i
ಮಾ.27ರಂದು ಮತದಾನ ಜಾಗೃತಿಗಾಗಿ “ವಾಕಥಾನ್”…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಇದೇ ಮಾರ್ಚ್ 27ರಂದು ಬೆಳಿಗ್ಗೆ 7ಕ್ಕೆ ಚಿತ್ರದುರ್ಗ ನಗರದ ನಗರಸಭಾ ವ್ಯಾಪ್ತಿಯ ಕಡಿಮೆ ಮತದಾನವಾಗಿರುವ ಹೊರಪೇಟೆ ಮತಗಟ್ಟೆ ಪ್ರದೇಶದಲ್ಲಿ ಮತದಾನ ಜಾಗೃತಿಗಾಗಿ “ವಾಕಥಾನ್” ಕಾರ್ಯಕ್ರಮ ಆಯೋಜಿಸಲಾಗಿದೆ. ವಾಕಥಾನ್ ಚಿತ್ರದುರ್ಗ ನಗರದ ಮಹಾತ್ಮಗಾಂಧಿ ವೃತ್ತದಿಂದ ಆರಂಭವಾಗಿ, ಸಂತೆ ಹೊಂಡದ ರಸ್ತೆ, ಹೋಟೆಲ್ ಅಮೋಘ ಇಂಟರ್ ನ್ಯಾಷನಲ್, ಪ್ರಗತಿ ಮೆಡಿಕಲ್ಸ್, ಅಂಜುಮಾನ್ ರಸ್ತೆ (ಹೊರಪೇಟೆ), ರಿಜಿನಲ್ ಶಾಲೆ, ಗೋಪಾಲಪುರ ರಸ್ತೆ, ಉಮರ್ ವೃತ್ತ, ಲಿಟಲ್ ಏಂಜೆಲ್ಸ್ ಸ್ಕೂಲ್, ಜೆ.ಸಿ.ಆರ್ ಬಡಾವಣೆ, ವಿ.ಪಿ.ಬಡಾವಣೆ ಮಾರ್ಗದಲ್ಲಿ ಸಂಚರಿಸಿ, ಮತದಾನದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಜಿ.ಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.