i
ಕಾಂಗ್ರೆಸ್-ಬಿಜೆಪಿ ತೊರೆದು ಜೆಡಿಎಸ್ ಸೇರಿದ ಮುಖಂಡರು…
ಚಂದ್ರವಳ್ಳಿ ನ್ಯೂಸ್, ಆನೇಕಲ್:
ಆನೇಕಲ್ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಕೆ ಪಿ ರಾಜು ರವರ ಸಮ್ಮುಖದಲ್ಲಿ ಸರ್ಜಾಪುರ, ಹುಸ್ಕೂರು, ನೆರಳೂರು ಗ್ರಾಮಗಳ ಯುವಕರು ಹಾಗೂ ಮಹಿಳೆಯರು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಅಧಿಕೃತವಾಗಿ ಜಾತ್ಯತೀತ ಜನತಾದಳ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಅಭ್ಯರ್ಥಿ ರಾಜು ಅವರು ಜೆಡಿಎಸ್ ಬಾವುಟ ನೀಡಿ ಎಲ್ಲರನ್ನು ಬರಮಾಡಿಕೊಂಡರು. ಪಕ್ಷದ ಗೆಲುವಿಗಾಗಿ ಅಗಲಿರುಳು ದುಡಿಯುವುದಾಗಿ ಮುಖಂಡರು, ಮಹಿಳೆಯರು ವಾಗ್ದಾನ ಮಾಡಿದರು.