i
ಭೋವಿ ಬಂಜಾರ ಕೊರಮ ಕೊರಚ ಮೀಸಲಾತಿ ಸೌಲಭ್ಯ ಮುಂದುರಿಕೆಗೆ ಸಿಎಂಗೆ ಅಭಿನಂದಿಸಿದ ಭೋವಿ ಸ್ವಾಮೀಜಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭೋವಿ ಬಂಜಾರ ಕೊರಮ ಕೊರಚ ಸಮುದಾಯಗಳ ಸಂರಕ್ಷಣೆಗಾಗಿ ರಾಷ್ಟೀಯ ಪರಿಶಿಷ್ಟ ಜಾತಿಯ ಆಯೋಗಕ್ಕೆ ಸ್ಪಷ್ಟಿಕರಣ ಪತ್ರ ಸಂಪರ್ಕ ಮಾಡಿ ಈ ಸಮುದಾಯಗಳನ್ನು ಪರಿಶಿಷ್ಟ ಜಾತಿಯಲ್ಲಿ ಮುಂದುವರೆಯುತ್ತವೆ ಎನ್ನುವ ಗಟ್ಟಿತನದ ಧ್ವನಿಯಾದ ಕರ್ನಾಟಕ ಸರ್ಕಾರದ ಮಾನ್ಯಮುಂಖ್ಯಮಂತ್ರಿಗಳಿಗೆ ಅಭಿನಂದನೆಯನ್ನು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
2021ನೇ ಸಾಲಿನಲ್ಲಿ ನಿವೃತ್ತ ನ್ಯಾ. ಶ್ರೀ ಎ.ಜೆ.ಸದಾಶಿವ ಇವರು ಸಲ್ಲಿಸಿರುವ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿರುವುದಿಲ್ಲವೆಂದು ತಿಳಿಸಿ, ವರದಿಯನ್ನು ಮುಕ್ತಯಗೊಳಿಸಿದೆ. ಸಚಿವ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟದ ಉಪಸಮಿತಿ ಶಿಫಾರಸ್ಸುನ್ನು ಪಡೆದಿದೆ.
ಸದಾಶಿವ ಆಯೋಗದಲ್ಲಿ ಮುಖ್ಯ ಆತಂಕವಾದ ಭೋವಿ ಬಂಜಾರ ಕೊರಮ ಕೊರಚ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರಕ್ಕೆ, ನಾಲ್ವಡಿ ಕೃಷ್ಣರಾಜ ಒಡೆಯರ ಹಾಗೂ ಅಂಬೇಡ್ಕರ್ ಗುರುತಿಸಿದ ಅಂಶಗಳನ್ನು ಉಲ್ಲೇಖ ಮಾಡಿ, ರಾಜ್ಯ ಸರ್ಕಾರ ಸ್ಪಷ್ಟವಾಗಿ ಹಾಗೂ ನೇರವಾಗಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಅರ್ಹ ಸಮುದಾಯಗಳೆಂದು ಪರಿಗಣಿಸಿದೆ. NCSCಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಭೋವಿ ಬಂಜಾರ ಕೊರಮ ಕೊರಚ ಜಾತಿಗಳನ್ನು ಅನುಸೂಚಿತ ಜಾತಿಗಳ ಪಟ್ಟಿಯಿಂದ ಕೈಬಿಡುವುದಿಲ್ಲ ಎಂಬ ಸ್ಪಷ್ಟನೆಯನ್ನು ರಾಜ್ಯ ಸರ್ಕಾರವು ನೀಡಿದೆ.
ಮೀಸಲಾತಿ ಪ್ರಮಾಣವನ್ನು ಶೇ 15% ರಿಂದ ಶೇ 17% ಕ್ಕೆ ಹೆಚ್ಚಿಸಿದೆ. ಭೋವಿ ಬಂಜಾರ ಕೊರಮ ಕೊರಚ ಒಳಮೀಸಲಾತಿ ವಿಚಾರವಾಗಿ ಮಿಶ್ರ ಅಭಿಪ್ರಾಯಗಳು ಇದ್ದಗ್ಯೂ ಒಳಮೀಸಲಾತಿ ವಿಚಾರವಾಗಿ ಜಾಣ ನಡೆ ಅನುಸರಿಸುವ ಸರ್ಕಾರದ ಕ್ರಮವನ್ನು ಮೆಚ್ಚಬೇಕಿದೆ. ಆದರೆ ಸುಪ್ರಿಂ ಕೋರ್ಟಿನ ಸಪ್ತ ನ್ಯಾಯಧೀಶರ ಪೀಠ ಮುಂದೆಯಿರುವುದು ಗಮನಿಸಬೇಕಾದ ಅಂಶ. ಭೋವಿ ಬಂಜಾರ ಕೊರಮ ಕೊರಚ ಸಮುದಾಯಗಳ ಜನಸಂಖ್ಯಾನುಗುಣವಾಗಿ ಲೋಪವಾಗದಂತೆ ಮೀಸಲಾತಿ ಹಂಚಿಕೆ ಮಾಡಿದ್ದಾರೆ.
ವರ್ಗೀಕರಣ ವಿಚಾರದಲ್ಲಿ ಕೇವಲ ಶೈಕ್ಷಣಿಕ ಔದ್ಯೋಗಿಕ ಸೀಮಿತವಾಗಿರದೆ ಸರ್ಕಾರದ ಆಯವ್ಯಯದಲ್ಲಿ ಈ ಸಮುದಾಯಗಳಿಗೆ ಪ್ರತ್ಯೇಕವಾಗಿ ಹಂಚಿಕೆಯಾಗಬೇಕು.
ಒಟ್ಟಾರೆ ಭೋವಿ ಬಂಜಾರ ಕೊರಮ ಕೊರಚ ಇನ್ನೂಳಿದ ಪರಿಶಿಷ್ಟ ಜಾತಿಗಳ ಹಿತರಕ್ಷಣೆ ಮಾಡಿದ ಮೀಸಲಾತಿ ಮಿಸ್ಟರಿಯಲ್ಲಿ ಮಿಸ್ಟರ್ ಪರ್ಪೇಕ್ಟ್ ಆದಾ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಯಿ ಹಾಗೂ ಮೀಸಲಾಯಿತಿಯ ರಕ್ಷಾ ಕವಚ ಮಾಸ್ಟರ್ ಮೈಂಡ್ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.