i
ನಾಪತ್ತೆಯಾದವಳು ಸಮಾಧಿಯಾಗಿ ಪತ್ತೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ವರ್ಷದ ಹಿಂದೆ ನಾಪತ್ತೆಯಾದ ಮಹಿಳೆಯ ಪ್ರಕರಣ ಈಗ ಪತ್ತೆಯಾಗಿದೆ. ಚನ್ನಗಿರಿ ತಾಲ್ಲೂಕು ಸೂಳೆಕೆರೆ ಸಮೀಪ ಸಮಾಧಿ ಮಾಡಲಾಗಿದ್ದ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹವನ್ನು ಹೊರತೆಗೆಯಲಾಗಿದೆ.
ಭದ್ರಾವತಿ ತಾಲ್ಲೂಕು ಅರತೊಳಲು ಕೈಮರದ ಸಮೀಪದ ನಿವಾಸಿ ನಾಗರತ್ನಮ್ಮ ಕಾಣೆಯಾಗಿದ್ದರು. ಈ ಸಂಬಂಧ ಪ್ರಕರಣ ಸಹ ದಾಖಲಾಗಿತ್ತು. ಇದೇ ಸಂದರ್ಭದಲ್ಲಿ 40 ವರ್ಷದ ಮಹಿಳೆಯ ಮೃತದೇಹವೊಂದು ಭದ್ರಾ ನಾಲೆಯಲ್ಲಿ ಕೊಚ್ಚಿಕೊಂಡು ಬಂದು ಸೂಳೆಕೆರೆ ಸಮೀಪ ಪತ್ತೆಯಾಗಿತ್ತು. ವಾರಸ್ದಾರರು ಇಲ್ಲದ ಕಾರಣಕ್ಕೆ ಮೃತರನ್ನು ಪೊಲೀಸರು ಸಮಾಧಿ ಮಾಡಿದ್ದರು.
2020 ರಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಕಾಣೆಯಾದ ಮಹಿಳೆಯ ಫೋಟೋಗೂ ಸೂಳೆಕೆರೆ ಸಮೀಪ ಸಮಾಧಿ ಮಾಡಿದ್ದ ಮಹಿಳೆಯ ಮೃತದೇಹಕ್ಕೂ ಹೋಲಿಕೆ ಕಂಡು ಬಂದಿತ್ತು. ಈ ಸಂಬಂಧ ಚನ್ನಗಿರಿ ಹಿರಿಯ ಸಿವಿಲ್ ಹಾಗೂ ಜೆಎಂಫಿಸಿ ಕೋರ್ಟ್ನಲ್ಲಿ ಪಿಟಿಷನ್ ಹಾಕಲಾಗಿತ್ತು. ಈ ಸಂಬಂಧ ಇದೀಗ ಕೋರ್ಟ್ ಆದೇಶ ಹೊರಬಿದ್ದಿದೆ. ಸಮಾಧಿಯಾದ ಮಹಿಳೆ ನಾಗರತ್ನಮ್ಮ ಎನ್ನಲಾಗಿದೆ.