i
ಖ್ಯಾತೆ ಕ್ಯಾತೆ ನಡುವೆ ಸಂಭವನೀಯ ಸಚಿವರ ಪಟ್ಟಿ ಹೀಗಿದೆ ನೋಡಿ…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಂಪುಟ ರಚನೆ ಕಸರತ್ತು ಕಗ್ಗಂಟು ಆಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಧ್ಯ ತಮ್ಮ ಬೆಂಬಲಿಗರಿಗಾಗಿ ಖಾತೆ ಕ್ಯಾತೆ ತೀವ್ರಗೊಂಡಿದೆ.
ಕಳೆದ ಎರಡು ದಿನಗಳಿಂದ ಸಚಿವರ ಪಟ್ಟಿ ಅಂತಿಮ ಮಾಡಲು ಹೈಕಮಾಂಡ್ ಹೈರಾಣು ಆಗಿದೆ. ಸಚಿವರ ಪಟ್ಟಿ ಅಂತಿಮ ಮಾಡಲು ಕಾಂಗ್ರೆಸ್ ವಾರ್ ರೂಮ್ನಲ್ಲಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಸುರ್ವೇವಾಲ, ಖರ್ಗೆ ಸೇರಿದಂತೆ ಹಲವರು ಸರಣಿ ಸಭೆ ನಡೆಸುತ್ತಿದ್ದಾರೆ. ಆದರೂ ಅಂತಿಮ ಮಾಡಲು ಸಾಧ್ಯವಾಗಿಲ್ಲ.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಣಗಳಲ್ಲಿ ಗುರುಸಿಕೊಂಡಿರುವ ಶಾಸಕರುಗಳಿಗೆ ಸಚಿವ ಸ್ಥಾನದ ಜೊತೆಗೆ ಪ್ರಭಾವಿ ಖಾತೆಗಳಿಗಾಗಿ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಖಾತೆಗಾಗಿ ಕ್ಯಾತೆ ಭರ್ಜರಿಯಾಗಿ ನಡೆದಿದೆ. ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ, ಇಂಧನ, ಲೋಕೋಪಯೋಗಿ, ಕಂದಾಯ, ಗೃಹ, ಬೃಹತ್ ಕೈಗಾರಿಕೆ ಮೊದಲಾದ ಪ್ರಭಾವಿ ಖಾತೆಗಳು ತಮ್ಮ ಬೆಂಬಲಿಗರಿಗೆ ದೊರೆಯಬೇಕು ಎಂದು ಸಿಎಂ ಮತ್ತು ಡಿಸಿಎಂ ಇಬ್ಬರು ಪಟ್ಟು ಹಿಡಿದಿರುವ ಕಾರಣ ಸರಳವಾಗಿ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಡರಾತ್ರಿಯವರೆಗೂ ಈ ಬಗ್ಗೆ ಚರ್ಚೆ ನಡೆದಿದ್ದು, ಶುಕ್ರವಾರ ಈ ವಿಚಾರ ಅಂತಿಮಗೊಳ್ಳಲಿದೆ ಎನ್ನಲಾಗುತ್ತಿದೆ.
ಸಂಭವನೀಯ ಸಚಿವರು-
ಶಿವಾನಂದ ಪಾಟೀಲ
ಶರಣಪ್ರಕಾಶ್ ಪಾಟೀಲ್
ಬೈರತಿ ಸುರೇಶ್
ಶರಣಬಸಪ್ಪ ದರ್ಶನಾಪುರ
ಬಸವರಾಜ ರಾಯರಡ್ಡಿ
ಪಿರಿಯಾಪಟ್ಟಣ ಕೆ. ವೆಂಕಟೇಶ್
ಎಸ್.ಎಸ್. ಮಲ್ಲಿಕಾರ್ಜುನ್
ಅಜಯ್ ಸಿಂಗ್
ಪುಟ್ಟರಂಗ ಶೆಟ್ಟಿ
ಚಿಂತಾಮಣಿ ಸುಧಾಕರ್
ಶಿರಾ ಟಿ.ಬಿ.ಜಯಚಂದ್ರ
ಹಿರಿಯೂರು ಸುಧಾಕರ್
ಎಚ್.ಕೆ. ಪಾಟೀಲ್
ಮಧು ಬಂಗಾರಪ್ಪ
ಶಿವರಾಜ ತಂಗಡಗಿ
ಎನ್.ಚೆಲುವರಾಯಸ್ವಾಮಿ
ಕೆ.ಎಂ. ಶಿವಲಿಂಗೇಗೌಡ
ರಹೀಂ ಖಾನ್
ಈಶ್ವರ ಖಂಡ್ರೆ
ಲಕ್ಷ್ಮೇ ಹೆಬ್ಬಾಳ್ಕರ್
ಕೆ.ಎನ್. ರಾಜಣ್ಣ /ಬಿ.ನಾಗೇಂದ್ರ
ಕೃಷ್ಣ ಬೈರೇಗೌಡ/ ಎಂ.ಕೃಷ್ಣಪ್ಪ
ನರೇಂದ್ರ ಸ್ವಾಮಿ/ ಡಾ.ಎಚ್.ಸಿ.ಮಹದೇವಪ್ಪ