i
ಜೇನುಗಾರಿಕೆ ತರಬೇತಿ ಮೇ 20 ರಂದು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೋಟಗಾರಿಕಾ ಇಲಾಖೆ ವತಿಯಿಂದ ವಿಶ್ವಜೇನು ದುಂಬಿ ದಿನವನ್ನು ಮೇ 20 ರಂದು ಪ್ರತಿವರ್ಷ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಜೇನು ಸಾಕಣೆ ಕುರಿತು ಒಂದು ದಿನದ ತರಬೇತಿಯನ್ನು ಬೆಂಗಳೂರಿನ ಲಾಲ್ಬಾಗ್ ತರಬೇತಿ ಕೇಂದ್ರದಲ್ಲಿ ಇದೇ 20 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಆಯೋಜಿಸಲಾಗಿದೆ.
ತರಬೇತಿಯಲ್ಲಿ ವೈಜ್ಞಾನಿಕ ಜೇನುಸಾಕಾಣಿಕೆ ವಿಧಾನ, ಜೇನು ಕುಟುಂಬಗಳ ನಿರ್ವಹಣೆ, ಜೇನುಕೊಯ್ಲು, ಜೇನು ಮತ್ತು ಅದರ ಉಪ ಉತ್ಪನ್ನಗಳ ಬಳಕೆ ಕುರಿತು ಮಾಹಿತಿ ನೀಡಲಾಗುವುದು. ತರಬೇತಿ ಉಚಿತವಾಗಿದೆ.
ತರಬೇತಿಯಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು ತೋಟಗಾರಿಕೆ ಅಪರ ನಿರ್ದೇಶಕರು, ತಾಳೆಬೆಳೆ ವಿಭಾಗ, ಲಾಲ್ಬಾಗ್ ಬೆಂಗಳೂರು -04 ರವರ ಕಛೇರಿಗೆ ಮೇ 19 ಮಧ್ಯಾಹ್ನ 12.30 ಗಂಟೆಯೊಳಗೆ ಭೇಟಿ ನೀಡಿ ದೃಢೀಕರಿಸಬಹುದು. ಅಥವಾ ಇ-ಮೇಲ್ additionaldirectorpodp@gmail. com ಮೂಲಕ ದೃಢೀಕರಿಸಬಹುದಾಗಿದೆ ಎಂದು ತಾಳೆಬೆಳೆ ಯೋಜನೆಯ ತೋಟಗಾರಿಕೆ ಅಪರ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕಾ ಇಲಾಖೆ ವತಿಯಿಂದ ವಿಶ್ವಜೇನು ದುಂಬಿ ದಿನವನ್ನು ಮೇ 20 ರಂದು ಪ್ರತಿವರ್ಷ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಜೇನು ಸಾಕಣೆ ಕುರಿತು ಒಂದು ದಿನದ ತರಬೇತಿಯನ್ನು ಬೆಂಗಳೂರಿನ ಲಾಲ್ಬಾಗ್ ತರಬೇತಿ ಕೇಂದ್ರದಲ್ಲಿ ಇದೇ 20 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಆಯೋಜಿಸಲಾಗಿದೆ.
ತರಬೇತಿಯಲ್ಲಿ ವೈಜ್ಞಾನಿಕ ಜೇನುಸಾಕಾಣಿಕೆ ವಿಧಾನ, ಜೇನು ಕುಟುಂಬಗಳ ನಿರ್ವಹಣೆ, ಜೇನುಕೊಯ್ಲು, ಜೇನು ಮತ್ತು ಅದರ ಉಪ ಉತ್ಪನ್ನಗಳ ಬಳಕೆ ಕುರಿತು ಮಾಹಿತಿ ನೀಡಲಾಗುವುದು. ತರಬೇತಿ ಉಚಿತವಾಗಿದೆ.
ತರಬೇತಿಯಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು ತೋಟಗಾರಿಕೆ ಅಪರ ನಿರ್ದೇಶಕರು, ತಾಳೆಬೆಳೆ ವಿಭಾಗ, ಲಾಲ್ಬಾಗ್ ಬೆಂಗಳೂರು -04 ರವರ ಕಛೇರಿಗೆ ಮೇ 19 ಮಧ್ಯಾಹ್ನ 12.30 ಗಂಟೆಯೊಳಗೆ ಭೇಟಿ ನೀಡಿ ದೃಢೀಕರಿಸಬಹುದು. ಅಥವಾ ಇ-ಮೇಲ್ additionaldirectorpodp@gmail.