i
ಕಾಂಗ್ರೆಸ್ ಸೋಲಿಸುವ ಪಣ ತೊಡಲು ಕರೆ ನೀಡಿದ ಕಾಡುಗೊಲ್ಲ ಸಮಾಜ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಚಿತ್ರದುರ್ಗ ಚಳ್ಳಕೆರೆ ಹೊಸದುರ್ಗ. ಹೊಳಲ್ಕೆರೆ ತುಮುಕೂರು ಜಿಲ್ಲೆಯ ಶಿರಾ ಪಾವಗಡ, ಗುಬ್ಬಿ ಚಿಕ್ಕನಾಯಕನಹಳ್ಳಿ ಮಧುಗಿರಿ ಕೊರಟಗೆರೆ ಹಾಸನ ಜಿಲ್ಲೆಯ ಅರಸೀಕೆರೆ ಬಳ್ಳಾರಿ ಜಿಲ್ಲೆ ಮತ್ತು ದಾವಣಗೆರೆ ಜಿಲ್ಲೆಯಲ್ಲಿ 25 ಕ್ಷೇತ್ರ ಹೆಚ್ಚು ಕ್ಷೆತ್ರಗಳಲ್ಲಿ ಕಾಡು ಗೊಲ್ಲರು ನಿರ್ಣಾಯಕರಗಿರುತ್ತಾರೆ. ಜೊತೆಗೆ ಸ್ವಾತಂತ್ರ ಬಂದಾಗಿಂದ ಕಾಂಗ್ರೆಸ್ ಪಕ್ಷಕ್ಕೆ ಕಾಡುಗೊಲ್ಲರ ಮತಗಳು ಸಂಪ್ರದಾಯಿಕ ಮತಗಳು ಆಗಿವೆ. ಇದನ್ನು ಲೆಕ್ಕಿಸದೆ ಕಾಂಗ್ರೆಸ್ ಪಕ್ಷ ಕಾಡು ಗೊಲ್ಲರನ್ನ ನಿರ್ಲಕ್ಷಿಸುವ ಮೂಲಕ ಕಾಡು ಗೊಲ್ಲರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹಿರಿಯೂರು ಚಿತ್ರದುರ್ಗ ಹಾಗೂ ಕ್ಷೇತ್ರಕ್ಕೆ 4 ರಿಂದ 5 ಜನ ಕಾಡು ಗೊಲ್ಲ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರು, ಶಿರಾ ಕ್ಷೇತ್ರಕ್ಕೆ ಡಾ.ಸಾಸಲು ಸತೀಶ್ ಒಬ್ಬರೇ ಅರ್ಜಿ ಸಲ್ಲಿಸಿದ್ದರು. ಶಿರಾ ಕ್ಷೇತ್ರಕ್ಕೆ ಕೊಟ್ಟೇ ಕೊಡುತ್ತೆವೆ ಎಂದು ಹೇಳಿದ ರಾಜ್ಯ ಕಾಂಗ್ರೆಸ್ ನಾಯಕರು ಕೊನೆ ಗಳಿಗೆಯಲ್ಲಿ ಜಯಚಂದ್ರ ರವರಿಗೆ ಟಿಕೆಟ್ ಕೊಟ್ಟು ಕಾಡು ಗೊಲ್ಲರನ್ನು ಸಂಪೂರ್ಣವಾಗಿ ಕಡೆ ಗಣಿಸಿದೆ. ಇದರ ಪರಿಣಾಮ ಡಾ. ಪರಮೇಶ್ವರ್, ಜಯಚಂದ್ರ, ಕೆ. ಎನ್. ರಾಜಣ್ಣ ನವರ ವಿರುದ್ಧ ಕಾಡು ಗೊಲ್ಲರು ಮತ ಹಾಕಿ ಸೋಲಿಸಬೇಕೆಂದು ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್ ರಂಗಸ್ವಾಮಿ ಚಿತ್ತಯ್ಯ ಕುಮಾರ್ ನಾಗೇಂದ್ರಪ್ಪ ಮಂಜುನಾಥ್ ಶ್ರೀನಿವಾಸ್ ಕೃಷ್ಣ ಕರೆ ನೀಡಿದರು.