i
ಬಿಜೆಪಿ ಪಕ್ಷಕ್ಕೆ ಬಂಜಾರ ಸಮಾಜದಿಂದ ತಕ್ಕ ಪಾಠ:ರಾಮಶೆಟ್ಟಿ ಪವಾರ…
ಚಂದ್ರವಳ್ಳಿ ನ್ಯೂಸ್, ಚಿಂಚೋಳಿ:
ಚಿಂಚೋಳಿ ತಾಲೂಕಿನ ಬಂಜಾರ ಸಮಾಜದ ತಾಲೂಕ ಅಧ್ಯಕ್ಷರು, ಪುರಸಭೆ ಮಾಜಿ ಅಧ್ಯಕ್ಷ ರಾಮಶೆಟ್ಟಿ ಪವಾರ ಹಾಗೂ ಬಂಜಾರ ಸಮಾಜದ ಮುಖಂಡರುಗಳಾದ ಬಾಬು ಪವಾರ ಚೇಂಗಟಾ, ಲಕ್ಷ್ಮಣ ಜಾಧವ ಕಲಭಾವಿ ತಾಂಡಾ, ಸುಭಾಷ ರಾಠೋಡ ಗೊಟುರ ತಾಂಡಾ, ಯುವರಾಜ ಕಾರಭಾರಿ ಗೊಟೂರ್ ತಾಂಡಾ, ಬಾಬು ಪಾಂಡು ರಾಠೋಡ ಗೊಟೂರ್ ತಾಂಡಾ, ವಿವಿಧ ಸಮುದಾಯದ ಮುಖಂಡರುಗಳಾದ ರಮೇಶ್ ದೇಸಾಯಿ ಚೇಂಗಟಾ, ಕಾಶೀನಾಥ ಪಾಟೀಲ್ ಯಂಪಳ್ಳಿ, ರಾಜಶೇಖರ್ ಚಿಮ್ಮ ಯಂಪಳ್ಳಿ ರವರು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಃಗಳನ್ನು, ಶ್ರೀ ಸುಭಾಷ್ ವ್ಹಿ. ರಾಠೋಡ ಜೀ ರವರ ನಾಯಕತ್ವದ ಗುಣವನ್ನು ಮೆಚ್ಚಿ, ಬಿಜೆಪಿಯ ದೂರಾಡಳಿತವನ್ನು ತೊಲಗಿಸಿ, ಚಿಂಚೋಳಿಯಲ್ಲಿ ಬದಲಾವಣೆ ಬಯಸಿ, ಬಿಜೆಪಿ ಪಕ್ಷವನ್ನು ತೊರೆದು, ಜಿಲ್ಲಾ ಕಾಂಗ್ರೆಸ್ ಸಮಿತಿ, ಕಲಬುರಗಿ ಅಧ್ಯಕ್ಷರಾದ ಶ್ರೀ ಜಗದೇವ ಗುತ್ತೇದಾರ ಕಾಳಗಿ, ಚಿಂಚೋಳಿ ಕಾಂಗ್ರೆಸ್ ಮುಖಂಡರಾದ ಶ್ರೀ ಸುಭಾಷ್ ವ್ಹಿ. ರಾಠೋಡ್ ಜೀ, ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ, ಚಿಂಚೋಳಿ ಅಧ್ಯಕ್ಷರಾದ ಶ್ರೀ ಬಸವರಾಜ ಆರ್. ಮಲಿ, ರವರ ನೇತೃತ್ವದಲ್ಲಿ , ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು, ತದನಂತರ ತಾಲೂಕ ಬಂಜಾರ ಸಮಾಜದ ಅಧ್ಯಕ್ಷರಾದ ರಾಮಶೆಟ್ಟಿ ಪವಾರ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ ಒಂದಾಗಿರುವ ಬಂಜಾರ ಜನಾಂಗ ದವರು ರಾಜ್ಯದಲ್ಲಿ ಅನಾದಿ ಕಾಲದಿಂದಲೂ ಕಾಡು-ಮೇಡುಗಳಲ್ಲಿ ವಾಸವಾಗಿ ಕಡುಬಡತನ ದಿಂದ ಜೀವನ ಸಾಗಿಸುತ್ತಿದ್ದಾರೆ. ಕಾಡು ಉತ್ಪನ್ನ್ನ ಮಾರಾಟ ಮಾಡಿ ಬದುಕುತ್ತಿದ್ದಾರೆ.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸರ್ಕಾರ ಇಂದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಇವತ್ತು ನಮ್ಮ ಸಮಾಜದ ಶಾಸಕರು, ಸಂಸದರು ಹಾಗೂ ಇವರ ಹಿಂಬಾಲಕರು ಸಮಾಜ ಒಡೆದು ಆಳುವ ನೀತಿ ಜಾರಿಗೆ ತರಲು ಯತ್ನಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸಮಾಜವನ್ನು ನಿರ್ನಾಮ ಮಾಡುವ ಹುನ್ನಾರ ಮಾಡುತ್ತಿರುವುದು ವಿಷಾದನೀಯ, ಮುಂದಿನ ದಿನಗಳಲ್ಲಿ ನಮ್ಮ ಸಮಾಜ ಬಿಜೆಪಿಕ್ಕೆ ತಕ್ಕ ಪಾಠ ಕಲಿಸಲಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಬಾಬುರಾವ ಪಾಟೀಲ, ರಾಜಗೋಪಾಲ ರೆಡ್ಡಿ, ಮೇಘರಾಜ್ ರಾಠೋಡ, ಮಲ್ಲಿಕಾರ್ಜುನ ಪಾಟೀಲ ಹುಳಗೇರಾ, ವೀರಸಂಗಪ್ಪ ಪಾಟೀಲ್, ಬಸವರಾಜ ಪ್ಯಾಟಿ, ಮಲ್ಲು ಸೌಕಾರ, ಗುರು ಪಡಶೆಟ್ಟಿ, ಡಾ. ತುಕಾರಾಮ್ ಪವಾರ್, ಶರಣು ಪಾಟೀಲ, ಪ್ರವೀಣ ಭೀಮರಾವ್ ಟಿ. ಟಿ. ಶಾಮ ರಾಠೋಡ, ಹಿರಾಸಿಂಗ್ ಜಾಧವ, ಕಾಶೀನಾಥ್ ಕಂದಗೋಳ್, ಮಹೇಶ್ ಗುತ್ತೇದಾರ, ಸಿದ್ದು ಪೂಜಾರಿ, ಸಂಜು ಪೂಜಾರಿ, ನಾಮದೇವ ನಾಯಕ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.