i
ಸಜ್ಜನ ರಾಜಕಾರಣಿ, ಸಮಾಜ ಸೇವಕ ಮೀರಾಸಾಬಿಹಳ್ಳಿ ಎನ್.ಭೀಮಪ್ಪ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜೆಡಿಎಸ್ ರಾಜ್ಯ ಕಾರ್ಯಕಾರಿ ಸದಸ್ಯ ಮೀರಾಸಾಬಿಹಳ್ಳಿ ಎನ್.ಭೀಮಪ್ಪ(85) ಗುರುವಾರ ನಿಧನರಾಗಿದ್ದಾರೆ.
ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತರ ಅಂತ್ಯ ಕ್ರಿಯೆ ಮೀರಾಸಾಬಿಹಳ್ಳಿಯ ತೋಟದಲ್ಲಿ ಗುರುವಾರ ಸಂಜೆ 4 ಗಂಟೆ ನಂತರ ನೆರವೇರಿಸಲಾಗುವುದು ಎಂದು ಪುತ್ರರಾದ ಎನ್.ಬಿ.ಪ್ರಸಾದ್, ಎನ್.ಬಿ.ಲೋಕನಾಥ್ ತಿಳಿಸಿದ್ದಾರೆ.ಸಜ್ಜನ ರಾಜಕಾರಣಿ- ಸಮಾಜ ಸೇವಕ-
ಮೀರಾಸಾಬಿಹಳ್ಳಿ ಎನ್.ಭೀಮಪ್ಪ ಅವರು ಸಜ್ಜನ ರಾಜಕಾರಣಿಯಾಗಿದ್ದರಲ್ಲದೆ ನಿಸ್ವಾರ್ಥತೆಯಿಂದ ಸಮಾಜ ಸೇವೆ ಮಾಡಿಕೊಂಡು ಬಂದಿದ್ದರು. ಜಾತ್ಯಾತೀತ ಜನತಾದಳದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ರಾಣಿಕೆರೆ ಗ್ರಾಮಾಂತರ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿ, ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಚಳ್ಳಕೆರೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ, ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷರು, ಚಳ್ಳಕೆರೆ ತಾಲ್ಲೂಕು ಸೊಸೈಟಿ ಅಧ್ಯಕ್ಷ, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳಾಗಿ ಸಾಕಷ್ಟು ಜನಪರ ಸೇವೆಯನ್ನು ಮಾಡಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದರೂ, ಪ್ರವೃತ್ತಿಯಲ್ಲಿ ಸಜ್ಜನ ರಾಜಕಾರಣಿಯಾಗಿ ಇಡೀ ಜೀವನವನ್ನು ನಿಸ್ವಾರ್ಥ ಸೇವೆಯಲ್ಲಿ ಕರ್ಮಯೋಗಿಯಂತೆ ಸವೆಸಿದ್ದು ಇವರ ಸಾರ್ಥಕ ಜೀವನವಾಗಿದೆ, ಇವರ ನಿಧನದಿಂದ ಸಮಾಜ ಮತ್ತು ಪಕ್ಷಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ಅನೇಕರು ಕಂಬನಿ ಮಿಡಿದ್ದಾರೆ.