i
ಭದ್ರಾ ನೀರಿಗಾಗಿ ಕೈಗೊಂಡ ದಾವಣಗೆರೆ ಬಂದ್…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಭದ್ರಾ ಜಲಾಶಯದ ನೀರಿಗಾಗಿ ರೈತ ಸಂಘಟನೆ ಹಾಗೂ ಬಿಜೆಪಿ ರೈತ ಮೋರ್ಚಾ ವತಿಯಿಂದ ದಾವಣಗೆರೆ ಬಂದ್ಗೆ ಸೋಮವಾರ ಕರೆ ನೀಡಲಾಗಿದ್ದು ಬಂದ್ ಯಶಸ್ವಿಯಾಗಿದೆ.
ನೂರು ದಿನಗಳ ಕಾಲ ಭದ್ರಾ ಡ್ಯಾಂನಿಂದ ಬಲದಂಡೆ ನಾಲೆಯಲ್ಲಿ ನೀರು ಹರಿಸಲು ಆಗ್ರಹಿಸಿ ಭಾರತೀಯ ರೈತ ಒಕ್ಕೂಟದಿಂದ ದಾವಣಗೆರೆ ಬಂದ್ ಗೆ ಸೋಮವಾರ ಕರೆ ನೀಡಲಾಗಿತ್ತು.
ವರ್ತಕರು ತಮ್ಮ ಅಂಗಡಿ ವೈಹಿವಾಟು ಬಂದ್ ಮಾಡಿ ಬಂದ್ ಗೆ ಬೆಂಬಲ ನೀಡಿದರು. ಅಲ್ಲಲ್ಲಿ ತೆರೆದಿದ್ದ ಒಂದೊಂದು ಅಂಗಡಿಗಳನ್ನು ಬಲವಂತವಾಗಿ ಪ್ರತಿಭಟನಾಕಾರರು ಮುಚ್ಚಿಸಿದರು. ಹಣ್ಣಿನ ಅಂಗಡಿ ತರೆದಿದ್ದರಿಂದಾಗಿ ಅಂಗಡಿಯಯಲ್ಲಿನ ಕಲ್ಲಂಗಡಿ ಹಣ್ಣು ನೆಲಕ್ಕೆ ಹಾಕಿ ಮಾಜಿ ಮೇಯರ್ ಬಿ.ಜೆ ಅಜಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮೇಯರ್ ದುರ್ವರ್ತನೆಗೆ ಖಂಡನೆಯೂ ವ್ಯಕ್ತವಾಗಿದೆ. ಇನ್ನೊಂದೆಡೆ ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ಬಸ್ ತಡೆದು ಬಂದ್ ಗೆ ಬೆಂಬಲಿಸುವಂತೆ ಆಗ್ರಹಿಸಿದ್ದರು.
ಭದ್ರಾ ಡ್ಯಾಂನ ಬಲದಂಡೆ ನಾಲೆಯಲ್ಲಿ ನೀರು ಹರಿಸುವುದಾಗಿ ಭರವಸೆ ಕೊಟ್ಟಿದ್ದ ಸರ್ಕಾರ ಉಲ್ಟಾ ಹೊಡೆದಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ನಾಲೆಯಲ್ಲಿ ನೀರು ಹರಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಎಚ್ಚರಿಕೆ ನೀಡಿದ್ದಾರೆ. ಬೈಕ್ರ್ಯಾಲಿ ನಡೆಸಿ ಬಂದ್ಗೆ ಬೆಂಬಲಿಸುವಂತೆ ಕೇಳಿಕೊಳ್ಳಲಾಗುತ್ತಿದೆ. ಹಲವೆಡೆ ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗುತ್ತಿದೆ.ಬಂದ್ ನಡೆಸಲು ಮುಂದಾಗಿರುವ ರೈತ ಮುಖಂಡರ ಮನವಿಗೆ ಕೆಲವೆಡೆ ನಗರದಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಬೆಳಿಗ್ಗೆ ಏಳು ಗಂಟೆಗೆ ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ರೈತರು, ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು. ಚೇಂಬರ್ ಆಫ್ ಕಾಮರ್ಸ್, ದಲ್ಲಾಳಿ ಮಾಲೀಕರ ಸಂಘ, ಕೂಲಿ ಕಾರ್ಮಿಕರ ಸಂಘ, ಖಾಸಗಿ ಬಸ್ ಗಳ ಮಾಲೀಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳು, ಆಟೋ ಮಾಲೀಕರ ಸಂಘ, ಕ್ರಿಮಿನಾಶಕ, ರಸಗೊಬ್ಬರ ಜಿಲ್ಲಾ ಸಂಘ, ಆಮ್ ಆದ್ಮಿ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಬೈಕ್ ರ್ಯಾಲಿ-ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದು, ನೀರಿಲ್ಲದೆ ಕಷ್ಟ ಪಡುತ್ತಿದ್ದಾರೆ. ಭತ್ತದ ಪೈರು ಒಣಗುತ್ತಿದ್ದು, ಭತ್ತ ಕಾಳು ಕಟ್ಟುವಾಗ ನೀರಿಲ್ಲದೆ ಸಮಸ್ಯೆಯಾಗಿದೆ. ತಕ್ಷಣವೇ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.ಭಾನುವಾರ ಸಂಜೆವರೆಗೂ ಗಡುವ ನೀಡಿದ್ದ ರೈತರುಭಾನುವಾರ ಸಂಜೆವರೆಗೂ ಸರ್ಕಾರದ ಆದೇಶ ಬಾರದೇ ಇದ್ದರೆ ಸೋಮವಾರ ಬಂದ್ನಡೆಸುವುದಾಗಿ ಭಾರತೀಯ ರೈತ ಒಕ್ಕೂಟ ಕರೆ ನೀಡಿತ್ತು. ಜಂಟಿ ಪತ್ರಿಕಾಗೋಷ್ಟಿ ನಡೆಸಿದ್ದ ರೈತ ಮುಖಂಡರಾದ ಎಚ್ಆರ್ ಲಿಂಗರಾಜ್, ಕೊಳೇನಹಳ್ಳಿ ಬಿಎಂ ಸತೀಶ್ಹಾಗೂ ಹಲವರು, ಭದ್ರಾ ಬಲದಂಡೆ ನಾಲೆಗೆ ಭತ್ತದ ಬೆಳೆಗಾಗಿ 100 ದಿನ ನೀರುಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಸರ್ಕಾರದಿಂದ ಲಿಖಿತ ಆದೇಶ ಬಾರದೇ ಇದ್ದರೆ, ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಬಂದ್ ನಡೆಸಲಾಯಿ.ಭದ್ರಾ ನೀರು ಹರಿಸುವ ಕುರಿತು ಮಾತನಾಡಿದ ಸಚಿವರು, ಎರಡು ದಿನದಲ್ಲಿ ಸಮಸ್ಯೆ ಬಗೆಹರಿದು ನೀರು ಹರಿಸಲಾಗುತ್ತದೆ. ನೀರಾವರಿ ಸಚಿವರು ದೆಹಲಿಗೆ ಹೋಗಿದ್ದರಿಂದ ವಿಳಂಬವಾಗಿದ್ದು ಅವರು ಬಂದ ತಕ್ಷಣ ನಿರ್ಧಾರ ಕೈಗೊಳ್ಳಲಾಗುತ್ತದೆ. ಯಾವ ರೀತಿ ನೀರು ಬಿಡಬೇಕು ಎಂಬ ಬಗ್ಗೆ ಶಿವಮೊಗ್ಗ, ಹರಪ್ಪನಹಳ್ಳಿ, ದಾವಣಗೆರೆ ಜಿಲ್ಲೆಯವರು ಒಂದೊಂದು ಹೇಳುತ್ತಿದ್ದಾರೆ. ಆದರೆ ಈ ಎಲ್ಲಾ ಬಗ್ಗೆ ಚರ್ಚೆ ಆಗಿದೆ. ಅಧಿಕಾರಿಗಳು ನೀರಿದೆ ಎಂದಿದ್ದಾರೆ. 100% ನಾನಿರುವವರೆಗೂ ರೈತರು ಭತ್ತದ ಬೆಳೆಯಬಹುದು ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಭರವಸೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.