i
ಅಕ್ರಮ-ಸಕ್ರಮ ಕೃಷಿ ನೀರಾವರಿ ಪಂಪ್ ಸೆಟ್: ಜೇಷ್ಠತಾ ಪಟ್ಟಿ ಪ್ರಕಟ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಕ್ರಮ ಸಕ್ರಮ ಯೋಜನೆಯಡಿ ಅನಧಿಕೃತ ಕೃಷಿ ನೀರಾವರಿ ಪಂಪ್ ಸೆಟ್ ವಿದ್ಯುತ್ ಸಂಪರ್ಕದ ಸಕ್ರಮಕ್ಕಾಗಿ 2009, 2011-12, ರಿಂದ 2020-21 ರವರೆಗೆ ಸಕ್ರಮಿಕರಣ ಶುಲ್ಕ 10000/- ಮತ್ತು ಇತರೆ ಠೇವಣೆ ಮೊತ್ತಗಳನ್ನು ಪಾವತಿಸಿರುವ ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯ ಪಂಡರಹಳ್ಳಿ, ತುರುವನೂರು, ಹಿರೆಗುಂಟನೂರು, ಭೀಮಸಮುದ್ರ, ಭರಮಸಾಗರ ಮತ್ತು ಸಿರಿಗೆರೆ ಶಾಖಾ ವ್ಯಾಪ್ತಿಯ ಗ್ರಾಹಕರುಗಳ ಜೇಷ್ಠತಾ ಪಟ್ಟಿಯನ್ನು ಗ್ರಾಮೀಣ ಉಪ ವಿಭಾಗ ಕಛೇರಿಯಲ್ಲಿ ಪ್ರಕಟಿಸಲಾಗಿದೆ.
ಈವರೆಗೂ ಮೂಲಭೂತ ಸೌಕರ್ಯ ಕಲ್ಪಿಸದೇ ಇರುವ ಹಾಗೂ ಸರ್ವೀಸ್ ಮೇನ್ಸ್ 30 ಮೀಟರ್ಗಿಂತ ದೂರದಿಂದ ಎಳೆದು ಪಂಪ್ ಸೆಟ್ ಚಾಲನೆಯಲ್ಲಿರುವ ಗ್ರಾಹಕರು ಉಪ ವಿಭಾಗ ಕಚೇರಿಯಲ್ಲಿ ಪ್ರಕಟಿಸಿರುವ ಜೇಷ್ಠತಾ ಪಟ್ಟಿಯನ್ನು ಪರಿಶೀಲಿಸಿಕೋಳ್ಳಬಹುದಾಗಿದೆ.
ಸಕ್ರಮ ಮೊತ್ತಗಳನ್ನು ಪಾವತಿಸಿ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಹಾಗೂ ಆರ್.ಆರ್. ಸಂಖ್ಯೆ ಬಿಟ್ಟು ಹೋಗಿದಲ್ಲಿ ಅಂತಹ ಗ್ರಾಹಕರು ತಾವೇ ಖುದ್ದಾಗಿ ಹಣ ಕಟ್ಟಿರುವ ರಸೀದಿ ಮತ್ತು ಇತರೆ ಅಗತ್ಯ ಮೂಲ ದಾಖಲಾತಿಯೊಂದಿಗೆ ಉಪ ವಿಭಾಗ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲವಾದಲ್ಲಿ ಮುಂದಿನ ಆಗು-ಹೋಗುಗಳಿಗೆ ಬೆಸ್ಕಾಂ ಜವಾಬ್ದಾರಿಯಲ್ಲವೆಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.