i
ಮಾ.14-17: ರಾಷ್ಟ್ರೀಯ ಪುರುಷ, ಮಹಿಳಾ ಖೋ- ಖೋ ಪಂದ್ಯಾ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ದೇಶೀಯ ಆಟಗಳಲ್ಲಿ ಒಂದಾಗಿರುವ ಖೋ-ಖೋ ಆಟದ ಸ್ಥಳೀಯ ಪ್ರತಿಭೆಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಪರಿಚಯಿಸಿ, ತೀರ್ಥಹಳ್ಳಿ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿರುವ ಏಕಲವ್ಯ ಸ್ಪೋರ್ಟ್ ಕ್ಲಬ್ಗೆ ಮಾರ್ಚ್ ೧೪, ೨೦೨೪ ರಿಂದ ಮಾರ್ಚ್ ೧೭ ರವರೆಗೆ ಗೆ
ಮತ್ತೊಮ್ಮೆ ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳಾ ಖೋ- ಖೋ ಪಂದ್ಯಾಟ ನಡೆಸಲು ಸಜ್ಜಾಗಿದೆ.
ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕ್ಲಬ್ನ ಪದಾಧಿಕರಿಗಳು, ‘ಖೋ-ಖೋ ಫೆಡರೇಷನ್ ಆಫ್ ಇಂಡಿಯಾ‘ ಇದಕ್ಕೆ ಅವಕಾಶ ನೀಡಿದೆ. ಈ ಬಾರಿ ತೀರ್ಥಹಳ್ಳಿಯ ಮಾರಿಕಾಂಬಾ ದೇವಿಯ ಜಾತ್ರೆಯು ಮಾರ್ಚ್ ೧೨ ರಿಂದ ೧೯ರವರೆಗೆ ವಿಜೃಂಭಣೆಯಿAದ ನಡೆಯಲಿದ್ದು, ದೇವಸ್ಥಾನದ ಆಡಳಿತ ಸಮಿತಿಯ ಸಹಯೋಗದೊಂದಿಗೆ ತೀರ್ಥಹಳ್ಳಿ ಜನತೆ ಸಂಭ್ರಮ ಪಡುವಂತೆ ಹಬ್ಬದ ವಾತಾವರಣವನ್ನು ಸೃಷ್ಟಿಸುವ ರೀತಿಯಲ್ಲಿ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಈ ಅಪರೂಪದ ಅವಕಾಶ ತೀರ್ಥಹಳ್ಳಿ ಜನತೆ ಯಾವಾಗಲೂ ನೆನಪಿಡುವಂತೆ ಆಗಬೇಕು ಎಂಬ ಮಹದುದ್ದೇಶ ಹೊಂದಲಾಗಿದೆ. ಈಗಾಗಲೇ ಮಾರಿಕಾಂಬಾ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ನಾಗರಾಜ ಶೆಟ್ಟಿ ಮತ್ತು ಸಮಿತಿ ಸದಸ್ಯರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಇದು ಕೇವಲ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಸಾಧನೆ ಆಗದೆ ಇಡೀ ತಾಲೂಕಿನ ಎಲ್ಲಾ ವಿಭಾಗದ ಹಿರಿಯ ಹಾಗೂ ಕಿರಿಯ ಆಟಗಾರರು ಸೇರಿಕೊಂಡು ಈ ರಾಷ್ಟ್ರಮಟ್ಟದ ಪಂದ್ಯಾಟ ಅಭೂತಪೂರ್ವವಾಗಿ ನಡೆಯಬೇಕೆನ್ನುವುದು ತಮ್ಮ ಉದ್ದೇಶ ಎಂದರು.
ಪAದ್ಯಾಟ ನಡೆಯುವ ಸುತ್ತಮುತ್ತ ಮಾರಿಕಾಂಬ ಜಾತ್ರಾ ಪ್ರಯುಕ್ತ ಮಹಿಳೆಯರು ಹಾಗೂ ಮಕ್ಕಳಿಗೆ ಇಷ್ಟವಾಗುವ ವರ್ಣರಂಜಿತ ವಿವಿಧ ಮಳಿಗೆಗಳು, ಆಹಾರ ಮೇಳ, ಆಟೋಟಗಳ ವ್ಯವಸ್ಥೆ ಕೂಡ ಆಯೋಜಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕ್ಲಬ್ ಚೇರಮನ್ ಕೃಷ್ಣಮೂರ್ತಿ ಭಟ್, ಅಧ್ಯಕ್ಷ ರಾಘÀವೇಂದ್ರ ಶೆಟ್ಟಿ, ಕಾರ್ಯದರ್ಶಿ ಸಂತೋಷ್ಕುಮಾರ್, ಪದಾದಿಕಾರಿಗಳಾದ ಶಚೀಂದ್ರ ಹೆಗ್ಡೆ, ಟಿ ಕೆ ರಮೇಶ್ ಶೆಟ್ಟಿ, ಮೋಹನ್ ಶೆಟ್ಟಿ, ರಾಮದಾಸ್ ಪ್ರಭು ಮೊದಲಾದವರಿದ್ದರು.
ಬಾಕ್ಸ್
ಈ ಪಂದ್ಯಾವಳಿಯಲ್ಲಿ ಒಟ್ಟೂ ೧೪ ತಂಡಗಳು ಭಾಗವಹಿಸಲಿವೆ. ಕ್ಲಬ್ ಎರಡನೆಯ ಬಾರಿ ರಾಷ್ಟçಮಟ್ಟದ ಖೋಖೊ ಪಂದ್ಯಾವಳಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಕ್ಲಬ್ನ ಹೆಮ್ಮೆಯ ಆಟಗಾರನಾಗಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾಗಿದ್ದ ದಿವಂಗತ ವಿನಯ್ ಗೌಡ ಮತ್ತು ನಂದಿಕೇಶ್ವರ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುವುದು. ತೀರ್ಥಹಳ್ಳಿಯ ಆಗುಂಬೆ ರಸ್ತೆಯಲ್ಲಿರುವ ಹೆಗ್ಡೆ ಪೆಟ್ರೋಲ್ ಬಂಕ್ ಎದುರು ಖೋಖೊ ಅಂಕಣ ಸಿದ್ಧ್ದಪಡಿಸಲಾಗಿದೆ.
– ರಾಘವೇಂದ್ರ ಶೆಟ್ಟಿ, ಅಧ್ಯಕ್ಷ