i
ಕೋಟೆ ನಾಡಿನ ಕನ್ನಡಿಗರು ಸಂಸತ್ ಭವನದಲ್ಲಿ 50ನೇ ಕನ್ನಡ ರಾಜ್ಯೋತ್ಸವ ಆಚರಣೆ…
ಚಂದ್ರವಳ್ಳಿ ನ್ಯೂಸ್, ನವದೆಹಲಿ: 50th Kannada Rajyotsava celebrations at Kote Nadi Kannadigas Sansad Bhavan…
ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಚಿತ್ರದುರ್ಗದ ಯುವಕರು ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರದ ಅಮೃತ ಮಹೋತ್ಸವದ ಅಂಗವಾಗಿ ಆಯೋಜನೆ ಮಾಡಿರುವ ನನ್ನ ದೇಶ, ನನ್ನ ಮಣ್ಣು, ಕಾರ್ಯಕ್ರಮವನ್ನು ಮುಗಿಸಿಕೊಂಡು ನಂತರ ಸಂಸತ್ ಭವನಕ್ಕೆ ಭೇಟಿ ನೀಡಿದರು.
ಆ ಸಂದರ್ಭದಲ್ಲಿ 50ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿಲಾಯಿತು.
ಈ ಸಂದರ್ಭದಲ್ಲಿ ಚಿತ್ರದುರ್ಗದ ನೆಹರು ಯುವ ಕೇಂದ್ರದ ಸ್ವಯಂ ಸೇವಕರು ಹಾಗೂ ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಚಿತ್ರದುರ್ಗದ ಅಧ್ಯಕ್ಷ ಕರಿಯಣ್ಣ.ಡಿ, ಗೌತಮ್, ವರುಣ್, ಚಂದನ್ ಕುಮಾರ್, ಸುನೀತ.ಎ, ನಯನ, ಸಿರಿ, ಸುಮ.ಎ ಇವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.