i
ಲೋಕಾಯುಕ್ತ ದಾಳಿ ಲಂಚ ಸ್ಪೀಕರಿಸುವಾಗ 4 ಮಂದಿ ಇಂಜಿನಿಯರ್ ಗಳ ಬಂಧನ…
ಚಂದ್ರವಳ್ಳಿ ನ್ಯೂಸ್, ರಾಯಚೂರು:
ಸೂಪರಿಡೆಂಟ್ ಎಂಜಿನಿಯರ್ ಸೇರಿ ನಾಲ್ವರು ಎಂಜಿನಿಯರುಗಳು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 4 ಮಂದಿ ಇಂಜಿನಿಯರ್ ಗಳನ್ನು ಬಂಧಿಸಿರುವ ಘಟನೆ ರಾಯಚೂರು ಸಮೀಪದ ಯರಮರಸ್ನಲ್ಲಿರುವ ತುಂಗಭದ್ರಾ ನೀರಾವರಿ ವಲಯ ಕಚೇರಿಯಲ್ಲಿ ಜರುಗಿದೆ.
ಲೋಕಾಯಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನೀರಾವರಿ ಇಲಾಖೆಯ ಸೂಪರಿಡೆಂಟ್ ಎಂಜಿನಿಯರ್(ಎಸ್ಇ) ಸೂರ್ಯಕಾಂತ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್(ಎಇಇ) ನರಸಿಂಹರಾವ್ ದೇಶಪಾಂಡೆ, ಕಿರಿಯ ಎಂಜಿನಿಯರ್(ಎಇ) ತುಕಾರಾಂ ಮತ್ತು ಕಿರಿಯ ಇಂಜಿನಿಯರ್(ಎಇ) ಭಾವನಾ ಇವರುಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿಯ ಗುತ್ತಿಗೆದಾರರೊಬ್ಬರಿಗೆ ಬಿಲ್ ಪಾಸ್ ಮಾಡಿಕೊಡಲು ಲಂಚ ನೀಡುವಂತೆ ಎಂಜಿನಿಯರುಗಳು ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ಗುತ್ತಿಗೆದಾರ ಲೋಕಾಯುಕ್ತರಿಗೆ ದೂರು ನೀಡಿದ್ದು ಎಂಜಿನಿಯರುಗಳು ಲಂಚ ಸ್ಪೀಕರಿಸುವ ವೇಳೆ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಕಲ್ಲೇಶಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಗುರು ಪಾಟೀಲ ಹಾಗೂ ಸಿಬ್ಬಂದಿ ದಾಳಿಯ ನೇತೃತ್ವ ವಹಿಸಿದ್ದರು.