i
ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿತ್ರದುರ್ಗ ಜಿಲ್ಲೆಯವರ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 40 ರಿಂದ 50 ವರ್ಷದೊಳಗಿನ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಮುರಳೀಧರ ಪ್ರಥಮ ಸ್ಥಾನ, ಗುಂಡೇರಿ ಶಿಕ್ಷಕ ಚಂದ್ಯಾನಾಯ್ಕ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಇವರಿಗೆ ಸಹಾಯಕ ನಿರ್ದೇಶಕರಾದ ಸುಚೇತ ಎಂ ನೆಲವಿಗಿ ಅಭಿನಂದನಾ ಪತ್ರವನ್ನು ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ ಟಿ ತಿಮ್ಮಾರೆಡ್ಡಿ, ಕಾರ್ಯದರ್ಶಿ ಎಸ್ ಕೆ ಮಂಜುನಾಥ್, ಖಜಾಂಚಿ ಡಿ ವೀರೇಶ್, ಕಾರ್ಯಾಧ್ಯಕ್ಷ ಎಸ್ ವೀರಣ್ಣ ಉಪಾಧ್ಯಕ್ಷ ಆರ್ ಶ್ರೀನಿವಾಸ ಸದಸ್ಯ ಶಶಿಧರ್ ಕೆ ಎನ್ ಉಪಸ್ಥಿತರಿದ್ದರು.