i
ಚಾಮರಾಜನಗರ ವಿವಿ ಕುಲಪತಿಗಳಾಗಿ ಡಾ.ಎಂ.ಆರ್.ಗಂಗಾಧರ್ ನೇಮಕ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ನೂತನವಾಗಿ ಸ್ಥಾಪಿಸಿರುವ 7 ವಿಶ್ವವಿದ್ಯಾಲಯಗಳಿಗೆ ಚಾಮರಾಜನಗರ ವಿವಿ ಕುಲಪತಿಗಳಾಗಿ ಡಾ.ಎಂ.ಆರ್.ಗಂಗಾಧರ್ ನೇಮಕ ಸೇರಿದಂತೆ ಒಟ್ಟು 7 ಮಂದಿ ನೂತನ ಕುಲಪತಿಗಳನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೊಪ್ಪಳ, ಕೊಡಗು, ಚಾಮರಾಜನಗರ, ಬಾಗಲಕೋಟೆ, ಬೀದರ್, ಹಾವೇರಿ ಮತ್ತು ಹಾಸನ ವಿಶ್ವವಿದ್ಯಾಲಯಗಳಿಗೆ ಚೊಚ್ಚಲ ಕುಲಪತಿಗಳ ನೇಮಕ ಮಾಡಲಾಗಿದೆ.
ಈ ಕುರಿತಾ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದು ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ತಮ್ಮ ಜಿಲ್ಲೆಯಲ್ಲೇ ಉನ್ನತ ಶಿಕ್ಷಣ ಕಲ್ಪಿಸಲು ಸ್ಥಾಪಿಸಿರುವ ಈ ವಿವಿಗಳ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಟ್ವಿಟರ್ ಬರೆದುಕೊಂಡಿದ್ದಾರೆ.
ಚಾಮರಾಜನಗರ ವಿವಿ ಕುಲಪತಿಗಳಾಗಿ ನೇಮಕಗೊಂಡಿರುವ ಡಾ.ಎಂ.ಆರ್.ಗಂಗಾಧರ್ ಅವರಿಗೆ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ನೂತನ ಕುಲಪತಿಗಳ ವಿವರ-
ಚಾಮರಾಜನಗರ ವಿವಿ ಕುಲಪತಿ- ಡಾ.ಎಂ.ಆರ್.ಗಂಗಾಧರ್
ಕೊಪ್ಪಳ ವಿಶ್ವವಿದ್ಯಾಲಯ ನೂತನ ಕುಲಪತಿ- ಡಾ.ಬಿ.ಕೆ.ರವಿ
ಕೊಡಗು ವಿವಿಯ ಕುಲಪತಿ- ಅಶೋಕ್ ಸಂಗಪ್ಪ ಆಲೂರು
ಬಾಗಲಕೋಟೆ ವಿವಿ ಕುಲಪತಿ- ಡಾ.ಆನಂದ್ ಶರದ್
ಬೀದರ್ ವಿವಿಯ ಕುಲಪತಿ- ಡಾ.ಬಿ.ಎಸ್.ಬಿರಾದಾರ
ಹಾವೇರಿ ವಿವಿ ಕುಲಪತಿ- ಡಾ.ಸುರೇಶ್ ಹೆಚ್ ಜಂಗಮಶೆಟ್ಟಿ
ಹಾಸನ ವಿವಿ ಕುಲಪತಿ- ಡಾ.ಟಿ.ಸಿ.ತಾರಾನಾಥ