i
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಅಕ್ರಮ–ಕೆ.ಎಸ್.ನವೀನ್…
ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆ ಕುಣಿಗಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ರಂಗನಾಥ್ ರವರು ಗಿಫ್ಟ್ ಕಾರ್ಡನ್ನು ನೀಡುವ ಮೂಲಕ ಕಾಂಗ್ರೆಸ್ ಅಕ್ರಮ ಎಸಗಿ ಗೆದ್ದಿದೆ ಎಂದು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಗಂಭೀರ ಆರೋಪ ಮಾಡಿದರು.
ತುಮಕೂರಿನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಮತದಾನ ಮಾಡುವ ಮತದಾರರಿಗೆ 3000. 5000 ರೂಗಳ ಮುಖ ಬೆಲೆಯ ಗಿಫ್ಟ್ ಕಾರ್ಡ್ ಗಳನ್ನು ನೀಡಿರುತ್ತಾರೆ. ಅದರಲ್ಲಿ ಕೊಡುಗೆಗಳನ್ನು ಪಡೆಯಲು ಆಮಿಷ ರೂಪದಲ್ಲಿ ನೀಡಿರುತ್ತಾರೆ. ಆ ಕಾರ್ಡಿನಲ್ಲಿ ಬಾರ್ ಕೋಡ್ ಗಳನ್ನು ನೀಡಿರುವುದು ಗಿಫ್ಟ್ ಕಾರ್ಡ್ ಹಣ ಬರುವ ರೀತಿ ಎಂದು ತಿಳಿಸಲು ಜನ ಮತದಾರರಿಗೆ ಮೋಸ ಮಾಡಿರುವುದು ತಿಳಿದು ಬಂದಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನುವ ದುರುದ್ದೇಶದಿಂದ ಮತದಾರರಿಗೆ ಆಮಿಷ ಒಡ್ಡಿರುವ ರೀತಿಯಲ್ಲಿ ಮತದಾರರಿಗೆ ಮೋಸ ಮಾಡಿರುವ ರೀತಿ ಕಂಡುಬಂದಿದೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ರಂಗನಾಥ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಮತ್ತು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಓಡಲಾಗುವುದು ಎಂದು ವಿಧಾನ ಪರಿಷತ್ ಶಾಸಕ ನವೀನ್ ತಿಳಿಸಿದರು.
ಈ ರೀತಿಯ ಅಕ್ರಮಗಳನ್ನು ಮಾಡಿರುವ ಕಾಂಗ್ರೆಸ್ ಪಕ್ಷವು ಜನರಿಗೆ ಮೋಸ ಮಾಡಿರುವುದು ಕಣ್ಣೆದುರಿಗೆ ಕಾಣುತ್ತಿದೆ. ಅದರಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಕ್ರಮ ಎಸಗಿರುವ ರೀತಿ ಕಂಡುಬಂದಿದೆ ಎಂದು ದೂರಿದರು.
ಪ್ರಜಾಪ್ರಭುತ್ವದ ಅಡಿಯಲ್ಲಿ ಚುನಾವಣಾ ಆಯೋಗ ನಡೆಸಿದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕೃಷ್ಣಕುಮಾರ್ ರವರು ಸೋತಿರುವುದು ಕಾನೂನಿನ ವಿರೋಧವಾಗಿದೆ. ಅಕ್ರಮವನ್ನುಮಾಡಿರುವ ಕಾಂಗ್ರೆಸ್ ಪಕ್ಷ ಗೆದ್ದಿದೆ.
ಕುಕ್ಕರ್ಗಳನ್ನು ನೀಡಿರುವುದು ಹಾಗೂ ಮೂರು ಲೋಡ್ ಕುಕ್ಕರುಗಳನ್ನು ಇತರೆ ಗಿಫ್ಟ್ ಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರ ಬಗ್ಗೆ ಕಾನೂನಿನ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಹಿಂದೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ನಕಲಿ ಬಾಂಡ್ ಅನ್ನು ನೀಡಿ ಇದರ ಬಗ್ಗೆ ನ್ಯಾಯಾಲಯದಲ್ಲಿ ನೀಡಿದ ತೀರ್ಪಿನ ಅನ್ವಯ ಎಂದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸುರೇಶ್ ಗೌಡರು ಜಯಗಳಿಸಿದರು ಎಂದು ತಿಳಿಸಿದರು. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವಂತಹ ಈ ರೀತಿಯ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಿರುವುದು ತುಂಬಾ ನೋವಿನ ಸಂಗತಿ. ಕಾಂಗ್ರೆಸ್ ನೈತಿಕವಾದ ಮತವನ್ನು ಕೇಳಲು ಆಗುವುದಿಲ್ಲ ಸುಳ್ಳಿನ ಆಶ್ವಾಸನೆಗಳನ್ನು ಚುನಾವಣೆಯಲ್ಲಿ ಮತದಾರರಿಗೆ ನೀಡುವ ಮೂಲಕ ಗೆಲುವು ಸಾಧಿಸಿರುವುದು ಕಾಂಗ್ರೆಸ್ ಪಕ್ಷದ ದಾಖಲೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕುಣಿಗಲ್ ಮಂಡಲದ ಅಧ್ಯಕ್ಷ ಬಲರಾಮ್, ಕುಣಿಗಲ್ ವಿಧಾನ ಸಭಾ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್, ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಹೆಬ್ಬಾಕ ರವಿ, ಚಿದಾನಂದ್, ಯುವ ಮೋರ್ಚಾ ಅಧ್ಯಕ್ಷ ಯಶಸ್ ಮತ್ತಿತರರು ಇದ್ದರು.