i
ಮಕ್ಕಳ ಸಮಗ್ರ ಆರೈಕೆಗಾಗಿ “ಆರ್ಬಿಎಸ್ಕೆ” ಸದುಪಯೋಗ ಪಡೆದುಕೊಳ್ಳಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಮುದಾಯದ ಎಲ್ಲಾ ಮಕ್ಕಳಿಗೆ ಸಮಗ್ರ ಆರೈಕೆಗಾಗಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಚಟುವಟಿಕೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಚಿತ್ರದುರ್ಗ ಭರಮಸಾಗರ, ಬೇವಿನಹಳ್ಳಿ, ನಂದಿಹಳ್ಳಿ ಗ್ರಾಮಗಳ ಒಟ್ಟು 5 ಅಂಗನವಾಡಿ ಕೇಂದ್ರಗಳ ಒಟ್ಟು 151 ಮಕ್ಕಳ ಆರೋಗ್ಯ ತಪಾಸಣೆ ಎರಡು ವೈದ್ಯಾಧಿಕಾರಿಗಳ ತಂಡದಿಂದ ನಡೆಸಲಾಯಿತು.
ಬೇವಿನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ತಾಯಂದಿರ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಷ್ಟ್ರೀಯ ಬಾಲ್ ಸ್ವಾಸ್ಥ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿತು, ಇದು ನವೀನ ಮತ್ತು ಮಹತ್ವಾಕಾಂಕ್ಷೆಯ ಉಪಕ್ರಮವಾಗಿದೆ. ಇದು ಮಕ್ಕಳ ಆರೋಗ್ಯ ತಪಾಸಣೆ ಮತ್ತು ಆರಂಭಿಕ ಮಧ್ಯಸ್ಥಿಕೆ ಸೇವೆಗಳನ್ನು ಮೊದಲೇ ಗುರುತಿಸುವ ವ್ಯವಸ್ಥಿತ ವಿಧಾನವಾಗಿದೆ ಎಂದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವು ಎಲ್ಲಾ ಮಕ್ಕಳು ತಮ್ಮ ಸಂಪೂರ್ಣ ಸಾಮಥ್ರ್ಯವನ್ನು ಸಾಧಿಸಲು ಸಾಧ್ಯವಾಗುವಂತೆ ಮಕ್ಕಳ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುವ ಒಂದು ರೀತಿಯ ಕಾರ್ಯಕ್ರಮವಾಗಿದೆ ಮತ್ತು ಸಮುದಾಯದ ಎಲ್ಲಾ ಮಕ್ಕಳಿಗೆ ಸಮಗ್ರ ಆರೈಕೆಯನ್ನು ಒದಗಿಸುವುದು. ಈ ಕಾರ್ಯಕ್ರಮವು ಹುಟ್ಟಿನಿಂದ 18 ವರ್ಷ ವಯಸ್ಸಿನ ಮಕ್ಕಳನ್ನು 4 ಡಿಎಸ್ಗಳಿಗಾಗಿ ಸ್ಕ್ರೀನಿಂಗ್ಅನ್ನು ಒಳಗೊಂಡಿರುತ್ತದೆ. ಹುಟ್ಟಿನಲ್ಲಿ ದೋಷಗಳು, ರೋಗಗಳು, ನ್ಯೂನತೆಗಳು ಮತ್ತು ಬೆಳವಣಿಗೆಯ ವಿಳಂಬಗಳು, 32 ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳನ್ನು ಆರಂಭಿಕ ಪತ್ತೆ ಮತ್ತು ಉಚಿತ ಚಿಕಿತ್ಸೆ ಮತ್ತು ನಿರ್ವಹಣೆಗಾಗಿ, ತೃತೀಯ ಹಂತದಲ್ಲಿ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಗುರುತಿಸಲಾದ ಆಯ್ದ ಆರೋಗ್ಯ ಪರಿಸ್ಥಿತಿಗಳೊಂದಿಗೆ ರೋಗನಿರ್ಣಯ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಆರಂಭಿಕ ಹಸ್ತಕ್ಷೇಪ ಸೇವೆಗಳು ಮತ್ತು ಅನುಸರಣಾ ಆರೈಕೆಯನ್ನು ಒದಗಿಸಲಾಗುತ್ತದೆ. ಈ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಚಿತ್ರದುರ್ಗದಲ್ಲಿ ಎ ಮತ್ತು ಬಿ ತಂಡಗಳು ಇದ್ದು, ಪ್ರತಿ ತಂಡದಲ್ಲಿ ಇಬ್ಬರು, ಒಬ್ಬರು ಶುಶ್ರೂಷಾಧಿಕಾರಿ, ಒಬ್ಬರು ನೇತ್ರಾಧಿಕಾರಿ ಇರುತ್ತಾರೆ. ಚಿತ್ರದುರ್ಗ ತಾಲೂಕಿನ 530 ಅಂಗನವಾಡಿ ಕೇಂದ್ರಗಳು ಇದ್ದು, ಇದರಲ್ಲಿ 25933 ಮಕ್ಕಳನ್ನು ವರ್ಷದಲ್ಲಿ ಎರಡು ಬಾರಿ ಆರೋಗ್ಯ ತಪಾಸಣೆ ಮಾಡಲಾಗುವುದು. 434 ಶಾಲೆಗಳಲ್ಲಿ 45278 ಮಕ್ಕಳ ಆರೋಗ್ಯ ತಪಾಸಣೆ ವರ್ಷದಲ್ಲಿ ಒಮ್ಮೆಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಬೇವಿನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ದೈನಂದಿನ ಮಕ್ಕಳ ಲಸಿಕಾ ಕಾರ್ಯಕ್ರಮವೂ ಜರುಗಿತು. ಡಾ.ಮಹೇಂದ್ರಕುಮಾರ್, ಡಾ.ಸುಪ್ರಿತಾ, ಶುಶ್ರೂಷಕಿ ಪೂಜಾ, ಸಮುದಾಯ ಆರೋಗ್ಯಾಧಿಕಾರಿ ಬಿ.ಕೆ.ಸುಧಾ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಆಧಿಕಾರಿ ಮಲ್ಲಮ್ಮ, ಆಶಾ ಕಾರ್ಯಕರ್ತೆಯರಾದ ರಾಜೇಶ್ವರಿ, ಜ್ಯೋತಿಬಾಯಿ, ಅಂಗನವಾಡಿ ಕಾರ್ಯಕರ್ತೆಯರಾದ ನೇತ್ರಾವತಿ ಶಿವಮ್ಮ, ಭರಮಸಾಗರ ಅಂಗನವಾಡಿ ಕೇಂದ್ರದಲ್ಲಿ 1 ಮಗುವಿಗೆ ಹೃದಯದ ತೊಂದರೆ, 1 ಮಗುವಿಗೆ ವಕ್ರಪಾದದ ತೊಂದರೆ ಕಂಡು ಬಂದಿದ್ದು. ಮಕ್ಕಳನ್ನು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಉನ್ನತ ಮಟ್ಟದ ಉಚಿತ ಚಿಕಿತ್ಸೆಗಾಗಿ ನಿರ್ದೇಶನ ಮಾಡಲಾಯಿತು.