i
ಏ.23 ರಂದು ಶ್ರೀವೀರಭದ್ರ ದೇವರ ಗುಗ್ಗುಳ ಮತ್ತು ಅಗ್ನಿಕುಂಡ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: On 23rd A.D. Sriveerabhadra God’s Guggula and Agnikunda…
ನಗರದ ನೀಲಕಂಠೇಶ್ವರ ದೇವಾಲಯದ ಆವರಣದಲ್ಲಿನ ವೀರಶೈವ ಸಮಾಜದ ವತಿಯಿಂದ ಏ. ೨೩ ರ ಮಂಗಳವಾರ ಹರಪನಹಳ್ಳಿ ವತಿಯಿಂದ ಪಟ್ಟಣದ ಮೇಗಳಪೇಟೆ ಶ್ರೀ ಗುಗ್ಗಳ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಇವರಿಂದ ಜನಪದ ಕಲಾ ತಂಡದೊಂದಿಗೆ ಶ್ರೀವೀರಭದ್ರ ದೇವರ ಗುಗ್ಗುಳ ಮತ್ತು ಅಗ್ನಿಕುಂಡ ಕಾರ್ಯಕ್ರಮ ನಡೆಯಲಿದೆ ಎಂದು ಸಮಾಜದ ಪ್ರಕಟಣೆ ತಿಳಿಸಿದೆ.
ಅಂದು ಬೆಳಿಗ್ಗೆ ೭ ಗಂಟೆಗೆ ಗಂಗಾಪೂಜೆಯ ನಂತರ ನಗರದ ರಂಗಯ್ಯನ ಬಾಗಿಲ ಬಳಿಯ ಉಜ್ಜಯನಿ ಮಠದಿಂದ ಜನಪದ ಕಲಾ ತಂಡದೊಂದಿಗೆ ಗುಗ್ಗುಳ ಪ್ರಾರಂಭವಾಗಲಿದ್ದು, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಮಹಾತ್ಮಗಾಂಧಿ ವೃತ್ತ ಮುಖಾಂತರವಾಗಿ ಶ್ರೀ ನೀಲಕಂಠೇಶ್ವರ ದೇವಾಲಯದ ಮುಂಭಾಗದಲ್ಲಿ ನಿರ್ಮಾಣ ಮಾಡಿರುವ ಅಗ್ನಿಕುಂಡವನ್ನು ಹಾಯುವುದರ ಮೂಲಕ ತಲುಪಲಿದೆ. ತದ ನಂತರ ಮಹಾ ಮಂಗಳಾರತಿ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.
ಶ್ರೀ ವೀರಭದ್ರಸ್ವಾಮಿ ಮನ ದೇವರ ಮನೆತನದವರು ಹಾಗೂ ಭಕ್ತಾಧಿಗಳು ಈ ಗುಗ್ಗುಳದಲ್ಲಿ ಭಾಗವಹಿಸಬೇಕು, ಗುಗ್ಗುಳ ಬರುವ ದಾರಿಯಲ್ಲಿ ಭಕ್ತಾಧಿಗಳು ಮನೆಯ ಮುಂದೆ ನೀರನ್ನು ಹಾಗೂ ರಂಗೋಲೆಯನ್ನು ಹಾಕುವುದರ ಮೂಲಕ ಸ್ವಾಮಿಯ ಗುಗ್ಗುಳವನ್ನು ಬರ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.