i
ಕಾಂಗ್ರೆಸ್ ಜೀವಂತವಾಗಿದ್ರೆ ಮೊದ್ಲು ಅವನನ್ನ ಪಾರ್ಟಿಯಿಂದ ಸಸ್ಪೆಂಡ್ ಮಾಡ್ಲಿ…
ಚಂದ್ರವಳ್ಳಿ ನ್ಯೂಸ್, ಚಮರಾಜನಗರ:
ಶ್ಯಾಮನೂರು ಶಿವಶಂಕರಪ್ಪನವರು ಶಿವಮೊಗ್ಗ ಬಿಜೆಪಿ ಸಂಸದರನ್ನು ಗೆಲ್ಲಿಸುವಂತೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕರೆ ನೀಡಿದ್ದ ಹೊಸ ವಿವಾದ ಸೃಷ್ಠಿಸತೊಡಗಿದೆ. ತನ್ನದೆ ಪಕ್ಷದ ನಾಯಕರು ಶಾಮನೂರು ಶಿವಶಂಕರಪ್ಪ ಮೇಲೆ ತಿರುಗಿ ಬಿದ್ದಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ ಶಾಮನೂರು ಶಿವಶಂಕರಪ್ಪ ವಿರುದ್ಧ ವಾಗ್ದಾಳಿ ಏಕವಚನದಲ್ಲೇ ತೀವ್ರ ಮಾಡಿ ಆತ ಹಿರಿಯ ಮುತ್ಸದ್ದಿಯೂ ಅಲ್ಲ. ಜಾತಿವಾದಿ ಮುತ್ಸದ್ಧಿ ಎಂದು ಟೀಕಿಸಿದರು.ಶಿವಮೊಗ್ಗದ ಬಿಜೆಪಿ ಸಂಸದ ಬಿವೈ ರಾಘವೇಂದ್ರರನ್ನು ಗೆಲ್ಲಿಸುವಂತೆ ಕರೆಕೊಟ್ಟಿ ಶಾಮನೂರು ಹೇಳಿಕೆ ವಿರುದ್ಧ ಸಿಡಿದ ವಿಶ್ವನಾಥ್ ಕಾಂಗ್ರೆಸ್ ಜೀವಂತವಾಗಿದ್ರೆ ಮೊದ್ಲು ಅವನನ್ನ ಪಾರ್ಟಿಯಿಂದ ಸಸ್ಪೆಂಡ್ ಮಾಡ್ಲಿ ಎಂದು ಸವಾಲ್ ಹಾಕಿದರು. ಕಾಂಗ್ರೆಸ್ನಿಂದ ಶಾಮನೂರು ಶಿವಶಂಕರಪ್ಪ ಟಿಕೆಟ್ ಪಡೆದು ಶಾಸಕರಾಗಿದ್ದಾರೆ, ಮಗ ಮಂತ್ರಿಯಾಗಿದ್ದಾರೆ. ಕಾಂಗ್ರೆಸ್ನಲ್ಲಿದ್ದುಕೊಂಡೇ, ಕಾಂಗ್ರೆಸ್ ಅಧಿಕಾರ ಅನುಭವಿಸಿಕೊಂಡೇ ಬೇರೆ ಪಾರ್ಟಿಗೆ ಕ್ಯಾನ್ವಸ್ ಮಾಡ್ತಿಯಲ್ಲ ಏನು ಹೇಳಬೇಕು ನಿನಗೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಇವರೆಲ್ಲ ಪಕ್ಷ ಬೇರೆ ಬೇರೆಯಾದ್ರೂ ಒಳಗೆ ಎಲ್ಲ ಕಡೆ ಒಂದೇ ಇರ್ತಾರೆ. ಅವರೆಲ್ಲ ನೆಂಟರು. ಪಾರ್ಟಿ ಸೋತ್ರು ನೆಂಟಸ್ತಿಗೆ ಸೋಲುಬಾರದು ಅವ್ರಿಗೆ. ಮೊದಲು ಇಂಥವನನ್ನು ಪಕ್ಷದಲ್ಲಿಟ್ಟುಕೊಳ್ಳೋದೇ ತಪ್ಪು. ಕಾಂಗ್ರೆಸ್ ಪಕ್ಷ ಜೀವಂತ ಇದ್ರೆ ಮೊದಲು ಕಿತ್ತೊಗೆಯಿರಿ ಎಂದು ಕಿಡಿಕಾರಿದರು.ಮುಂದುವರೆದು ಮಾತನಾಡಿದ ವಿಶ್ವನಾಥ್, ಮೀಸಲಾತಿ ನೀಡಬೇಕಾದರೆ ಎಲ್ಲ ಕೆನೆಪದರ ತೆಗೆದು ಅರ್ಹರಿಗೆ ಮೀಸಲಾತಿ ನೀಡಬೇಕು. ಮಳೆ ಗಾಳಿ ಚಳಿ ಅನ್ನದೆ ಕುರಿ ಕಾಯೋ ಅಲೆಮಾರಿ ಕುರುಬನ ಮಗನು ಒಂದೇ, ಅದೇ ಕುರುಬ ಜಾತಿಯ ವಿಶ್ವನಾಥ್ ಮಗನು ಒಂದೆ ಅಂದ್ರೆ ಹೇಗೆ? ಖರ್ಗೆ ಸಾಹೇಬ್ರ ಮಗನಿಗೂ ಒಂದೇ ಮೀಸಲಾತಿ ನಮ್ಮೂರಲ್ಲಿ ತಮಟೆ ಹೊಡೆಯೋ ಮಗನಿಗೂ ಒಂದೇ ಮೀಸಲಾತಿ ಇದ್ಯಾವ ನ್ಯಾಯ? ಎಂದು ಪ್ರಶ್ನಿಸಿದರು.