i
10 ವರ್ಷ ಕಾಂಗ್ರೆಸ್, 5 ವರ್ಷ ಬಿಜೆಪಿ ಆಡಳಿತ ನೋಡಿದ್ದೀರಿ, ಈಗ ಜೆಡಿಎಸ್ ಗೆ ಮತ ನೀಡಿ ಗೆಲ್ಲಿಸಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಸಾಮಾನ್ಯ ಕ್ಷೇತ್ರವಾದ ಮೇಲೆ 10 ವರ್ಷ ಕಾಂಗ್ರೆಸ್, 5 ವರ್ಷ ಬಿಜೆಪಿಗೆ ಮತ ನೀಡಿದ್ದೀರಿ, ಹಾಗೇ ಜೆಡಿಎಸ್ ಪಕ್ಷಕ್ಕೂ 5 ವರ್ಷ ಅಧಿಕಾರ ನೀಡಿದರೆ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಮನವಿ ಮಾಡಿದರು.
ತಾಲೂಕಿನ ಮಸ್ಕಲ್, ಮಸ್ಕಲ್ ಮಟ್ಟಿ, ಉಪ್ಪಾರಹಟ್ಟಿ, ಗೊಲ್ಲಹಳ್ಳಿ, ಈಶ್ವರಗೆರೆ, ಹರಿಯಬ್ಬೆ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು. 10 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದ ಅಡಿಕೆ, ತೆಂಗು, ಇತರೆ ತೋಟಗಾರಿಕೆ ಬೆಳೆಗಳು ಒಣಗಲು ಆ ದಿನಗಳಲ್ಲಿ ಕೈಗೊಂಡ ಅವೈಜ್ಞಾನಿಕ ತೀರ್ಮಾನಗಳು ಕಾರಣವಾಗಿದೆ. ವಿವಿ ಸಾಗರದ ನೀರು ನಂಬಿದ ಬಹುತೇಕ ರೈತರು ಬೀದಿಗೆ ಬಿದ್ದರು. ಇನ್ನೂ ಬಿಜೆಪಿಯ 5 ವರ್ಷಗಳ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ. ನಾವು ನೀರು ತಂದಿದ್ದೇವೆ ಎನ್ನುತ್ತಾರೆ, ಆದರೆ ಮಳೆ ಬಂದು ಧರ್ಮಪುರ ಕೆರೆಗೆ ನೀರು ಬಂದಿದೆ ಈ ಸತ್ಯವನ್ನು ಜನರು ಅರಿಯಬೇಕಿದೆ ಎಂದು ಹೇಳಿದರು.
ಜೆಡಿಎಸ್ ಗೆ ಒಂದು ಸಲ ಅವಕಾಶ ಮಾಡಿಕೊಡಿ. ವರ್ಷದಲ್ಲಿ 365 ದಿನ ನಿಮ್ಮ ಮುಂದೆ ಇರುತ್ತೇನೆ. ನಿಮ್ಮ ಸೇವೆ ಮಾಡಲು ಮತ ನೀಡಿ ನನ್ನ ಗೆಲ್ಲಿಸಿ ಎಂದು ಜೆಡಿಎಸ್ ಅಭ್ಯರ್ಥಿ ಎಂ ರವೀಂದ್ರನಾಥ್ ಮತದಾರರಲ್ಲಿ ಮನವಿ ಮಾಡಿದರು. ಸಣ್ಣ ನೀರಾವರಿ ಇಲಾಖೆಯಲ್ಲಿ ನಾನು ಮುಖ್ಯ ಇಂಜಿನಿಯರ್ ಆಗಿದ್ದಾಗ ತಾಲೂಕಿನಲ್ಲಿ ಸಾಕಷ್ಟು ಚೆಕ್ ಡ್ಯಾಂ ಮಾಡಿದ್ದೇನೆ. ಇದರಿಂದಾಗಿ ಇಂದು ಬಹುತೇಕ ಕಡೆ ಅಂತರ್ಜಲ ವೃದ್ಧಿಸಿದೆ. ರಸ್ತೆ, ಸೇತುವೆ ಸೇರಿದಂತೆ ಹೆಚ್ಚಿನ ಕೆಲಸ ಮಾಡಿದ್ದೇನೆ. ಅಲ್ಲದೆ ನಾನು ಸ್ಥಳೀಕನಾಗಿದ್ದು ಹೊರಗಿನವರಿಗೆ ಅವಕಾಶ ಮಾಡಿಕೊಡಬೇಡಿ. ನಿಮ್ಮ ಮನೆ ಮಗನಿಗೆ ಮತನೀಡಿ ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿ ನೀವು ಆಶೀರ್ವಾದಿಸಿದರೆ ಚುರುಣೆಯಾಗಿರುತ್ತೇನೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಪ್ರಚಾರದಲ್ಲಿ ತೊಡಗಿದ್ದರು.