i
2024ನೇ ಸೆಪ್ಟೆಂಬರ್ 15 ರಿಂದ 17ನೇ ಕನ್ನಡ ವಿಜ್ಞಾನ ಸಮ್ಮೇಳನ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಸ್ವದೇಶೀ ವಿಜ್ನಾನ ಆಂದೋಲನ – ಕರ್ನಾಟಕವು ರಾಜ್ಯ ಮತ್ತು ದೇಶದಾದ್ಯಂತ ವಿಜ್ಞಾನ, ತಂತ್ರಜ್ಞಾನ ಮತ್ತು ಭಾರತೀಯ ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡುವ ಸದುದ್ದೇಶದಿಂದ 2005ರಿಂದ ಪ್ರತಿ ವರ್ಷ ಒಂದೊಂದು ಪ್ರತಿಷ್ಠಿತ ಸಂಸ್ಥೆ ಮತ್ತು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿಕೊಂಡು ಬರುತ್ತಿದ್ದು, ಪ್ರಸ್ತುತ 17ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ತುಮಕೂರು ವಿಶ್ವವಿದ್ಯಾಲಯದಲ್ಲಿ 2023ರ ಅಕ್ಟೋಬರ್ 27ರಿಂದ 29ರವರೆಗೆ ನೆಡೆಯಿತು. ಅಂತಿಮ ದಿನದ ಸಮ್ಮೇಳನದ ಸಮರೋಪ ಸಮಾರಂಭದಲ್ಲಿ ಮುಂದಿನ ಸಮ್ಮೇಳನ ನೆಡೆಸಲು ಘೋಷಣೆ ಮಾಡಲಾಯಿತು.
ಮುಂದಿನ 18ನೇ ಕನ್ನಡ ವಿಜ್ಞಾನ ಸಮ್ಮೇಳನವು 2024ನೇ ಸೆಪ್ಟೆಂಬರ್ 15 ರಿಂದ 17ನೇ ದಿನದಂದು ನೆಡೆಸಲಾಗುವುದು ಎಂದು ತೀರ್ಮಾನಿಸಲಾಯಿತು.
ಸ್ವದೇಶಿ ವಿಜ್ನಾನ ಆಂದೋಲನದ ಅಧ್ಯಕ್ಷರು ಮತ್ತು ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ಅವರಿಗೆ ಸ್ವದೇಶಿ ವಿಜ್ಞಾನ ಆಂದೋಲನದ ಲೋಗೋ ಭಾವಚಿತ್ರವನ್ನು ಕೋಡುವುದರ ಮೂಲಕ 18ನೇ ಕನ್ನಡ ವಿಜ್ಞಾನ ಸಮ್ಮೇಳನವು 2024ನೇ ಸೆಪ್ಟೆಂಬರ್ 15 ರಿಂದ 17ನೇ ದಿನ ನಡೆಸಲು ಘೋಷಣೆ ಮಾಡಿದರು.
18ನೇ ಕನ್ನಡ ವಿಜ್ಞಾನ ಸಮ್ಮೇಳನದ ಆಯೋಜನೆಗೆ ಸಕಲ ಸಹಕಾರ ನೀಡುವುದಾಗಿ ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ರವರು ಸಮಾರಂಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯದ ಪಿಎಂಇಬಿ ನಿರ್ದೇಶಕ ಡಾ.ಸಿದ್ದರಾಜು ವಿ.ಜಿ ಹಾಗೂ ಶ್ರೀಹರ್ಷ ಕುಳೆನೂರ್ ಸಮಾರಂಭದಲ್ಲಿ ಹಾಜರಿದ್ದರು.