i
ಪತ್ನಿ ಶೀಲಶಂಕಿಸಿ ಮರ್ಮಾಂಗದೊಳಗೆ ಕ್ರಿಕೆಟ್ ನ ವಿಕೇಟ್ ಹಾಕಿದ ಪತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಮಾನಸಿಕ ಕಿನ್ನತೆಗೆ ಒಳಗಾದ ಗಂಡನೊಬ್ಬ ಪತ್ನಿ ಶೀಲಶಂಕಿಸಿ ಮರ್ಮಾಂಗದೊಳಕೆ ಕ್ರಿಕೆಟ್ ವಿಕೇಟ್ ಹಾಕುವ ಮೂಲಕ ಪೈಶಾಚಿಕ ಕೃತ್ಯ ನಡೆಸಿದ್ದಾನೆ.ಚಳ್ಳಕೆರೆ ನಗರದ ತರಾಸು ಬಡಾವಣೆ ನಿವಾಸಿ, ಚನ್ನಮ್ಮನಾಗತಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಾಸೀಸ್ಟ್ ಭಾಸ್ಕರ(45), ಪತ್ನಿ ರೇಖಾ(38)ಳಿಗೆ ಸೋಮವಾರ ಮಧ್ಯಾಹ್ನ ವೇಳೆಯಲ್ಲಿ ಶೀಲಶಂಕೆ ವ್ಯಕ್ತಪಡಿಸಿ ಗಲಾಟೆ ಪ್ರಾರಂಭವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಕುಪಿತಗೊಂಡ ಭಾಸ್ಕರ ಹೆಂಡತಿ ಮೇಲೆ ಏಕಾಏಕಿ ಹಲ್ಲೆ ಮಾಡಿ ಅಲ್ಲೇ ಇದ್ದ ಕ್ರಿಕೆಟ್ ಆಟಕ್ಕೆ ಬಳಸುವ ವಿಕೇಟ್ ನ್ನು ಹೆಂಡತಿಯ ಮರ್ಮಾಂಗಕ್ಕೆ ಹೊಡೆದಿದ್ದಾನೆ ತೀರ್ವ ಕಿರುಚಾಟವನ್ನು ಕೇಳಿಸಿಕೊಂಡ ನೆರೆಹೊರೆಯರು ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿದ್ದ ರೇಖಾಳನ್ನು ಸಾರ್ವಜನಕ ಆಸ್ಪತ್ರೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆ ದಾಖಲಿಸಿದ್ದಾರೆ.ಘಟನೆ ಹಿನ್ನೆಲೆ; ದೊಡ್ಡ ಉಳ್ಳಾರ್ತಿ ಮೂಲದ ಭಾಸ್ಕರನಿಗೆ ಆಂದ್ರಪ್ರದೇಶದ ರಾಯದುರ್ಗ ಮೂಲಕದ ರೇಖಾಳೊಂದಿಗೆ 2008ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಕಳೆದ ೧೬ ವರ್ಷದ ದಾಂಪತ್ಯಕ್ಕೆ ಎರಡು ಗಂಡು ಮಕ್ಕಳೂ ಸಹ ಇದ್ದಾರೆ. ಹಾಗಾಗೆ ಸಣ್ಣಪುಟ್ಟ ಕಲಹಗಳು ಕಾಣಿಸಿಕೊಳ್ಳುತ್ತಿದ್ದವು ಮತ್ತೆ ಹಾಗೆ ಸರಿಹೋಗುತ್ತಿದ್ದವು ಎಂದು ರೇಖಾಳಾ ಸಹೋದರ ಕೆ.ಹನುಮಂತ ಪೊಲೀಸ್ ರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕೆಲ ದಿನಗಳಿಂದ ಭಾಸ್ಕರ ರೇಖಾಳಾ ಶೀಲಶಂಕಿಸಿ ಪ್ಯಾಶಾಚಿಕ ಕೃತ್ಯ ಮಾಡಿದ್ದಾನೆ ಎನ್ನುತ್ತಾರೆ. ಆದರೆ, ಇತ್ತೀಚಿಗಷ್ಟೇ ಭಾಸ್ಕರ ತನ್ನ ಹೆಂಡತಿ ರೇಖಾಳಾ ಶೀಲದ ಬಗ್ಗೆ ವಿಪರೀತ ಶಂಕೆ ವ್ಯಕ್ತಪಡಿಸಿ ಜುಲೈ-30ರ ಭಾನುವಾರ ಹೆಂಡತಿಯೊಂದಿಗೆ ಜಗಳ ಪ್ರಾರಂಭವಾಗಿ ಆಕೆಯ ಮೇಲೆ ದೈಹಿಕವಾಗಿ ರಾತ್ರಿ ಇಡೀ ಹಲ್ಲೆ ನಡೆಸಿದ್ದಾನೆ. ಸೋಮವಾರ ಸುಮಾರು 11 ಸಮಯದಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿ ಅಲ್ಲೇ ಇದ್ದ ಮಜ್ಜಿಗೆ ಕಡಿಯುವ ಕಡಗೋಲು, ಕ್ರಿಕೇಟ್ ನ ವಿಕೇಟ್ ನಿಂದ ಆಕೆಯ ಮರ್ಮಾಂಗಕ್ಕೆ ಹಾಕಿ, ಹಲ್ಲೆ ನಡೆಸಿದ್ದಾನೆ. ಸುದ್ದಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಮನೆ, ಪರಿಶೀಲಿಸಿದಾಗ ಬಾಸ್ಕರನ ಪೈಶಾಚಿಕ ಕೃತ್ಯ ಬಯಲಿಗೆ ಬಂದಿದೆ. ಇದೇ ಸಂದರ್ಭದಲ್ಲಿ ಮನೆಯೊಳಗೆ, ಹೊರಗೆ ಸಂಪೂರ್ಣ ರಕ್ತದ ಕಲೆಗಳಾಗಿದ್ದು, ಭಾಸ್ಕರನನ್ನು ಪೊಲೀಸರು ವಶಪಡಿಸಿಕೊಂಡು ಠಾಣೆಗೆ ಕರೆತಂದಾಗ ಭಾಸ್ಕರ ಅಸ್ವಸ್ಥನಾದಂತೆ ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಡನ ಕೃತ್ಯದಿಂದ ಜೀನ್ಮರಣ ಹೋರಾಟ ನಡೆಸುತ್ತಿರುವ ಎರಡು ಮಕ್ಕಳ ತಾಯಿ ರೇಖಾ ಚಿತ್ರದುರ್ಗ ಜಿಲ್ಲೆ ಆಸ್ಪತ್ರೆಗೆ ದಾಖಲಾಗಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಾವಗಡ ರಸ್ತೆಯ ತರಾಸು ಬಡಾವಣೆಯಲ್ಲಿ ಕೇವಲ ಕೆಲವೇ ಮನೆಗಳಿದ್ದು ರಾತ್ರಿ ವೇಳೆ ಯಾರೂ ಸಕಾಲಕ್ಕೆ ಸಹಾಯಕ್ಕೆ ದಾವಿಸಲು ಸಾಧ್ಯವಾಗಿಲ್ಲ. ಆರೋಪಿ ಭಾಸ್ಕರ ಕೃತ್ಯ ನಡೆಸುವ ಸಂದರ್ಭದಲ್ಲಿ ತನ್ನ ಇಬ್ಬರೂ ಮಕ್ಕಳನ್ನು ರೂಂನಲ್ಲಿ ಕೂಡಿಹಾಕಿ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.