i
ಗಾಯಿತ್ರಿ ಡ್ಯಾಂ ಪ್ರವಾಸಿಗರ ತಾಣವಾಗಲಿದೆ-ಶಾಸಕಿ ಪೂರ್ಣಿಮಾ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರೈತರ ಜೀವನಾಡಿ ಗಾಯಿತ್ರಿ ಜಲಾಶಯದ ಸಮಗ್ರ ಪುನರುಜ್ಜೀವನ ಕಾರ್ಯಕ್ಕಾಗಿ 12 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದು ಮುಂದೆ ಇದೊಂದು ಪ್ರವಾಸಿಗರ ತಾಣವಾಗಲಿದೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಹಿರಿಯೂರು ತಾಲೂಕು ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಎಸ್ ಸಿ, ಎಸ್ ಟಿ, ಅಲ್ಪಸಂಖ್ಯಾತರ, ಸಾಮಾನ್ಯ ವಸತಿ ಯೋಜನೆಯಡಿ ಶಾಸಕರ ಕೋಟಾದಲ್ಲಿ ಹೆಚ್ಚುವರಿ ಮನೆಗಳ ಆಯ್ಕೆಗಾಗಿ ನಡೆದ ಗ್ರಾಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯೂರು ಕ್ಷೇತ್ರಕ್ಕೆ ಈಗಾಗಲೇ 4 ಸಾವಿರ ಮನೆಗಳು ಬಂದಿವೆ. ಇನ್ನೂ 2 ಸಾವಿರ ಮನೆಗಳು ಬರಲಿವೆ. ಗುಡಿಸಲು ಮುಕ್ತ ಮಾಡುವ ಉದ್ದೇಶ ಇದೆ. ಅಲ್ಲದೆ ರಸ್ತೆ, ಆಸ್ಪತ್ರೆ, ಶಾಲಾ ಕಾಲೇಜ್ ಗಳ ಕಟ್ಟಡಕ್ಕೆಂದು ನೂರಾರು ಕೋಟಿ ರೂ.ಖರ್ಚು ಮಾಡಲಾಗಿದೆ ಎಂದು ಪೂರ್ಣಿಮಾ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಗದಾಂಬ, ಉಪಾಧ್ಯಕ್ಷೆ ವಸಂತ ದೇವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾಲಿಂಗಪ್ಪ, ಜ್ಯೋತಿ, ಅಲ್ತಾಫ್, ಶಬಾನ ಪರ್ವಿನ್, ಕೇಶವಮೂರ್ತಿ, ಶೋಭಾ, ಕಾಳಿಬಾಯಿ ಮುಂತಾದವರು ಉಪಸ್ಥಿತರಿದ್ದರು.
ಕರಿಯಾಲ: ಹಿರಿಯೂರು ತಾಲೂಕು ಕರಿಯಾಲ ಗ್ರಾಮ ಪಂಚಾಯಿತಿ ಆವರಣದಲ್ಲಿ ಎಸ್ ಸಿ, ಎಸ್ ಟಿ, ಅಲ್ಪಸಂಖ್ಯಾತರ, ಸಾಮಾನ್ಯ ವಸತಿ ಯೋಜನೆಯಡಿ ಶಾಸಕರ ಕೋಟಾದಲ್ಲಿ ಹೆಚ್ಚುವರಿ ಮನೆಗಳ ಆಯ್ಕೆಗಾಗಿ ನಡೆದ ಗ್ರಾಮ ಸಭೆಯನ್ನು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರಪ್ಪ, ಉಪಾಧ್ಯಕ್ಷೆ ಸಾಕಮ್ಮ ರಾಜಾನಾಯ್ಕ್, ಸದಸ್ಯರಾದ ಬಸವರಾಜು, ಕುಮಾರ್ ನಾಯ್ಕ, ಭಾಗ್ಯಮ್ಮ ವೀರೇಶ್, ರಾಜಮ್ಮ ಬಸವರಾಜು, ಸುಶೀಲಮ್ಮ ಈರಣ್ಣ, ವೆಂಕಟೇಶ್, ಈರಣ್ಣ, ಲಕ್ಕಮ್ಮ, ಪ್ರಸನ್ನ ಕುಮಾರ್, ಮಂಜುಳಾ ಮಹಾಲಿಂಗಪ್ಪ, ಮಂಜುಳಾ ಶ್ರೀನಿವಾಸ ಮಾಜಿ ಅಧ್ಯಕ್ಷ ಜಯಣ್ಣ, ಮುಖಂಡರಾದ ಗೋಪಾಲಪ್ಪ, ದೇವರಾಜ್, ಶಿವು, ನಾಗರಾಜ್, ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.