i
ಬಂಡಾಯ ಸಾಹಿತ್ಯ ಸಂಘಟನೆಯ 44ರ ಹುಟ್ಟು ಒಂದು ನೆನಪು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಂಡಾಯ ಸಾಹಿತ್ಯ ಸಂಘಟನೆ ಅಸ್ತಿತ್ವಕ್ಕೆ ಬಂದು ಇದೇ ತಿಂಗಳ ಮಾರ್ಚ್-11 ಕ್ಕೆ 44 ವರುಷಗಳನ್ನು ಪೂರೈಸುತ್ತಿದ್ದು, ಅದರ ನೆನೆಪಿಗೆ ಬಂಡಾಯ 44 ಎನ್ನುವ ಹೆಸರಿನಲ್ಲಿ ಸಮಕಾಲೀನ ಸಾಹಿತ್ಯ ಮತ್ತು ಸಾಂಸ್ಕೃತಿಕ ತಲ್ಲಣಗಳು ಎನ್ನುವ ವಿಷಯವನ್ನು ಕುರಿತಂತೆ ವಿಚಾರ ಸಂಕಿರಣವನ್ನು ಜಿಲ್ಲಾ ಬಂಡಾಯ ಸಂಘಟನೆ ಆಯೋಜಿಸಿದೆ.
ಇಲ್ಲಿನ ಪತ್ರಕರ್ತರ ಭವನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿಷಯವನ್ನು ಕುರಿತು, ಪ್ರೊ,.ಚಂದ್ರಶೇಖರ ತಾಳ್ಯ ಮತ್ತು ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಲಿದ್ದಾರೆ. ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಅಧ್ಯಕ್ಷತೆ ವಹಸಿಕೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬುದ್ಧ ಚಿಂತಕರಾದ ಬಿ.ಪಿ.ತಿಪ್ಪೇಸ್ವಾಮಿ, ರೈಸಂಘದ ಮುಖಂಡರಾದ ಹಂಪಯ್ಯನ ಮಾಳಿಗೆ ಧನಂಜಯ ಮತ್ತು ವಕೀಲರಾದ ದಿಲ್ ಶಾದ್ ಉನ್ನೀಸಾ ಭಾಗವಹಿಸಲಿದ್ದಾರೆಂದು ಜಿಲ್ಲಾ ಸಂಘಟನೆ ತಿಳಿಸಿದೆ.