i
ಪ್ರಾ.ಶಾಲಾ ಶಿಕ್ಷಕರ ಸೌಹಾರ್ದ ಬ್ಯಾಂಕ್ ಅಧ್ಯಕ್ಷರಾಗಿಮಹಾಬಲೇಶ್ವರ ಹೆಗಡೆ ಅವಿರೋಧ ಆಯ್ಕೆ …
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ನಿಯಮಿತ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅವರ ನೇತೃತ್ವದ ಎಲ್ಲ 17 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗದ 11 ಸ್ಥಾನಗಳಿಗೆ ಮಹಾಬಲೇಶ್ವರ ಹೆಗಡೆ, ತಿಮ್ಮಪ್ಪ ಎಂ.ಎಸ್, ಪುಟ್ಟಪ್ಪ ಕೆ.ವಿ, ಸತೀಶ ರಾಮಕೃಷ್ಣ ಹೆಗಡೆ, ಆನಂದ್ ಎಂ.ಸಿ., ಶ್ರೀಕಾಂತ್ ಎಸ್, ಕರಿಬಸಯ್ಯ ಕೆ.ಎಂ, ಆಂಜನೇಯ ಬಿ., ಬಾಲಚಂದ್ರ ಗಜಾನನ ಭಟ್ಟ, ಕೆರಿಯಪ್ಪ ಹೆಚ್., ಜಗದೀಶ್ ಎಸ್., ಇವರ ಆಯ್ಕೆ ನಡೆದಿದೆ. ಪರಿಶಿಷ್ಟ ಜಾತಿ ಸ್ಥಾನದಿಂದ ಎಸ್.ವಿ. ವಿಜಯ ಕುಮಾರ ಸ್ವಾಮಿ, ಪರಿಶಿಷ್ಟ ಪಂಗಡದಿಂದ ಜಿ. ಪಾಲಯ್ಯ, ಬಿಸಿಎಂ ಎ ವರ್ಗದಿಂದ ಅಲ್ತಾಫ್ ಹುಸೇನ್ ಬೆನಕನಕೋಡ, ಬಿಸಿಎಂ ಬಿ ವರ್ಗದಿಂದ ಜಗದೀಶ್ ಕಾಗಿನೆಲ್ಲಿ, ಮಹಿಳಾ ಮೀಸಲು ಸ್ಥಾನದಿಂದ ಲಲಿತಾ ಹೆಗಡೆ ಮತ್ತು ಹೆಚ್.ಜಿ. ಆಶಾ ಆಯ್ಕೆಯಾಗಿದ್ದಾರೆ.ಈ ಸೌಹಾರ್ದ ಸಹಕಾರ ಮಂಡಳಿಗೆ ಆಗಸ್ಟ್ 13ರಂದು ಚುನಾವಣೆ ನಿಗಧಿಯಾಗಿತ್ತು. ನಾಮಪತ್ರ ಸಲ್ಲಿಕೆಗೆ ಶನಿವಾರ ಕೊನೆಯ ದಿನವಾಗಿದ್ದು ೨೭ ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಆಗಸ್ಟ್ ೭ರ ಸೋಮವಾರ ಕೊನೆಯ ದಿನವಾಗಿದ್ದು, ೧೦ ಮಂದಿ ಸ್ಪರ್ಧಾಕಾಂಕ್ಷಿಗಳು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯು 17 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಎನ್.ಜಿ. ರುದ್ರಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿ ನಿಯಮಿತದ ವ್ಯವಸ್ಥಾಪಕ ಮಂಜುನಾಥ್ ತಿಳಿಸಿದ್ದಾರೆ.