪತ್ರಿಕೆ ಕೊಡುಗೆ ಅಪಾರ ಎಂದು ಹೇಳಿದರು.
ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರಿಗೆ ಮತ್ತು ವಿಶೇಷ ಆಯುಕ್ತರು(ಹಣಕಾಸು)
ಜಯರಾಮ್ ರಾಯಪುರ ಅವರಿಗೆ ಸಂಘದ ಪರವಾಗಿ ಅಭಿನಂದನೆ ತಿಳಿಸಲಾಯಿತು*