i
ಕರ್ನಾಟಕ ಬಸ್ ಮಾಲೀಕ ಮಂಜಣ್ಣ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಬಸ್ ಮಾಲೀಕರಾದ ದುಮ್ಮಿ ಮಂಜುನಾಥ್ ಅಲಿಯಾಸ್ ಮಂಜಣ್ಣ(83)ನವರು ಮಂಗಳವಾರ ಬೆಳಿಗ್ಗೆ ವಿಧಿವಶವಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಅವರ ಸ್ವಗೃಹ ವಿಪಿ ಬಡಾವಣೆಯ ಮೊದಲೇ ಕ್ರಾಸ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಜ.17ರಂದು ಮಂಗಳವಾರ ಸಂಜೆ 4.30ಕ್ಕೆ ಚಿತ್ರದುರ್ಗ ನಗರದ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂತಾಪ: ಕರ್ನಾಟಕ ಬಸ್ ಮಾಲೀಕರಾದ ಮಂಜುನಾಥ್ ಅವರ ಅಗಲಿಕೆಯಿಂದ ಲಿಂಗಾಯಿತ ವೀರಶೈವಕ್ಕೆ ಅಪಾರ ನಷ್ಟವಾಗಿದೆ. ಮೃತರು ವಿವಿಧ ಗ್ರಾಮೀಣ ಭಾಗಗಳಲ್ಲಿ ಲಾಭ ನಷ್ಟ ಲೆಕ್ಕಾಚಾರ ಹಾಕದೆ ಸಾರಿಗೆ ಬಸ್ ಓಡಿಸುವ ಮೂಲಕ ಸಾಕಷ್ಟು ಜನ ಸೇವೆ ಮಾಡಿದ್ದಾರೆ. ಅವರ ಅಗಲಿಕೆ ಕುಟುಂಬದವರಿಗೆ ದಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಜಿಲ್ಲಾ ಲಿಂಗಾಯಿತ ವೀರಶೈವ ಸಮಾಜದ ಅಧ್ಯಕ್ಷ ಮಹಡಿ ಶಿವಮೂರ್ತಿ ದೇವರಲ್ಲಿ ಪ್ರಾರ್ಥಿಸಿ ಸಂತಾಪ ಸೂಚಿಸಿದ್ದಾರೆ.