i
ಸಂಕಷ್ಟಗಳ ಪರಿಹಾರಕ್ಕಾಗಿ ಕೋಲೆ ಬಸವನ ಮೊರೆ ಹೋದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ…
ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿದ್ದು ಸಂಕಷ್ಟಗಳ ನಿವಾರಣೆಗಾಗಿ ಕೋಲೆ ಬಸವನ ಮೊರೆ ಹೋಗಿದ್ದಾರೆ. ಮಂಡ್ಯದ ಕಾಲಭೈರವೇಶ್ವರಿನಿಗೆ ಪೂಜೆ ಸಲ್ಲಿಸಿ ನಂತರ ಕೋಲೆ ಬಸವನ ಪಾದ ಮುಟ್ಟಿ ಸಮಸ್ಯೆಗೆ ಪರಿಹಾರ ಕೇಳುವ ವಾಡಿಕೆ ಇದೆ.
ಕೋಲೆ ಬಸವ ಪಾದ ನೀಡಿದರೆ ಇಷ್ಟಾರ್ಥ ನೆರವೇರಲಿದೆ ಅನ್ನೋದು ಭಕ್ತರ ನಂಬಿಕೆ. ರೋಹಿಣಿ ಸಿಂಧೂರಿ ಅವರು ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಕೋಲೆ ಬಸವನ ಆಶೀರ್ವಾದ ಪಡೆದರು.
ರೋಹಿಣಿ ಸಿಂಧೂರಿ ಅವರು ಕಾಲಭಾರವೇಶ್ವರ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಕೋಲೆ ಬಸವನ ಪಾದ ಕೇಳಲು ಮುಂದೆ ಕುಳಿತು ಬೇಡಿಕೊಂಡರು. ಮನಸ್ಸಿನಲ್ಲಿ ಏನಾದರೂ ಬೇಡಿಕೊಂಡರಷ್ಟೇ ಕೋಲೆ ಬಸವ ಪಾದ ನೀಡುತ್ತಾನೆ ಅನ್ನೋದು ನಂಬಿಕೆ. ಮೊದಲು ಮನಸ್ಸಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುಮಾರು 10 ನಿಮಿಷ ಬಸವನ ಎದುರು ಕುಳಿತರು. ಆ ಬಳಿಕ ರೋಹಿಣಿ ಮನಸ್ಸಿನಲ್ಲಿ ಪ್ರಾರ್ಥನೆ ಸಲ್ಲಿಸಿ ಕುಳಿತಿದ್ದಾಗ ಬಸವ ಆಶೀರ್ವಾದ ನೀಡಿದೆ.
ಕೋಲೆ ಬಸವನಆಶೀರ್ವಾದ ಪಡೆದ ನಂತರ ದೇವಾಲಯಕ್ಕೆ ಬಂದು ತಮ್ಮಕೈಲಾದಸೇವೆ ಮಾಡುವುದಾಗಿ ರೋಹಿಣಿ ಸಿಂಧೂರಿ ಹೇಳಿದ್ದಾರೆ ಎನ್ನಲಾಗಿದೆ.