i
ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ರುದ್ರಮೂರ್ತಿ, ಉಪಾಧ್ಯಕ್ಷರಾಗಿ ಲಲಿತಮ್ಮ ಆಯ್ಕೆ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೋನೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ರುದ್ರಮೂರ್ತಿ.ಕೆ.ವೈ ಸಂಘದ ಅಧ್ಯಕ್ಷರಾಗಿ ಹಾಗೂ ಲಲಿತಮ್ಮ ಉಪಾಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ.
ಕೋನೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 13 ಅಭ್ಯರ್ಥಿಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಿಂದ ಅಭ್ಯರ್ಥಿಗಳು ನಾಮಪತ್ರ ಹಾಕದ ಹಿನ್ನಲೆ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ ಎಲ್ಲರು ಅವಿರೋಧವಾಗಿ ಅಯ್ಕೆಯಾಗುವ ಮೂಲಕ ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದಾರೆ.
ಕೋನೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರನ್ನ ಅಭಿನಂದಿಸಲಾಗಯಿತು.
ಕೋನೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ರಂಗಮ್ಮ ಕಂಗಳಾಪುರ, ಲಲಿತಮ್ಮ ಕಂಗಳಾಪುರ, ಚೆನ್ನಪ್ಪ ಕಂಗಳಾಪುರ, ಮಾರುತಿ ಕಂಗಳಾಪುರ, ಬನಪ್ಪ ಕಂಗಳಾಪುರ, ಗಂಗಯ್ಯ ಜ್ಯೋತಿಪುರ, ಅನುರಾಧ ಕೆ ಕೋನೇನಹಳ್ಳಿ, ಯತೀರಾಜು ಕೋನೇನಹಳ್ಳಿ, ರುದ್ರಮೂರ್ತಿ ಕೆ ವೈ. ಕೋನೇನಹಳ್ಳಿ, ಅನಿಲ್ ಕುಮಾರ್ ಕೆ ಕೋನೇನಹಳ್ಳಿ, ಚಂದ್ರಶೇಖರ್ ಕೆ ಎನ್ ಕೋನೇನಹಳ್ಳಿ, ರುದ್ರಪ್ಪ ಕೋನೇನಹಳ್ಳಿ, ಯಡಿಯೂರಪ್ಪ ಕೋನೇನಹಳ್ಳಿ ಇವರುಗಳು ಹಾಜರಿದ್ದರು.