i
ಹಿರಿಯೂರು ಪಂಚರತ್ನ ಯಾತ್ರೆಗೆ ಹರಿದು ಬಂದ ಜನ ಸಾಗರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೂರಾರು ಹಳ್ಳಿಗಳಿಂದ ಪಂಚರತ್ನ ರಥ ಯಾತ್ರೆಗೆ ಜನಸಾಗರವೇ ಹರಿದು ಬಂದಿತ್ತು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಮತ್ತಿತರ ನಾಯಕರುಗಳ ಬೃಹತ್ ಕಟೌಟ್ ಗಳು, ಜೆಡಿಎಸ್ ಪಕ್ಷದ ಬ್ಯಾನರ್, ಬಾವುಟ, ಬಂಟ್ಟಿಂಗ್ಸ್ ಗಳು ರಾಜಾಜಿಸುತ್ತಿದ್ದವು. ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಿಗೆ ಜೆಸಿಬಿ ಯಂತ್ರದ ಮೂಲಕ ಬೃಹತ್ ಹಣ್ಣಿನ ಹಾರವನ್ನು ಸಮರ್ಪಿಸಲಾಯಿತು.
ಭವ್ಯ ಮೆರವಣಿಗೆ- ಹಿರಿಯೂರು ನಗರದ ರಂಜಿತಾ ಹೋಟೆಲ್ ನಿಂದ ಹೊರಟ ರೋಡ್ ಶೋ ನಲ್ಲಿ ಅಭ್ಯರ್ಥಿ ರವೀಂದ್ರಪ್ಪನವರಿಗೆ ವಿಧಾನಪರಿಷತ್ ಸದಸ್ಯ ಶರವಣ ಸಾಥ್ ನೀಡಿದರು. ರಸ್ತೆಯ ಎರಡೂ ಬದಿ ನಿಂತ ಜೆಡಿಎಸ್ ಕಾರ್ಯಕರ್ತರ ಜೈಕಾರದ ನಡುವೆ ರೋಡ್ ಶೋ ನೆರವೇರಿತು.
ಜೆಸಿಬಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಹಣ್ಣಿನ ಹಾರ ಹಾಕಿ ಹೂ ಚೆಲ್ಲಿ ಸ್ವಾಗತಿಸಲಾಯಿತು. ಬಿರು ಬಿಸಿಲನ್ನು ಲೆಕ್ಕಿಸದೆ ಸುಮಾರು ಹತ್ತಾರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸಿ ಜೆಡಿಎಸ್ ಪಕ್ಷಕ್ಕೆ ಒಂದು ಐತಿಹಾಸಿಕ ಸಮಾವೇಶ ಸೃಷ್ಟಿಸಿದರು.
ಭೋವಿ ಸಮಾಜದ ತಿಮ್ಮರಾಜು, ಬಸವರಾಜು, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಿರಿಜಪ್ಪ, ಜೆಜಿ ಹಳ್ಳಿ ಮಂಜುನಾಥ್, ದಲಿತ ಮುಖಂಡ ಪಾವಗಡ ಶ್ರೀರಾಮ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ದ್ಯಾಮೇಗೌಡ ಸೇರಿದಂತೆ ಮತ್ತಿತರ ನಾಯಕರುಗಳು ಹಾಜರಿದ್ದರು.