i
ಬರವಣಿಗೆ ಆಸಕ್ತಿ ಮೂಡಿಸಲು ಢಾಯಿ ಆಖರ್…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಇತ್ತೀಚಿನ ದಿನಗಳಲ್ಲಿ ಪತ್ರ ಬರೆಯುವರು ಕಡಿಮೆಯಾದ ಹಿನ್ನೆಲೆಯಲ್ಲಿ ಅದನ್ನು ಪುನಃ ಜನರಿಗೆ ಬರವಣಿಗೆ ಮೂಲಕ ತಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಹೊಸ ಯೋಜನೆಯೊಂದನ್ನು ರೂಪಿಸಿದೆ ಎಂದು ದಾವಣಗೆರೆ ಅಂಚೆ ಅಧೀಕ್ಷಕ ಚಂದ್ರಶೇಖರ್ ತಿಳಿಸಿದ್ದಾರೆ.ಬರವಣಿಗೆಯಲ್ಲಿ ಆಸಕ್ತಿ ಮೂಡಿಸುವುದಕ್ಕಾಗಿ ಭಾರತೀಯ ಅಂಚೆ ಇಲಾಖೆಯು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪತ್ರಲೇಖನ ಸ್ಪರ್ಧೆಯನ್ನು ಏರ್ಪಡಿಸಲಿದೆ. ಪ್ರತಿಯೊಬ್ಬ ಭಾರತೀಯರು ಯಾವುದೇ ವಯೋಮಿತಿ ನಿರ್ಬಂಧವಿಲ್ಲದೆ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಮಹಾಪುರುಷ (ಮಹಾತ್ಮ ಗಾಂಧೀಜಿ) ನೀವು ನಮ್ಮ ಸ್ಫೂರ್ತಿ (ಈ ವಿಷಯ ಸಂತ ಕಬೀರರ ಢಾಯಿ ಅಕ್ಷರ ಪ್ರೇಮ ರಾ ಇವರಿಂದ ಆಧಾರಿತವಾಗಿದೆ) ಸ್ಪರ್ಧೆಯ ವಿಷಯವಾಗಿದೆ. ಸ್ಪರ್ಧೆಯ ಪತ್ರವನ್ನು ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಬರೆಯಬಹುದಾಗಿದೆ. ಪತ್ರ ಲೇಖನವು ಎ-4 ಸೈಜ್ ಪೇಪರಿನಲ್ಲಿ ಗರಿಷ್ಠ 1000 ಪದಗಳಿಗೆ ಮೀರದಂತೆ ಮತ್ತು ಇನ್ಲ್ಯಾಂಡ್ ಲೇಟರಿನಲ್ಲಿ 500 ಪದಗಳಿಗೆ ಮೀರದಂತೆ ಬರೆಯಬೇಕು. ಸ್ಪರ್ಧೆಯು 18 ವರ್ಷದ ವಯೋಮಿತಿ ಕೆಳಗಿನವರಿಗಾಗಿ ಮತ್ತು 18 ವರ್ಷ ವಯೋಮಿತಿ ಮೇಲ್ಪಟವರಿಗಾಗಿ ಎರಡು ವಿಭಾಗಗಳಲ್ಲಿ ನಡೆಯುತ್ತದೆ. ರಾಜ್ಯಮಟ್ಟದಲ್ಲಿ ಪುರಸ್ಕೃತಗೊಂಡ ಪತ್ರವನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ರಾಜ್ಯಮಟ್ಟದ ಪ್ರಥಮ ಬಹುಮಾನಕ್ಕೆ 25,000 ರೂ., ದ್ವಿತೀಯ ಬಹುಮಾನ 10,000ರೂ., ತೃತೀಯ ಬಹುಮಾನ 5,000ರೂ. ಹಾಗೂ ರಾಷ್ಟ್ರಮಟ್ಟದ ಪ್ರಥಮ ಬಹುಮಾನಕ್ಕೆ 50,000 ರೂ., ದ್ವಿತೀಯ ಬಹುಮಾನ 25,000 ರೂ. ಹಾಗೂ ತೃತೀಯ ಬಹುಮಾನ 10,000 ರೂ. ನೀಡಲಾಗುವುದು.18 ವರ್ಷ ಕೆಳಗಿನವರು ಹಾಗೂ 18 ವರ್ಷ ಮೇಲ್ಪಟ್ಟನವರು ಎಂದು ಕಡ್ಡಾಯವಾಗಿ ನಮೂದಿಸಿ ಪತ್ರ ಲೇಖನ ಸ್ಪರ್ಧೆಯ ಪತ್ರವನ್ನು ಚ್ೀ ಪೋಸ್ಟ್ ಮಾರ್ಸ್ಟ ಸೆಂಟ್ರಲ್, ಕರ್ನಾಟಕ ಸರ್ಕಲ್, ಬೆಂಗಳೂರು ಕಚೇರಿಗೆ ಅ.31, 2023ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕಾಗಿದ್ದುಘಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.