i
ನಾನು ಈ ಜಿಲ್ಲೆಯ ಮಗಳು ಬರಿಗೈಲಿ ಕಳುಹಿಸಬೇಡಿ:ಅಭ್ಯರ್ಥಿ ಗೀತಾ ಮನವಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಾನು ಈ ಜಿಲ್ಲೆಯ ಮಗಳು, ನಿಮ್ಮ ವೋಟ್ ನನಗೆ ಕೊಡಲೇ ಬೇಕು.ಜಿಲ್ಲೆಯ ಮಗಳನ್ನು ಬರಿ ಕೈಯಲ್ಲಿ ಕಳಿಸಬಾರದು ಎಂದು ಮನವಿ ಮಾಡಿದವರು ಲೋಕಸಭೆಗೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಉಮೇದುವಾರರಾಗಿರುವ ಗೀತಾ ಶಿವರಾಜಕುಮಾರ್.
ಬುಧವಾರ ನಗರಕ್ಕಾಗಮಿಸಿದ ಅವರು, ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾvನಾಡಿದ ಅವರು, ಜಿಲ್ಲೆಯ ಜನರ ಧ್ವನಿಯಾಗಿ, ಮಹಿಳೆಯರ, ಮಕ್ಕಳ ಧ್ವನಿಯಾಗಿ ಕೆಲಸ ಮಾಡುತ್ತೇನೆ. ನಿಮ್ಮ ಜೊತೆಯಲ್ಲೇ ಇರುತ್ತೇವೆ. ಸೇವೆ ಮಾಡಲು ಒಂದು ಅವಕಾಶ ಕೋಡಿ. ಅವಕಾಶ ಕೊಟ್ಟು ನೋಡಿ. ತಂದೆಗೆ ಕೆಟ್ಟು ಹೆಸರು ಬರುವ ಹಾಗೆ ನಡೆದುಕೊಳ್ಲುವುದಿಲ್ಲ್ಲ ಎಂದು ಹೇಳಿದರು.
ನನ್ನನ್ನು ನಿಮ್ಮ ಮನೆಯ ಮಗಳಾಗಿ ನೋಡಬೇಕು. ಪಕ್ಷದ ಮುಖಂಡರು ಅನೇಕ ಸಹಕಾರ ಮಾಡಿದ್ದಾರೆ. ನಮ್ಮ ತಂದೆ ಮಾಡಿದ ಕೆಲಸಗಳು,ಅವರ ಯೋಜನೆಗಳು ಇವತ್ತು ಸಹ ಪ್ರಸ್ತುತ. ಸರ್ಕಾರದ ಗ್ಯಾರಂಟಿಗಳನ್ನು ಜನರ ಮನೆ ಮನೆಗೆ ತಿಳಿಸಬೇಕು. ಹಿಂದಿನ ಸರ್ಕಾರ ಹೇಳಿದಂತೆ ನಡೆದಿಲ್ಲ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನನ್ನನ್ನು ಸಂಸದೆಯಾಗಿ ಮಾಡಿದರೆ ಶಿವಮೊಗ್ಗದ ಮೊದಲ ಮಹಿಳಾ ಆಗುತ್ತೇನೆ. ಪ್ರಚಾರಕ್ಕಾಗಿ ನಾನು ಕೆಲಸ ಮಾಡುವುದಿಲ್ಲ. ನನ್ನ ತಮ್ಮ ಗೆದ್ದು ಜಿಲ್ಲಾ ಉಸ್ತುವಾರಿ ಆಗಿದ್ದಾನೆ. ಅವನು ನನ್ನ ತಮ್ಮನಾದರೂ ತಂದೆಯ ಸ್ಥಾನದಲ್ಲಿದ್ದಾನೆ ಎಂದರು.
ಸಭೆಯಲ್ಲಿ ಮಾತನಾಡಿದ ನಟ ಶಿವರಾಜಕುಮಾರ್, ೨೦೧೩ ರ ಲೋಕಸಭೆ ಚುನಾವಣೆಯಲ್ಲಿ ಗೀತಾ ಸ್ಪರ್ಧೆ ಮಾಡಿ ಸೋತರು. ಪರವಾಗಿಲ್ಲ. ಸೋತಾಗಲೇ ಗೆಲ್ಲಲು ಸಾಧ್ಯ ಎಂದು ಹೇಳಿದರು. ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಇದ್ದೇ ಇರುತ್ತದೆ.. ಒಬ್ಬ ಗೆದ್ದಾಗ ಮತ್ತೊಬ್ಬ ಸೋಲಲೇ ಬೇಕು.ಚುನಾವಣೆ ಎಂಬುದು ಸುಲಭವಲ್ಲ ಎಂಬುದು ಕಳೆದ ಚುನಾವಣೆಯಲ್ಲಿ ಗೊತ್ತಾಯಿತು ಎಂದರು.
ಮತದಾರನ ಕೆಲಸವನ್ನು ತಕ್ಷಣ ಮಾಡಿಕೊಡುವವನೇ ನಿಜವಾದ ಪೊಲಿಟೀಷಿಯನ್. ಆಗದು ಎಂದ ಅವರು.ಆಗದು ಎಂದು ಕೈಕಟ್ಟಿ ಕುಳಿತರೆ ಎಂದು ವೇದಿಕೆಯಲ್ಲಿ ರಾಜಕುಮಾರ್ ಅವರ ಹಾಡಿನ ಸಾಲನ್ನು ಹಾಡಿದರು. ಗೀತಾ ಚುನಾವಣೆ ಸ್ಪರ್ಧಿಸಿದ್ದಾರೆ. ಅವರಿಗೆ ನಿಮ್ಮ ಬೆಂಬಲವಿರಲಿ. ನಾನು ಕೂಡ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಗೀತಾ ಶಿವರಾಜ್ಕುಮಾರ್ ಅವರನ್ನು ಅಭ್ಯರ್ಥಿಯಾಗಿ ಮಾಡಿದ್ದಾರೆ. ಬಂಗಾರಪ್ಪ ಸೇವೆ ಮಾಡಿಕೊಂಡು ಬಂದವರು. ಅವರಂತೆ ಸೇವೆ ಮಾಡು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ ನೀವೇ ಇವರ ಗೆಲುವಿನ ಉಸ್ತುವಾರಿ ಹೊರಬೇಕು ಕರೆ ನೀಡಿದರು.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ನಾಯರು ಸಮರ್ಥ ಅಭ್ಯರ್ಥಿ ಕೊಟ್ಟಿದ್ದಾರೆ. ಅವರನ್ನು ಅತ್ಯಂತ ಹೆಚ್ಚು ಬಹುಮತದಿಂದ ಗೆಲ್ಲಿಸಬೇಕು. ಇನ್ನೊಂದು ಪಕ್ಷದ ಅಭ್ಯರ್ಥಿ ಏನು ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ಬರುವುದಕ್ಕಿಂತ ಮುಂಚೇ ರಾಘವೇಂದ್ರ ಏನು ಮಾಡಿದ್ದರು. ಬಡವರ ಬಂಧು ಎನ್ನುವ ಹೆಸರು ಇರುವುದು ಬಂಗಾರಪ್ಪ ನವರಿಗೆ ಮಾತ್ರ. ಬಂಗಾರಪ್ಪ ಕೊಟ್ಟ ಕೊಡುಗೆ ಯಾರು ಕೊಡಲು ಸಾಧ್ಯವಿಲ್ಲ ಎಂದರು.
“ಇಲ್ಲಿನ ಸಂಸದರು ಕೇಳುತ್ತಿದ್ದಾರೆ ಗೀತಕ್ಕನ ಸಾಧನೆ ಏನು ಎಂದು. ಸಂಸದರಾಗುವುದಕ್ಕಿಂತ ಮುಂಚೇ ನೀವು ಏನು ಕಡಿದು ಬಂದಿದ್ದೀರಾ.ನಿಮ್ಮ ತಂದೆ ಮಾಡಿದ ಭ್ರಷ್ಟಾಚಾರದ ದುಡ್ಡಿನಿಂದ ನೀವು ಗೆದ್ದೀದ್ದಿರಿ. ನೀವು ೨೦೦೮ ರಲ್ಲಿ ಸಿಎಂ ಮಕ್ಕಳು. ನಾವು ೧೯೯೮ ರಲ್ಲಿಯೇ ಸಿಎಂ ಮಕ್ಕಳಾಗಿದ್ದವರು. ಆದರೆ ಚೋಟಾ ಸಹಿ ಹಾಕಿ ತಂದೆಯನ್ನು ಜೈಲಿಗೆ ಕಳಿಸಿಲ್ಲ”–ಮಧು ಬಂಗಾರಪ್ಪ.