i
ನವೆಂಬರ್-17 ರಿಂದ ಕೃಷಿ ಮೇಳ-ಪ್ರೋಮೋ ಬಿಡುಗಡೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿಮೇಳ-2023ರ ಪ್ರೋಮೋವನ್ನು ಕುಲಪತಿ ಡಾ.ಎಸ್.ವಿ. ಸುರೇಶರವರು ಅನಾವರಣಗೊಳಿಸಿದರು. ನಾಡಿನಖ್ಯಾತ ಸಂಗೀತ ನಿರ್ದೇಶಕರಾದ ಡಾ. ಹಂಸಲೇಖರವರು ಕೃಷಿಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮೇಳವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಕೃಷಿಕರನ್ನು, ಸಾರ್ವಜನಿಕರನ್ನು ಪ್ರೋಮೋ ಮೂಲಕ ಆಹ್ವಾನಿಸಿರುತ್ತಾರೆ.
ಪ್ರೋಮೋ ಉದ್ಘಾಟಿಸಿದ ವಿ.ವಿ.ಯ ಕುಲಪತಿಗಳು ನವೆಂಬರ್ 17ರಿಂದ 20ರವರೆಗೆ ಆಯೋಜಿಸಿರುವ ಈ ಮೇಳದಲ್ಲಿ ಇದೇ ಮೊದಲ ಬಾರಿಗೆ ಸಿರಿಧಾನ್ಯಗಳ ಆಹಾರಮೇಳ ಹಾಗೂ ಬೀಜ ಸಂತೆ ಆಯೋಜಿಸಲಾಗಿದ್ದು, ವಿಶ್ವವಿದ್ಯಾನಿಲಯವು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರ ನಿರೀಕ್ಷೆಯಲ್ಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್. ಮಧುಪ್ರಸಾದ್, ಡೀನ್ ಕೃಷಿ ಡಾ.ಎನ್. ಬಿ.ಪ್ರಕಾಶ್, ಡೀನ್ ಸ್ನಾತಕೋತ್ತರ ಡಾ. ಹೆಚ್. ಸಿ. ಪ್ರಕಾಶ್, ಸಹ ಸಂಶೋಧನಾ ನಿರ್ದೇಶಕಿ ಡಾ. ಉಮಾ, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ಮುಖ್ಯಸ್ಥರಾದ ಡಾ.ಕೆ. ಪಿ. ರಘುಪ್ರಸಾದ್ ಹಾಗೂ ತೋಟಗಾರಿಕೆ ತಜ್ಞೆ ಡಾ. ಎಂ.ಶಾಲಿನಿ, ಮತ್ತಿರರು ಉಪಸ್ಥಿತರಿದ್ದರು.