i
ಗ್ಯಾಸ್ ಸಿಲಿಂಡರ್ ಬೆಲೆ ದಿಢೀರ್ ಏರಿಕೆ, ಮಾಜಿ ಸಚಿವ ಸುಧಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜ್ಯದಲ್ಲಿ ಈಗಾಗಲೇ ದಿನಸಿ ವಸ್ತುಗಳ ಬೆಲೆ ಏರಿಕೆ ವಿರುದ್ದ ರಾಜ್ಯದ ಜನರು ಪರಿತಪಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ದಿಡೀರನೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ೫೦ ರೂಗಳು ಏರಿಸಿ ಜನರ ಜೀವನಕ್ಕೆ ಬರೆ ಎಳೆದಿದ್ದಾರೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಆಡಳಿತ ನೆಡೆಸುತ್ತಿರುವ ಬಿ.ಜೆ.ಪಿ ಸರ್ಕಾರವು ಆಡಳಿತ ನೆಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದಾಗಿ ಮಾಜಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದಲ್ಲಿ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಡಿ.ಸುಧಾಕರ್ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಬೆಲೆಯನ್ನು ೫೦ ರೂಗಳನ್ನು ದಿಡೀರ್ ಏರಿಕೆ ಮಾಡಿರುವ ವಿರುದ್ದ ಇಂದು ಸೌದೆ ಒಲೆಯಲ್ಲಿ ರೊಟ್ಟಿ ಸುಡುವುದರ ಮೂಲಕ ಪ್ರತಿಭಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸರ್ಕಾರವು ಪ್ರತಿ ಹಂತದಲ್ಲೂ ೪೦% ಲಂಚ ನೀಡಬೇಕಿದ್ದು, ಹೊಸದಾಗಿ ಉದ್ಯೋಗ ಪಡೆದುಕೊಳ್ಳಬೇಕೆಂದರೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ೫೦ ಲಕ್ಷದಿಂದ ೧ ಕೋಟಿ ರೂಪಾಯಿ ಲಂಚ ಕೊಡಬೇಕಾದ ದುಸ್ಥಿತಿ ರಾಜ್ಯಕ್ಕೆ, ವಿದ್ಯಾರ್ಥಿಗಳಿಗೆ ಬಂದಿದೆ. ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಭ್ರ? ಬಿ.ಜೆ.ಪಿ ಸರ್ಕಾರವನ್ನು ಮನೆಗೆ ಕಳಿಸುವಂತ ಕೆಲಸವನ್ನು ರಾಜ್ಯದ ಜನರು ಮಾಡಬೇಕು ಎಂಬುದಾಗಿ ಕರೆ ನೀಡಿದರು.
ಈ ಪ್ರತಿಭಟನೆಯಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಖಾದಿ ಜೆ.ರಮೇಶ್, ಈರಲಿಂಗೇಗೌಡ, ಕೆ.ಪಿ.ಸಿ.ಸಿ ಸದಸ್ಯರುಗಳಾದ ಎ.ಎಂ.ಅಮೃತೇಶ್ವರಸ್ವಾಮಿ, ಕಂದಿಕೆರೆ ಸುರೇಶ್ ಬಾಬು, ಪ್ರಚಾರ ಸಮಿತಿ ಅಧ್ಯಕ್ಷರಾದ ಕೃ?ಮೂರ್ತಿಸೂರಗೊಂಡನಹಳ್ಳಿ, ಜಿ.ಪಂ.ಮಾಜಿಸದಸ್ಯರಾದ ಆರ್.ನಾಗೇಂದ್ರನಾಯ್ಕ, ನಗರಸಭಾ ಸದಸ್ಯರುಗಳಾದ ಅಜಯಕುಮಾರ್, ಮಮತ, ಶಿವರಂಜಿನಿ, ಅನಿಲ್ ಕುಮಾರ್, ಜಬೀವುಲ್ಲಾ, ಮೊದಲಮರಿಯಾ, ರತ್ನಮ್ಮ, ಕವಿತ ಲೋಕೇಶ್, ಮಾಜಿ ನಗರಸಭಾ ಸದಸ್ಯರಾದ ಪರು?ತ್ತಮ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಫಕೃದ್ದೀನ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಗುರುಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಿಡ್ಡೋಬನಹಳ್ಳಿ ಅಶೋಕ್, ಅಶೋಕ್ ಬಾಬು, ಮಾಜಿ ತಾ.ಪಂ.ಸ ವೆಂಕಟೇಶ್, ಜಿ.ಎಲ್.ಮೂರ್ತಿ, ಕಲ್ಲಹಟ್ಟಿ ಹರೀಶ್, ಕಾರ್ಮಿಕ ಘಟಕದ ಅಧ್ಯಕ್ಷರಾದ ವಿ.ಶಿವಕುಮಾರ್, ಜ್ಞಾನೇಶ್, ಕಾರ್ಮಿಕ ಘಟಕದ ಕಾರ್ಯಾಧ್ಯಕ್ಷರಾದ ಜ್ಯೋತಿಲಕ್ಷ್ಮಿ, ವಸುದ, ಕರಿಯಮ್ಮ, ಶರ್ಮಿಳ, ಭಾಗ್ಯಮ್ಮ, ರಜಿಯಾ ಸುಲ್ತಾನ, ಶಕುಂತಲಾ, ದಿವಾಕರ್ ನಾಯ್ಕ, ದಿಂಡಾವರ ಶ್ರೀನಿವಾಸ್, ಮೂರ್ತಿ, ದಿಂಡಾವರ ಮಹೇಶ್, ಯಲ್ಲದಕೆರೆ ಆಯಿಲ್ ಮಂಜುನಾಥ್, ಕಿಸಾನ್ ಘಟಕದ ಅಧ್ಯಕ್ಷರಾದ ಹನುಮಂತರಾಯ.ಜಿ, ವೀರಭದ್ರಪ್ಪ ಅಬ್ಬಿನಹೊಳೆ, ತಿಪ್ಪೇಸ್ವಾಮಿ ಹೊಸಯಳನಾಡು, ಹಿರಿಯ ಮುಖಂಡರಾದ ಚನ್ನಪ್ಪ, ಮಹಾಲಿಂಗಪ್ಪ, ಮಲ್ಲಪ್ಪನಹಳ್ಳಿ ಪ್ರಕಾಶ್, ನರಸಿಂಹರಾಜು, ಕುಂದಲಗುರ ರಂಗೇಗೌಡ, ಅಬ್ದುಲ್ ಲತೀಫ್ ಸಾಬ್, ಪಾಲಾಕ್ಷ ಯಾದವ್ ದೇವೇಗೌಡ, ಸರ್ವೆಶ, ಮಲ್ಲಪ್ಪನಹಳ್ಳಿ ತಿಪ್ಪೇಸ್ವಾಮಿ, ಆದಿವಾಲ ಶ್ರೀಪತಿ,ನಂದಿಹಳ್ಳಿ ರಘು, ಹಿಂಡಸಕಟ್ಟೆತಿಪ್ಪೇಸ್ವಾಮಿ, ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.