i
ನಾಯಕನಹಟ್ಟಿ ತಿಪ್ಪೇಶನ ಜಾತ್ರೆ: ಚಳ್ಳಕೆರೆ ಘಟಕದಿಂದ 40 ಬಸ್ ವ್ಯವಸ್ಥೆ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರತಿವರ್ಷದಂತೆ ಈ ವರ್ಷವೂ ಸಹ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಮಾ.೨೫ ರಿಂದ ೨೭ ವರೆಗೆ ನಡೆಯಲಿದ್ದು, ದೊಡ್ಡ ರಥೋತ್ಸವ ಮಾ.೨೬ರ ಮಂಗಳವಾರ ಮಧ್ಯಾಹ್ನ ೩.೩೦ಕ್ಕೆ ನಡೆಯಲಿದೆ.
ಇದರ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಭಕ್ತಾಧಿಗಳ ಅನುಕೂಲಕ್ಕಾಗಿ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯ ಹೆಜ್ಜೆ ಇಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿದ ಚಳ್ಳಕೆರೆ ಘಟಕದ ವ್ಯವಸ್ಥಾಪಕ ಪ್ರಭು, ಚಿತ್ರದುರ್ಗ ವಿಭಾಗೀಯ ಅಧಿಕಾರಿಗಳ ಮಾರ್ಗದರ್ಶನದಂತೆ ಚಳ್ಳಕೆರೆ ಘಟಕದ ವತಿಯಿಂದ ನಾಯಕನಹಟ್ಟಿ ಜಾತ್ರೆಗಾಗಿ ೪೦ ಬಸ್ಗಳನ್ನು ಭಕ್ತಾಧಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಿದೆ. ಇದನ್ನು ಹೊರತು ಪಡಿಸಿ ಪಾವಗಡ, ಚಿತ್ರದುರ್ಗ ಘಟಕಗಳ ಸಾರಿಗೆ ಸಂಸ್ಥೆ ಬಸ್ಗಳು ಸಹ ಜಾತ್ರಾ ಕಾರ್ಯಚರಣೆಯಲ್ಲಿ ಭಾಗಿಯಾಲಿದ್ದು ಒಟ್ಟು ೧೪೫ಕ್ಕೂ ಹೆಚ್ಚು ಬಸ್ಗಳು ಜಿಲ್ಲೆಯಾದ್ಯಂತ ಸಂಚರಿಸಲಿದ್ದು, ಜೊತೆಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಕಾರ್ಯಚರಣೆಯ ಯಶಸ್ವಿಗೆ ಶ್ರಮಿಸಲಿದ್ಧಾರೆ ಎಂದರು.
ನಾಯಕನಹಟ್ಟಿ ಜಾತ್ರೆ ಹಿನ್ನೆಲೆಯಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಳ್ಳಕೆರೆ ಘಟಕದ ಬಹುತೇಕ ಬಸ್ಗಳನ್ನು ಜಾತ್ರಾ ಕಾರ್ಯಕ್ಕೆ ಉಪಯೋಗಿಸಲಿದ್ದು ಮಾ.೨೫ರ ಸೋಮವಾರ ಸಂಜೆ ೫.೩೦ರಿಂದ ಮಾ.೨೬ರ ಮಂಗಳವಾರ ಸಂಜೆ ಸುಮಾರು ೮ರ ತನಕ ಹೆಚ್ಚಿನ ಬಸ್ಗಳ ಓಡಾಟವಿದ್ದು ಮಾ.೨೭ರ ಬುಧವಾರವೂ ಸಹ ನಾಯಕಹಟ್ಟಿಗೆ ಬಸ್ ವ್ಯವಸ್ಥೆ ಮುಂದುವರೆಸಲಾಗುವುದು ಎಂದು ತಿಳಿಸಿದ್ಧಾರೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಸಂಸ್ಥೆ ಬಸ್ನಲ್ಲಿ ಸಂಚರಿಸಿ ಸಂಸ್ಥೆಯ ಆರ್ಥಿಕ ಸ್ಥಿತಿಯ ಸುಧಾರಣೆಗೆ ಸಹಕಾರ ನೀಡುವಂತೆ ಅವರು ಮನವಿ ಮಾಡಿದ್ಧಾರೆ.