i
ಸಾಹಿತಿ ವಿವೇಕಾನಂದರ ಕುರಿತು ಓದುಗರೊಬ್ಬರ ಅನಿಸಿಕೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬರಹಾಭಿಯಾನದಿಂದ ಮಲಗಿರುವ ಸಮಾಜವನ್ನು ಬಡಿದೆಚ್ಚರಿಸುತ್ತಿರುವ ಪ್ರಬುದ್ಧ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿರುವ ಪ್ರಭುದ್ಧರು ಎಂದು ಹೇಳಿದರೆ ತಪ್ಪಾಗಲಾರದು. ಮೇಲಾಗಿ ತಮ್ಮ ಬರವಣಿಗೆಗಳನ್ನು ಓದುತ್ತಾ ಓದುತ್ತಾ ಒಂದಷ್ಟು ಮನಸ್ಸಿನ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿ ನನ್ನ ಸುತ್ತಮುತ್ತಲಿನ ಸ್ನೇಹಿತರು ಸಂಬಂಧಿಕರು ಮತ್ತು ಸಮಾಜದಲ್ಲಿ ನನ್ನದೇ ಆದ ಗುರುತನ್ನು ಮೂಡಿಸಿಕೊಂಡಿದ್ದೇನೆ. ನಲ್ಮೆಯ ಹಿರಿಯಣ್ಣನವರಾದ ವಿವೇಕಾನಂದ ಎಚ್. ಕೆ. ಸರ್ ರವರಿಗೆ ನನ್ನ ನಮನಗಳನ್ನು ಸಮರ್ಪಿಸ ಬಯಸುತ್ತೇನೆ. ತಮ್ಮ ಬರಹಗಳು ವೈಯಕ್ತಿಕವಾಗಿ ನನ್ನ ನಡೆ-ನುಡಿ ಮತ್ತು ಜೀವನಶೈಲಿಯನ್ನು ಬಹುತೇಕ ಬದಲಿಸಿದೆ. ಹಾಗಾಗಿ ನನ್ನ ಪ್ರತಿದಿನದ ನಡೆಯಲ್ಲಿ ಜಾಗೃತಿಯ ಹೆಜ್ಜೆಗಳನ್ನಿಡುತ್ತಿದ್ದೇನೆ. ತಮ್ಮ ಒಂದೊಂದು ಬರಹವು ಪ್ರಬಂಧವೇ. ಅಂದು ಬಾಬಾ ಸಾಹೇಬ್ ಬಿ. ಆರ್. ಅಂಬೇಡ್ಕರ್ ರವರು ತಮ್ಮ ಬದುಕಿನ್ನುದ್ದಕ್ಕೂ ಅನುಭವಿಸಿದ ಅನುಭವಗಳನ್ನು ಸಂಕಷ್ಟಗಳನ್ನು ಎದುರಿಸಿದ ಸನ್ನಿವೇಶಗಳನ್ನು ಅಕ್ಷರರೂಪಕ್ಕಿಳಿಸಿ ಹೊರ ತಂದ ಪ್ರಬಂಧಗಳು ಇಂದು ಜೀವನ ಸಾಗಿಸುತ್ತಿರುವ ನಮ್ಮೆಲ್ಲರ ಬದುಕನ್ನು ಬದಲಿಸುವ ಬೃಹತ್ ಗ್ರಂಥಗಳಾಗಿವೆ. ಅವರ ದೂರ ದೃಷ್ಟಿಕೋನದ ಮತ್ತುವಸಮ ಸಮಾಜದ ನಿರ್ಮಾಣದ ಬಗೆಗಿನ ಯೋಚನಾಲಹರಿಯ ಪ್ರತಿಫಲವೇ ನಮ್ಮ ಭಾರತದ ಸಂವಿಧಾನವಾಗಿ ಸ್ಥಿರವಾಗಿ ನಿಂತಿದೆ. ಹೀಗಿರುವಾಗ ಸಂವಿಧಾನದ ಆಶಯಗಳು ಮಸುಕಾಗುತ್ತಾ ಸಂವಿಧಾನವು ಅಳಿವಿನಂಚಿಗೆ ಹೋಗುತ್ತಿದೆಯೋ ಎಂಬ ಭಯ ಕಾಡುತ್ತಲ್ಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಛಲ ಬಿಡದ ತ್ರಿವಿಕ್ರಮನಂತೆ ತಾವು ಸಾವಿರಾರು ಕಿಲೋಮೀಟರ್ಗಳಷ್ಟು ದೂರದ ಪಯಣವನ್ನು ಕ್ರಮಿಸುತ್ತಾ ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಪ್ರಭುದ್ಧ ಸಮಾಜದಲ್ಲಿ, ಪ್ರಬುದ್ಧ ಮನಸುಗಳನ್ನು ಗಟ್ಟಿಗೊಳಿಸಲು ತನು ಮನ ಧನ ಸಮರ್ಪಿಸಿದ್ದೀರಿ. ಹಾಗಾಗಿ ತುಂಬು ಹೃದಯದಿಂದ ತಮ್ಮನ್ನು ಅಭಿನಂದಿಸ ಬಯಸುತ್ತೇನೆ. ತಮ್ಮ ಮನದಾಳದಲ್ಲಿರುವ ತುಡಿತವನ್ನು ಗಮನಿಸುತ್ತಾ ನನಗನಿಸಿದ ಒಂದೆರಡು ಮಾತನ್ನು ತಮ್ಮ ಮುಂದೆ ಸಾಗರಪಡಿಸ ಬಯಸುತ್ತೇನೆ. ಅದೇನೆಂದರೆ ವಾಲ್ಮೀಕಿ ಮಹರ್ಷಿಗಳು ತಾವು ಬರೆದಂತಹ ರಾಮಾಯಣವೆಂಬ ಮಹತ್ತರವಾದ ಕಾವ್ಯದಲ್ಲಿ ಹನುಮಂತನ ಸಾಗರೋಲ್ಲಂಘನದ ಬಗ್ಗೆ ದಾಖಲಿಸಿದ್ದಾರೆ ಹಾಗೂ ಲಂಕಾಸುರನಾದ ರಾವಣೇಶ್ವರನ ಕುರಿತಾಗಿ ಅದ್ಭುತವಾಗಿ ವರ್ಣಿಸಿದ್ದಾರೆ. ಎಲ್ಲಿಯೂ ರಾವಣಾಸುರರು ಕಿಂಚಿತ್ತು ಲೋಪವನ್ನು ಎಸೆಗಿರುವುದು ಕಂಡುಬರುವುದಿಲ್ಲ. ಹನುಮಂತನ ಭಕ್ತಿ ಮತ್ತು ಶಕ್ತಿಗಳ ಬಗ್ಗೆ ಸವಿಸ್ತಾರವಾಗಿ ಬಣ್ಣಿಸಿದ್ದಾರೆ. ತಮ್ಮ ಕುರಿತಾಗಿ ಹೇಳಬೇಕೆಂದರೆ ತಮ್ಮ ಮನಸ್ಸೆಂಬ ಸಾಗರದಲ್ಲಿ ಅಲೆಗಳ ಬಡಿತವೆಂಬ ಉಕ್ಕುತ್ತಿರುವ ಸಾಗರದಲ್ಲಿ ವಿಷ ಮತ್ತು ಅಮೃತಗಳು ಮೇಲೆದ್ದು ಬಂದು ಆ ಹರನ ಕಂಠ ಸೇರಿದಂತೆ ತಮ್ಮ ಮನಸ್ಸಿನ ಭಾವನೆಗಳನ್ನು ಅಕ್ಷರರೂಪಕ್ಕಿಳಿಸಿ ಅಲ್ಪಮತಿಯ ಅಸುಳೆಗಳಿಗೂ ಮನಮುಟ್ಟುವಂತೆ ಸಾದರ ಪಡಿಸುತಿದ್ದೀರಿ. ತಮ್ಮನ್ನು ಬಣ್ಣಿಸಲು ಪದ ದಾರಿದ್ರ್ಯ ಕಾಡುತ್ತಲಿದೆ. ಹಾಗಾಗಿ ನನಗನಿಸಿದ ನಾಲ್ಕು ಮಾತುಗಳನ್ನು ತಮ್ಮ ಮುಂದೆ ಇಟ್ಟಿದ್ದೇನೆ ಅನ್ಯತಾ ಭಾವಿಸದೆ ದಯಮಾಡಿ ಸ್ವೀಕರಿಸಿ. ತಮ್ಮ ಬರಹಭಿಯಾನವನ್ನು ಹೀಗೆಯೇ ಮುಂದುವರಿಸಿ. ನಮ್ಮಂತಹ ಅದೆಷ್ಟೋ ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿ ಎಂದು ತುಂಬು ಹೃದಯದಿಂದ ಕೇಳಿಕೊಳ್ಳುತ್ತೇನೆ ನಮಸ್ತೆ ಸರ್. (ಆತ್ಮೀಯ ಓದುಗ ಗೆಳೆಯರೊಬ್ಬರ ಒಂದು ಅನಿಸಿಕೆ….)