i
ಶಾಸಕ ಸುಧಾಕರ್ ಸಚಿವ ಸ್ಥಾನ, ಉತ್ತಮ ಖಾತೆ ನೀಡಲು ಯರಬಳ್ಳಿ ಗ್ರಾಪಂ ಅಧ್ಯಕ್ಷೆ ರಮ್ಯಾಆಗ್ರಹ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತೀಯ ಕಾಂಗ್ರೆಸ್ ಪಕ್ಷದ ಹಿರಿಯೂರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸುಧಾಕರ್ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನದೊಂದಿಗೆ ಉತ್ತಮ ಖಾತೆಯನ್ನು ನೀಡುವಂತೆ ಯರಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಾರಾಜ್ ಆಗ್ರಹ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಕರ್ನಾಟಕದ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಡಿಸಿಎಂ ಡಿ. ಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರಲ್ಲಿ ರಮ್ಯಾ ಮನವಿ ಮಾಡಿ ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಸೇರಿದ ಸುಧಾಕರ್ ಅವರಿಗೆ ಸಚಿವರನ್ನಾಗಿ ಮಾಡುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಇತರೆ ಸಮುದಾಯಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ ಸುಧಾಕರ್ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ. ಬೆರಳೆಣಿಕೆಯಷ್ಟಿರುವ ಜೈನ ಜಾತಿ ಬಲ ಇಲ್ಲ, ಆದರೂ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸಿರುವುದನ್ನು ಅವಲೋಕನ ಮಾಡಿದರೆ ಸುಧಾಕರ್ ಎಷ್ಟು ಜನಪ್ರಿಯರು, ಇತರೆ ಜಾತಿ, ಜನಾಂಗಗಳು ಎಷ್ಟು ಸುಧಾಕರ್ ಅವರನ್ನು ಇಷ್ಟ ಪಡುತ್ತಾರೆ ಎನ್ನುವುದಕ್ಕೆ ಫಲಿತಾಂಶವೇ ಹೇಳುತ್ತದೆ.
ಸುಧಾಕರ್ ಅವರು 10 ವರ್ಷಗಳ ಕಾಲ ಹಿರಿಯೂರು ಶಾಸಕರಾಗಿದ್ದ ಸಂದರ್ಭದಲ್ಲಿ ಸರ್ವ ಜನಾಂಗದ ಶಾಂತಿಯ ತೋಟದಂತ ಸಂದೇಶ ಸಾರುವ ಮೂಲಕ ತಮ್ಮ ಎಲ್ಲ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಕಾಡು ಗೊಲ್ಲರು, ಕುಂಚಿಟಿಗ, ಒಕ್ಕಲಿಗ, ಲಿಂಗಾಯತ, ಉಪ್ಪಾರ, ಭೋವಿ ಜನಾಂಗದವರು ಸುಧಾಕರ್ ಪರವಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಲ ಕೊಟ್ಟು ಗೆಲುವಿಗೆ ಕಾರಣರಾಗಿದ್ದಾರೆ.
2018-23ರ ವಿಧಾನಸಭೆಗೆ ಡಿ ಸುಧಾಕರ್ ಸೋತರೂ ಕ್ಷೇತ್ರವನ್ನು ಕಡೆಗಣಿಸಲಿಲ್ಲ, ಕ್ಷೇತ್ರದ ಜನರ ಕಷ್ಟ ಸುಃಖಗಳಿಗೆ ನಿತ್ಯ ಸ್ಪಂದಿಸಿ ಕೆಲಸ ಮಾಡಿದ್ದಾರೆ. ಬಡ ಕುಟುಂಬಗಳ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟಿದ್ದಾರೆ. ಎಲ್ಲ ಜಾತಿ ಸಮುದಾಯಕ್ಕೆ ಒಂದೇ ದೃಷ್ಠಿ ಕೋನದಲ್ಲಿ ನೋಡುವ ನಾಯಕರಾಗಿ ಸುಧಾಕರ್ ಹೊರಹೊಮ್ಮಿದ್ದಾರೆ. ಇಂತಹ ನಾಯಕರು ಸಚಿವ ಸಂಪುಟದಲ್ಲಿದ್ದರೆ ಅದಕ್ಕೊಂದು ಘಟನೆ ಇರಲಿದೆ ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗಂಭೀರವಾಗಿ ಈ ವಿಷಯ ಪರಿಗಣಿಸಿ ಅವರಿಗೆ ಸಚಿವ ಸಂಪುಟ ದರ್ಜೆಯ ಸಚಿವ ಸ್ಥಾನದೊಂದಿಗೆ ಉತ್ತಮ ಖಾತೆಯನ್ನು ನೀಡುವಂತೆ ರಮ್ಯಾ ರಾಜ್ ಮನವಿ ಮಾಡಿದ್ದಾರೆ.