i
ಅಪೆರಲ್ ಪಾರ್ಕ್ ಮುಖ್ಯದ್ವಾರದ ಬಳಿ ಬೆಂಕಿ ಅವಘಡ, ಭಾರೀ ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ ಹೊರವಲಯದ ಅಪರೆಲ್ ಪಾರ್ಕ್ ಮುಖ್ಯದ್ವಾರದ ಬಳಿ ಬೆಂಕಿ ಅವಘಡ ಸಂಭವಿಸಿದೆ, ಖಾಲಿ ಜಾಗದಲ್ಲಿ ಬೆಳೆದಿದ್ದ ನೀಲಿಗಿರಿ ಮರಗಳಿಗೆ ಬೆಂಕಿ ತಗುಲಿದ್ದು, ಬೆಂಕಿಯ ಜ್ವಾಲೆಗಳು ಪಕ್ಕದ ಪ್ಯಾಕ್ಟರಿಗಳಿಗೆ ಹರಡುವ ಮುನ್ನವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ನಂದಿಸಿ ಸಂಭವನೀಯ ಅನಾಹುತವನ್ನ ತಪ್ಪಿಸಿದ್ದಾರೆ.
ದೊಡ್ಡಬಳ್ಳಾಪುರ ಹೊರವಲಯದ ಅಪರೆಲ್ ಪಾರ್ಕ್ ಮುಖ್ಯದ್ವಾರ ಬಳಿಯ ಖಾಲಿ ಜಾಗದಲ್ಲಿ ಇಂದು ರಾತ್ರಿ 7 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಕೆಐಎಡಿಬಿ ಸೇರಿದ ಖಾಲಿ ಜಾಗವಾಗಿದ್ದು, ಈ ಜಾಗದಲ್ಲಿ ಬೆಳೆದಿದ್ದ ನೀಲಿಗಿರಿ ಮರಗಳನ್ನ ಕತ್ತರಿಸಲಾಗಿತ್ತು, ಬಿಸಿಲಿನ ತಾಪಕ್ಕೆ ಒಣಗಿದ್ದ ಮರಗಳಿಗೆ ಬೆಂಕಿ ತಗುಲಿ ಭಾರೀ ವೇಗದಲ್ಲಿ ಬೆಂಕಿ ಜ್ವಾಲೆಗಳು ಸುತ್ತಮುತ್ತಲಿನ ಪ್ರದೇಶಕ್ಕೆ ಹರಡಿದೆ.
ಮಾಹಿತಿ ತಿಳಿದು ತಕ್ಷಣವೇ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ, ಪಕ್ಕದಲ್ಲಿಯೇ ಗತ್ತಿ ಎಂಬ ಗೋಡಾನ್ ಸೇರಿದಂತೆ ಹಲವು ಪ್ಯಾಕ್ಟರಿಗಳಿದ್ದವು, ಬೆಂಕಿ ನಂದಿಸುವಲ್ಲಿ ತಡವಾಗಿದ್ದಾರೆ ಬೇರೆ ರೀತಿಯ ಅನಾಹುತಗಳನ್ನು ಸಂಭವಿಸುವ ಸಾಧ್ಯತೆ ಇತ್ತು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯಚಾರಣೆಯಿಂದ ಯಾವುದೇ ರೀತಿಯ ಅವಘಡಗಳು ಸಂಭವಿಸಿಲ್ಲ.