i
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಗ್ರಾಮೀಣಾ ಪ್ರತಿಭೆ ಹುಲುಗುಲಕುಂಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಮೃತ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಹುಲುಗುಲಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಮೃತ ಅವರು ಇನ್ಸ್ ಸ್ಪೈರ್ ಅವಾರ್ಡ್ ನಲ್ಲಿ ತಯಾರಿಸಿರುವ ಕಾರ್ಖಾನೆ ಗಳಿಂದ ಬಿಡುಗಡೆ ಆಗುವ ಬಣ್ಣದ ನೀರನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ಶುದ್ಧೀಕರಣ ಮಾಡಿ ಆ ನೀರನ್ನು ಮರುಬಳಕೆ ಮಾಡುವ ಸಾಧನವನ್ನು ತಯಾರಿಸಿದ್ದು ಈ ಮಾದರಿಯು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.ತಾಲ್ಲೂಕಿನ ಹುಲುಗಲುಕುಂಟೆ ಗ್ರಾಮದ ವಿದ್ಯಾರ್ಥಿನಿ ಅಮೃತ ಅವರ ಮನೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿನಿ ಅಮೃತ ಅವರನ್ನು ಸನ್ಮಾನಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಬಿಆರ್.ಸಿ ತಿಪ್ಪೇರುದ್ರಪ್ಪ, ಚಿತ್ರದುರ್ಗ ಡಯಟ್ ಹಿರಿಯ ಉಪನ್ಯಾಸಕ ಪ್ರಸಾದ್ , ಉಪನ್ಯಾಸಕ ನಿತ್ಯಾನಂದ, ಶಿಕ್ಷಣ ಸಂಯೋಜಕ ಶಶಿಧರ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದು ವಿದ್ಯಾರ್ಥಿನಿಯನ್ನು ಗೌರವಿಸಿ ಶುಭಹಾರೈಸಿ, ಮಾತನಾಡಿದರು. ಇದೇ ಸಂದರ್ಭದಲ್ಲಿ ಇನ್ಸ್ ಸ್ಪೈರ್ ಅವಾರ್ಡ್ ನಲ್ಲಿ ವಿದ್ಯಾರ್ಥಿನಿ ಕುಮಾರಿ ಅಮೃತರವರಿಗೆ ಈ ಅದ್ಭುತ ಮಾದರಿಯನ್ನು ತಯಾರಿಸಲು ಸಹಕಾರ ನೀಡಿದ ಶಿಕ್ಷಕಿ ನಾಗಲಕ್ಷ್ಮಿ ಅವರನ್ನು ಶಿಕ್ಷಣ ಇಲಾಖೆ ವತಿಯಿಂದ ಅಭಿನಂದಿಸಿದರಲ್ಲದೆ ಮುಂದಿನ ದಿನಗಳಲ್ಲೂ ಸಹ ಸೃಜನಶೀಲ ವಿದ್ಯಾರ್ಥಿಗಳ ಹೊಸಹೊಸ ಸಂಶೋಧನೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಶಿಕ್ಷಕಿಗೆ ಸೂಚಿಸಿದರು.