i
ರೈತಾಪಿ ಮಹಿಳೆಯರು ಕುಮಾರಸ್ವಾಮಿಗೆ ರಾಗಿ ತೆನೆ ನೀಡಿ ಅಕ್ಕರೆ ಮೆರೆದ ಕ್ಷಣ ಅದ್ಭುತ…
ಚಂದ್ರವಳ್ಳಿ ನ್ಯೂಸ್, ಕೋಲಾರ:
ಪಂಚರತ್ನ ರಥಯಾತ್ರೆ ನಿಮಿತ್ತ ಬಂಗಾರಪೇಟೆ ಕ್ಷೇತ್ರಕ್ಕೆ ತೆರಳುವ ಮಾರ್ಗದ ನಡುವೆ ಭೇಟಿಯಾದ ರೈತಾಪಿ ತಾಯಂದಿರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಗಿ ತೆನೆ ನೀಡಿ ಸಂಭ್ರಮಿಸಿದರು.
ಅವರ ಅಕ್ಕರೆ, ವಾತ್ಸಲ್ಯಕ್ಕೆ ನಾಚಿ ನೀರಾದ ಕುಮಾರಸ್ವಾಮಿ ಅವರು ಸದಾ ಮಹಿಳೆಯರು ಮತ್ತು ಈರಾಜ್ಯದ ಜನತೆಗೆ ಚಿರಋಣಿಯಾಗಿರುವೆ ಎಂದರು.
ಕೋವಿಡ್ ಸಂಕಷ್ಟದಲ್ಲಿ ತತ್ತರಿಸಿರುವ ರೈತರು ಸ್ತ್ರೀ ಶಕ್ತಿ ಸಂಘಗಳಿಂದ ಪಡೆದಿರುವ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದರು.
ಪಂಚರತ್ನ ರಥಯಾತ್ರೆ ತಂಬಿಹಳ್ಳಿ ಗ್ರಾಮದ ಮೂಲಕ ಬಂಗಾರಪೇಟೆ ವಿಧಾನಸಭೆ ಕ್ಷೇತ್ರ ಪ್ರವೇಶ ಮಾಡಿದ ವೇಳೆ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಬಾಬು ಹಾಗೂ ಅಪಾರ ಕಾರ್ಯಕರ್ತರು ನಮ್ಮನ್ನು ಬರ ಮಾಡಿಕೊಂಡರು.
ಈ ಸಂದರ್ಭದಲ್ಲಿ ನೂರಾರು ಬೈಕ್ ಗಳ ರ್ಯಾಲಿ ಮಾಡಲಾಯಿತು. ದಾರಿ ಮಧ್ಯ ವಯೋವೃದ್ಧ ದಂಪತಿಗಳು ಭೇಟಿಯಾಗಿ ಆಶೀರ್ವಾದಿಸಿ 2023ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವಂತೆ ಆರೈಕೆ ಮಾಡಿದರು.