i
ಲೋಕಾಯುಕ್ತ ದಾಳಿ,5 ಸಾವಿರ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಪೊಲೀಸ್…
ಚಂದ್ರವಳ್ಳಿ ನ್ಯೂಸ್, ಮಾಯಕೊಂಡ(ದಾವಣಗೆರೆ):
ಹೆಡ್ ಕಾನ್ ಸ್ಟೇಬಲ್ ನೊಬ್ಬ ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತರ ಅತಿಥಿಯಾಗಿ ಜೈಲು ಸೇರಿದ್ದಾನೆ.
ದಾವಣಗೆರೆ ತಾಲೂಕು ಮಾಯಕೊಂಡ ಪೊಲೀಸ್ಠಾಣೆ ಮುಖ್ಯಪೇದೆ ಹೊನ್ನೂರಸ್ವಾಮಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಹೆಡ್ ಕಾನ್ಸ್ಟೇಬಲ್. ಈತ ಅಪಘಾತಗೊಂಡಿದ್ದ ಬೈಕ್ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ.
ಕಳೆದ ಜ.31ರಂದು ಅಪಘಾತಕ್ಕೀಡಾಗಿದ್ದ ಬೈಕ್ ಬಿಟ್ಟುಕೊಡಲು ಹೊನ್ನೂರು ಗೊಲ್ಲರಹಟ್ಟಿ ಗ್ರಾಮದ ಚಂದ್ರಪ್ಪ ಎಂಬುವರಿಗೆ ಹೆಡ್ ಕಾನ್ಸಟೇಬಲ್ ಹೊನ್ನೂರುಸ್ವಾಮಿ 6,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ 1,000 ರೂ. ಹಣವನ್ನು ಮುಂಗಡವಾಗಿ ಪಡೆದುಕೊಂಡು, ಇನ್ನುಳಿದ 5,000 ರೂ. ಲಂಚದ ಹಣವನ್ನು ಶನಿವಾರ ತಂದುಕೊಡುವಂತೆ ಹೊನ್ನೂರುಸ್ವಾಮಿ ತಿಳಿಸಿದ್ದರು.
ಏನಿದು ಘಟನೆ-ಮಾಯಕೊಂಡ ಬಳಿಯ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದ ಚಂದ್ರಪ್ಪರ ತಮ್ಮನ ಹೆಂಡತಿ ತಮ್ಮನ ಮಗನಾದ ನರಸಿಂಹಮೂರ್ತಿ ರವರ ಯಮಹ ಎಫ್ಜೆಡ್ ಬೈಕ್ ಗೆ ಮತ್ತು ನವೀನ್ ಕುಮಾರ್ ಎಂಬುವವರ ಕಾರಿನ ಮಧ್ಯೆ ಅಪಘಾತವಾಗಿತ್ತು. ಈ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.
ನಂತರ ಹೆಡ್ ಕಾನ್ ಸ್ಟೇಬಲ್ ಹೊನ್ನೂರುಸ್ವಾಮಿ ಚಂದ್ರಪ್ಪ ಎಂಬುವರ ಕಡೆಯ ಬೈಕ್ ನ್ನು ಬಿಡಲು ಐಎಂವಿ ಮಾಡಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ನಂತರ ಮೊದಲಿಗೆ ಸಾವಿರ ರೂ. ಗಳನ್ನು ಹೆಡ್ ಕಾನ್ ಸ್ಟೇಬಲ್ ನ್ನು ತೆಗೆದುಕೊಂಡಿದ್ದರು. ಬಳಿಕ 5000 ರೂ. ಲಂಚದ ಹಣವನ್ನು ಮಾಯಕೊಂಡ ಪೊಲೀಸ್ ಠಾಣಾ ಹೊರಗಡೆ ಆವರಣದಲ್ಲಿ ಫಿರ್ಯಾಧಿ ಕಡೆಯಿಂದ ಪಡೆಯುವಾಗ ಟ್ರ್ಯಾಪ್ ಆಗಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪೂರೆ, ಪೊಲೀಸ್ ಉಪಾಧೀಕ್ಷಕಿ ಕೆ.ಕಲಾವತಿ ಪೊಲೀಸ್ ನಿರೀಕ್ಷಕರಾದ ಪ್ರಭು ಬ. ಸೂರಿನ, ಮಧುಸೂದನ್ ಸಿ, ಹೆಚ್.ಎಸ್, ರಾಷ್ಟ್ರಪತಿ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರಾದ ವೀರೇಶಯ್ಯ, ಆಂಜನೇಯ ವಿ.ಹೆಚ್, ಸುಂದರೇಶ, ಸುರೇಶ.ಎಂ,.ಆರ್, ಧನರಾಜ್, ಮಲ್ಲಿಕಾರ್ಜುನ, ಲಿಂಗೇಶ, ಗಿರೀಶ, ಕೋಟಿನಾಯ್ಕ, ಕೃಷ್ಣನಾಯ್ಕ, ಬಸವರಾಜ ಲೋಕಾಯುಕ್ತ ದಾಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.