i
ಹಿರಿಯೂರು
ಎಲ್ಲಾ ವರ್ಗದ ಜನರನ್ನು ಬೆಂಬಿಡದೆ ಕೊರೊನ ವೈರಸ್ ಕಾಡುತ್ತಿದೆ, ಒಬ್ಬರನ್ನೊಬ್ಬರು ಮುಟ್ಟದೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು, ಊಟ ಮರೆತರು ಸ್ಯಾನಿಟೈಜರ್ ಮರೆಯದಿರುವಂತಹ ಕಾಲಘಟ್ಟದಲ್ಲಿದ್ದೇವೆ.
ಇದನ್ನೆಲ್ಲಾ ಲೆಕ್ಕಿಸದೆ ಹಿರಿಯೂರಿನ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರು ಹಿರಿಯೂರು ತಾಲ್ಲೂಕಿನ ಧರ್ಮಪುರ ಕ್ಷೇತ್ರದ ಕೋವಿಡ್19 ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿ ಅವರ ಕುಂದುಕೊರತೆಗಳನ್ನು ಸ್ಥಳದಲ್ಲೇ ಬಗೆಹರಿಸಿದರು.
ಎಂತಹಾ ಕಾಲದಲ್ಲು ತಮ್ಮ ಕ್ಷೇತ್ರದ ಜನರನ್ನು ಬಿಡದೆ ಅವರ ಸುಖ ದುಃಖಗಳಲ್ಲಿ ಭಾಗಿಯಾಗುವಂತಹ ಒಳ್ಳೆಯ ಜನಪ್ರತಿನಿಧಿಗಳು ನಮ್ಮ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಬೇಕು.