i
ಬೆಳಗಲಿ, ಬಶೀರ್, ಮಂಜುಳ, ಮೋಹನ ಹೆಗಡೆ, ಅಶೋಕರಾಂ ಸೇರಿದಂತೆ 25 ಪ್ರಶಸ್ತಿ ಪ್ರಕಟ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ಕೊಡಮಾಡಲಾಗುತ್ತಿದೆ.
ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ.
ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಅವರು ದತ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿದ್ದಾರೆ .
ಪ್ರಶಸ್ತಿಗಳ ವಿವರ:
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ:
ಬಿ.ಎಂ.ಬಶೀರ್, ಮಂಗಳೂರು.
ಗೊಮ್ಮಟ ಮಾಧ್ಯಮ ಪ್ರಶಸ್ತಿ:
ಕುಂತಿನಾಥ ಶ್ರೀ ಕಲಮನಿ, ಬೆಳಗಾವಿ
ಡಿವಿಜಿ ಪ್ರಶಸ್ತಿ:
ವಿ.ವೆಂಕಟೇಶ್, ಬೆಂಗಳೂರು
ಸಿ.ಆರ್.ಕೃಷ್ಣರಾವ್(ಸಿಆರ್ಕೆ) ಪ್ರಶಸ್ತಿ:
ಸಿ.ಜಿ.ಮಂಜುಳ, ಬೆಂಗಳೂರು
ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ:
ಮಲ್ಲಿಗೆ ಮಾಚಮ್ಮ, ಮೈಸೂರು.
ಎಸ್.ವಿ.ಜಯಶೀಲರಾವ್ ಪ್ರಶಸ್ತಿ:
ಮೋಹನ ಹೆಗಡೆ, ಹುಬ್ಬಳ್ಳಿ
ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ:
ಸನತ್ ಕುಮಾರ್ ಬೆಳಗಲಿ
ಕಿಡಿ ಶೇಷಪ್ಪ ಪ್ರಶಸ್ತಿ:
ಬಿ.ಎಂ.ನಂದೀಶ್, ಹಾಸನ.
ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ:
ಆರ್.ಜಯಕುಮಾರ್, ಬೆಂಗಳೂರು.
ಪಿ.ಆರ್.ರಾಮಯ್ಯ ಪ್ರಶಸ್ತಿ:
ಸಿ.ಕೆ.ಮಹೇಂದ್ರ, ಮೈಸೂರು.
ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ:
ಅಶೋಕ್ ರಾಮ್, ರಾಮನಗರ.
ರಾಜಶೇಖರಕೋಟಿ ಪ್ರಶಸ್ತಿ:
ಚಿಕ್ಕಪ್ಪನಹಳ್ಳಿ ಷಣ್ಮುಖ, ಚಿತ್ರದುರ್ಗ (2023)
ಶಶಿಕುಮಾರ್ ಬಿ ಕೆರೂರ, ಬಾಗಲಕೋಟೆ(2022)
ಪಿ.ರಾಮಯ್ಯ ಪ್ರಶಸ್ತಿ:
ಮನೋಹರ ಮಲ್ಲಾಡದ, ರಾಣೆಬೆನ್ನೂರು
ಮ.ರಾಮಮೂರ್ತಿ ಪ್ರಶಸ್ತಿ:
ಎಚ್.ಕೆ.ಬಸವರಾಜು, ಬೆಂಗಳೂರು.
ಗರುಡನಗಿರಿ ನಾಗರಾಜ್ ಪ್ರಶಸ್ತಿ:
ಪ್ರಭುದೇವ ಶಾಸ್ತ್ರಿಮಠ, ಬೆಂಗಳೂರು
ಮಹದೇವ ಪ್ರಕಾಶ್ ಪ್ರಶಸ್ತಿ:
ವಿಜಯಕುಮಾರ್ ವಾರದ, ಕಲಬುರಗಿ
ಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಶಸ್ತಿ:
ಎನ್.ಬಾಬು, ಭದ್ರಾವತಿ.
ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ:
ನಾಮದೇವ ವಾಟ್ಕರ್, ಯಾದಗಿರಿ
ಎಂ.ನಾಗೇಂದ್ರರಾವ್ ಪ್ರಶಸ್ತಿ:
ರವಿ ಆರ್, ದಾವಣಗೆರೆ
ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ:
ಕೆ.ಗೋಪಿಕಾ ಮಲ್ಲೇಶ್, ಕೋಲಾರ.
ಗುರುಲಿಂಗಸ್ವಾಮಿ ಹೊಳಿಮಠ ಪ್ರಶಸ್ತಿ:
ಆರ್.ಸಿ.ಪುಟ್ಟರಾಜು, ಚಾಮರಾಜನಗರ
ವಿಶೇಷ ಪ್ರಶಸ್ತಿ:
ಎಸ್.ಬಿ.ರವಿಕುಮಾರ್,
ಶ.ಮಂಜುನಾಥ್,
ರವಿ ಮಲ್ಲಾಪುರ
ಇವರುಗಳಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ತಿಳಿಸಿದ್ದಾರೆ.