i
ಕೋಟೆನಾಡಿನ ಕಳಸ ಹಂದಿಗನಡು ಗ್ರಾಮದ ಸಂತೋಷ್ ಗೌಡ ಅವರಿಗೆ ಜೆಇಇ ನಲ್ಲಿ 101ನೇ ರ್ಯಾಂಕ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿ ಕುಗ್ರಾಮ ಹಂದಿಗನಡು ಗ್ರಾಮದ ಶ್ರೀರಂಗಪ್ಪ ನಾಗವೇಣಿ ದಂಪತಿ ಪುತ್ರ ಎನ್ ಎಸ್ ಸಂತೋಷ್ ಗೌಡ ರವರು ಆಲ್ ಇಂಡಿಯಾ ರಾಂಕ್ ಜೆಇಇ ಮೇನ್2023 ರಲ್ಲಿ 101ನೇ ರ್ಯಾಂಕ್ ಪಡೆಯುವ ಮೂಲಕ ಕೋಟೆ ನಾಡಿಗೆ ಕೀರ್ತಿ ಹೆಚ್ಚಿಸಿರುವುದಲ್ಲದೆ ಹಿರಿಯೂರು, ಹುಟ್ಟುರು ಹಂದಿಗಡನಡು ಗ್ರಾಮಕ್ಕೂ ಕೀರ್ತಿ ತಂದಿದ್ದಾರೆ.
ಅಷ್ಟೇ ಅಲ್ಲ ತಾವು ಅಧ್ಯಯನ ಮಾಡಿದ ದಾವಣಗೆರೆ ಶ್ರೀಮತಿ ಪುಷ್ಪ ಶಾಮನೂರು ಮಹಾಲಿಂಗಪ್ಪ ಪಿಯು ಕಾಲೇಜಿಗೂ ಕೀರ್ತಿ ತಂದಿದ್ದಾರೆ. ರಾಜೇಶ್ ಸೇರಿದಂತೆ ಮತ್ತಿತರರು ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ಸಂತೋಷ್ ಗೌಡ ಅವರನ್ನು ಅಭಿನಂದಿಸಿದ್ದಾರೆ.