i
ಹಿರಿಯೂರು ಜೆಡಿಎಸ್ ಅಬ್ಬರ ಪ್ರಚಾರ, ಬಿಜೆಪಿ-ಕಾಂಗ್ರೆಸ್ ಮುಖಂಡರ ಜೆಡಿಎಸ್ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಪರ ಅಬ್ಬರದ ಪ್ರಚಾರ ನಡೆದಿದೆ. ಬುಧವಾರ ಕ್ಷೇತ್ರದಾದ್ಯಂತ ಬಿರುಸಿನ ಮತಯಾಚನೆ ಮಾಡಿದ ಮುಖಂಡರುಗಳು ಹಲವು ಕಡೆಗಳಲ್ಲಿ ಪಕ್ಷಕ್ಕೆ ಹಲವರನ್ನು ಸೇರ್ಪಡೆ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ನೂರಾರು ಸಂಖ್ಯೆಯ ಮುಸ್ಲಿಂ ಯುವಕರು ಜೆಡಿಎಸ್ ಬೆಂಬಲಿಸಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರೆ. ಅಲ್ಲದೆ ಜವನಗೊಂಡನಹಳ್ಳಿ ಹೋಬಳಿ ಮತ್ತು ಕಸಬಾ ಹೋಬಳಿ, ಹಿರಿಯೂರು ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್, ಬಿಜೆಪಿ ಮುಖಂಡರುಗಳು ಜೆಡಿಎಸ್ ಪಕ್ಷಕ್ಕೆ ಸೇರುವ ಮೂಲಕ ಶಕ್ತಿ ತುಂಬುತ್ತಿದ್ದಾರೆ.
ಹಿರಿಯೂರು ಆಜಾದ್ ನಗರದ ಮುಸ್ಲಿಂ ಬಾಂದವರಾದ ಪಿಂಟು, ಮುಬಾರಕ್, ನೂರುಲ್ಲಾ, ಬಾಬು, ಮಹಮ್ಮದ್ ಅಲಿ, ಇಮ್ರಾನ್ ಭಾಷಾ, ಪಿರಾ ಸೇರಿದಂತೆ ನೂರಾರು ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್ ಮುಖಂಡರಾದ ವೆಂಕಟೇಶ್, BDSS ತಾಲೂಕು ಅಧ್ಯಕ್ಷ ಮಂಜು ಮಂಜುನಾಥ್, ಪಟ್ರೆಹಳ್ಳಿ ಕಿರಣ್ ಕುಮಾರ್, ಲತಾ ರವೀಂದ್ರಪ್ಪ ಮತ್ತಿತರ ಅವರ ಸಮ್ಮಖದಲ್ಲಿ ಜೆಡಿಎಸ್ ಸೇ್ಪಡೆಗೊಂಡರು.
ಜವಗಂಡನಹಳ್ಳಿ ಹೋಬಳಿ ಚಳಮಾಡು ಗ್ರಾಮದಲ್ಲಿ ಜನತಾದಳದ ಅಭ್ಯರ್ಥಿ ಎಂ ರವೀಂದ್ರಪ್ಪ ರವರನ್ನು ವಿಜೃಂಭಣೆಯಿಂದ ಸ್ವಾಗತಿಸಿದರು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಪಕ್ಷಗಳನ್ನು ಧಿಕ್ಕರಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಿ ಸೇರ್ಪಡೆಯಾದರು. ಗ್ರಾಮದ ಜಯಣ್ಣ, ಹನುಮಂತರಾಯಪ್ಪ ಹಾಗೂ ಊರಿನ ಹಿರಿಯ ಮುಖಂಡರು ಇದ್ದರು.
ಹಿರಿಯೂರು ನಗರದ ಕೂಗಳತೆ ದೂರದಲ್ಲಿರುವ ಹುಲಿಗಲಕುಂಟೆ ಗ್ರಾಮದಲ್ಲಿ ಹಲವು ಮುಖಂಡರು ಜೆಡಿಎಸ್ ಸೇರ್ಪಡೆಯಾದರು.
ಜಿಲ್ಲಾಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ, ಜೆಡಿಎಸ್ ಮುಖಂಡರಾದ ತಿಮ್ಮರಾಜು, ಅಭ್ಯರ್ಥಿ ಎಂ.ರವೀಂದ್ರಪ್ಪ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಯಶೋಧರ, ಜೆಜಿಹಳ್ಳಿ ಮಂಜುನಾಥ್, ಹನುಮಂತರಾಯ ಸೇರಿದಂತೆ ಮತ್ತಿತರ ಮುಖಂಡರು ಹಾಜರಿದ್ದರು.